ಟೀಂ ಇಂಡಿಯಾಗೆ ಭಾರವಾಗುತ್ತಿದ್ದಾರೆ ಭುವಿ
ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ತಂಡಕ್ಕೆ ಹೊರೆಯಾಗುತ್ತಿದ್ದಾರೆ. ಒಂದು ಕಾಲದಲ್ಲಿ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಮುಂಚೂಣಿ ಬೌಲರ್ ಆಗಿದ್ದ ಭುವಿಗೆ ಈಗ ಆ ಮಟ್ಟದಲ್ಲಿ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಏಕದಿನ ಪಂದ್ಯಗಳಲ್ಲಿ 18 ಓವರ್ ಬೌಲ್ ಮಾಡಿದ ಭುವನೇಶ್ವರ್ 7.27 ಎಕಾನಮಿಯೊಂದಿಗೆ 131 ರನ್ ಬಿಟ್ಟುಕೊಟ್ಟು ಒಂದೇ ಒಂದು ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಕೆಲ ಕಾಲ ತಂಡದಿಂದ ಹೊರಗುಳಿದಿದ್ದ ಭುವನೇಶ್ವರ್ ಕಳೆದ ವರ್ಷ ಐದು ಏಕದಿನ ಪಂದ್ಯಗಳಲ್ಲಿ ಒಂಬತ್ತು ವಿಕೆಟ್ ಪಡೆದಿದ್ದರು.
ವಾಸ್ತವವಾಗಿ ಇದು ಉತ್ತಮ ಪ್ರದರ್ಶನವಾಗಿದ್ದರೂ, ಭುವಿಗೆ ಹಿಂದಿನ ಫಾರ್ಮ್ ನಲ್ಲಿ ಕಾಣಿಸುತ್ತಿಲ್ಲ. ಒಂದು ಕಾಲದಲ್ಲಿ .. ಡೆತ್ ಓವರ್ ಗಳಲ್ಲಿ ವಿಕೆಟ್ ಕಬಳಿಸುವುದು .. ಅವರ ಕೋಟಾ ಬೌಲಿಂಗ್ ನಲ್ಲಿ ಹೆಚ್ಚು ಡಾಟ್ ಬಾಲ್ ಎಸೆಯುವುದು..
ವಿಕೆಟ್ ಟು ವಿಕೆಟ್ ಬೌಲಿಂಗ್ ಮಾಡುವುದು ಭುವನೇಶ್ವರ್ ಅವರ ವಿಶೇಷತೆಯಾಗಿತ್ತು. 2022 ಕ್ಕೂ ಮೊದಲು 42.6 ರಷ್ಟಿದ್ದ ಭುವಿ, ಡಾಟ್ಬಾಲ್ ಶೇಕಡಾವಾರು ಈಗ 61.5 ಕ್ಕೆ ಏರಿದೆ. ಪರಿಸ್ಥಿತಿ ಹೀಗೆ ಮುಂದುವರಿದರೇ 2022ರ ಟಿ20 ವಿಶ್ವಕಪ್ ವರೆಗೂ ಭುವನೇಶ್ವರ್ ಟೀಂ ಇಂಡಿಯಾ ತಂಡದಲ್ಲಿ ಇರುವುದು ಕಷ್ಟ ಎನ್ನಲಾಗುತ್ತಿದೆ.
ಅದರಲ್ಲೂ ಭುವನೇಶ್ವರ್ ಕುಮಾರ್ ಗೆ ಕೋಕ್ ನೀಡಿ ಯುವ ಪ್ರತಿಭೆ ದೀಪಕ್ ಚಹರ್ ಚಾನ್ಸ್ ನೀಡಬೇಕು ಎನ್ನುವ ಮಾತುಗಳು ಕೂಡ ಕೇಳಿಬರುತ್ತಿದೆ.
ದೀಪಕ್ ಬ್ಯಾಟಿಂಗ್ ನಲ್ಲೂ ಮಿಂಚುವ ಆಟಗಾರನಾಗಿದ್ದು, ತಂಡಕ್ಕೆ ಉಪಯುಕ್ತವಾಗಲಿದೆ ಎಂದು ಕ್ರಿಕೆಟ್ ಪಂಡಿತರು ಅಂದಾಜಿಸುತ್ತಿದ್ದಾರೆ.
ಇನ್ನು ಭುವನೇಶ್ವರ್ ಟೀಂ ಇಂಡಿಯಾ ಪರ 21 ಟೆಸ್ಟ್ ಪಂದ್ಯಗಳಲ್ಲಿ 63 ವಿಕೆಟ್, 121 ಏಕದಿನ ಪಂದ್ಯಗಳಲ್ಲಿ 141 ವಿಕೆಟ್ ಹಾಗೂ 55 ಟಿ20 ಪಂದ್ಯಗಳಲ್ಲಿ 53 ವಿಕೆಟ್ ಪಡೆದಿದ್ದಾರೆ.