BIGGBOSS 8 : 9ನೇ ವಾರ ಮನೆಯಿಂದ ಹೊರ ಹೋಗುವವರು ಯಾರು ಗೊತ್ತಾ..?
ಬೆಂಗಳೂರು : ದಿನಗಳು ಉರುಳಿದಂತೆಲ್ಲಾ ಸ್ಟ್ರಾಂಗ್ ಕಂಟೆಂಡರ್ ಗಳಿಗೂ ಎಲಿಮಿನೇಷನ್ ಭೀತಿ ಹೆಚ್ಚಾಗ್ತಿದೆ. 9ನೇ ವಾರದ ಎಲಿಮಿನೇಷನ್ ರೌಂಡ್ ಕೂಡ ಸನಿಹಕ್ಕೆ ಬಂದಿದ್ದು, ಇಂದು ಮನೆಯಿಂದ ಆಚೆ ಹೋಗೋರ್ಯಾರು ಸೇಫ್ ಆಗೋರ್ಯಾರು ಅನ್ನೋ ಲೆಕ್ಕಾಚಾರಗಳು ಜನರ ತಲೆಯಲ್ಲಿ ಓಡಾಡುತ್ತಿದೆ.
ನಾಮಿನೇಟ್ ಆಗಿರುವವರಲ್ಲಿ ಮಂಜು ಪಾವಗಡ , ಅರವಿಂದ್ , ಚಕ್ರವರ್ತಿ , ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ಇದ್ದಾರೆ. ಇವರಲ್ಲಿ ಯಾರು ಹೋಗಬಹುದು ಯಾರು ಉಳಿದುಕೊಳ್ಳಬಹುದು ಕಾರಣ ಏನಿರಬಹುದು ಎಂಬುದನ್ನ ನಾವು ಮಾತನಾಡೋದಾದ್ರೆ…
ಸೇಫ್ ಆಗಬಹುದಾದ ಸ್ಪರ್ಧಿಗಳು
- ಪಾವಗಡ ಮಂಜು – ಮಂಜು ಆರಂಭದಿಂದಲೂ ಮನೆಯಲ್ಲಿ ಶಕ್ತಿಶಾಲಿ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದಾರೆ. ಜೊತೆಗೆ ಮನೆಯಲ್ಲಿನ ಸ್ಪರ್ಧಿಗಳು ಹಾಗೂ ಪ್ರೇಕ್ಷಕರನ್ನೂ ಮನರಂಜಿಸುತ್ತಾ ಇರುತ್ತಾರೆ. ಆದ್ರೆ ಇತ್ತೀಚೆಗೆ ಎಲ್ಲೋ ಒಂದ್ ಕಡೆ ಅವರು ಸ್ವಲ್ಪ ಸೈಡ್ ಲೈನ್ ಆಗ್ತಿರಬಹುದು. ಇದಕ್ಕೆ ಕಾರಣ ದಿವ್ಯಾ ಸುರೇಶ್ ಅನ್ನೋದು ನೆಟ್ಟಿಗರ ವಾದ… ಆದ್ರೂ ಮಂಜು ಅವರಿಗೆ ಹೊರಗಡೆ ಫ್ಯಾನ್ ಫಾಲೋವರ್ಸ್ ಕಡಿಮೆಯಾಗಿಲ್ಲ.. ಹೀಗಾಗಿ ಮಂಜು ಮನೆಯಿಂದ ಇಷ್ಟು ಬೇಗ ಎಲಿಮಿನೇಟ್ ಆಗುವುದು ಬಹುತೇಕ ಡೌಟು.. ಇನ್ ಫ್ಯಾಕ್ಟ್ ಮಂಜು ಫಿನಾಲೆಗೂ ಬರಬಹುದು ಗೆದ್ದರೂ ಗೆಲ್ಲಬಹುದು…

- ಅರವಿಂದ್ – ಅರವಿಂದ್ ಕೂಡ ಮನೆಯಲ್ಲಿ ಟಾಸ್ಕ್ ಅಂತ ಬಂದ್ರೆ ಎಲ್ಲರಿಗೂ ಪ್ರತಿ ಬಾರಿಯೂ ಟಫ್ ಕಾಂಪಿಟೇಷನ್ ನೀಡಿದ್ದಾರೆ. ಅದ್ರಲ್ಲಿ 2 ಮಾತಿಲ್ಲ.. ಮತ್ತೆ ಅವರ ವ್ಯಕ್ತಿತ್ವೂ ಕೂಡ ಜನರಿಗೆ ತುಂಬಾನೆ ಹಿಡಿಸಿದೆ. ತಮ್ಮ ಕೆಲಸವೆಷ್ಟಿದ್ಯೋ ಅಷ್ಟನ್ನ ಮಾತ್ರ ನೋಡಿಕೊಂಡು ಸುಮ್ಮಿರುತ್ತಾರೆ.. ಸುಖಾಸುಮ್ಮನೇ ಇನ್ನೊಬ್ಬರ ವಿರುದ್ಧ ಕತ್ತಿ ಮಸೆಯಲ್ಲ.. ಇದೇ ಕಾರಣಕ್ಕೆ ಜನರಿಗೆ ಅರವಿಂದ್ ಮೇಲೆ ಗುಡ್ ಇಂಪ್ರೆಶನ್ ಇದೆ. ಸಾಲದಕ್ಕೆ ದಿವ್ಯಾ ಉರುಡುಗ ಜೊತೆಗಿನ ಕ್ಯೂಟ್ ಮೂಮೆಂಟ್ಸ್ ಸಹ ತುಂಬಾ ಜನರ ಗಮನ ಸೆಲೆದಿದೆ. ಹಾಗೆಯೇ ಜವಾಬ್ದಾರಿಯುತವಾಗಿ ನಡೆದುಕೊಳ್ತಾರೆ ಅರವಿಂದ್.. ಇದರ ಹೊರತಾಗಿ ಆರಂಭದಲ್ಲಿ ಸೈಲೆಂಟ್ ಆಗಿದ್ದ ಅರವಿಂದ್ ಇತ್ತೀಚೆಗೆ ಸಿಕ್ಕಾಪಟ್ಟೆ ಲೈಮ್ ಲೈಟ್ ನಲ್ಲಿದ್ದು, ಅರವಿಂದ್ ಸಹ ಮನೆಯಿಂದ ಆಚೆ ಹೋಗುವುದು 99% ಅನುಮಾನ.. ಅಲ್ದೇ ಅರವಿಂದ್ ಗ್ರ್ಯಾಂಡ್ ಫಿನಾಲೆ ವರೆಗೂ ಬರಬಹುದು.

- ಪ್ರಶಾಂತ್ ಸಂಬರಗಿ : ಹಾಗೆ ನೋಡೋದಾದ್ರೆ ಪ್ರಶಾಂತ್ ಸಂಬರಗಿ ಮೇಲೆ ತುಂಬಾ ನೆಗೆಟಿವ್ ಇಂಪ್ರೆಶನ್ ಇರುವುದೇ ಹೆಚ್ಚು.. ಸದಾ ಮನೆಯಲ್ಲಿ ಕಿತ್ತಾಡುತ್ತಾ ಬೇಡದೇ ಇರುವ ವಿಚಾರಗಳಿಗೆ ಮೂಗು ತೂರಿಸಿಕೊಂಡು ಪ್ರತಿಬ್ಬರ ಜೊತೆಗೂ ಕಿರಿಕ್ ಮಾಡಿಕೊಳ್ಳುವ ಸ್ಪರ್ಧಿ ಪ್ರಶಾಂತ್ ಸಂಬರಗಿ.. ಹಾಗೇ ಸಿಕ್ಕಾಪಟ್ಟೆ ಫೋಕಸ್ ಆಗುವ ಸ್ಪರ್ಧಿಯೂ ಹೌದು.. ಸಂಬರಗಿಯನ್ನ ದ್ವೇಷಿಸುವವರ ಜೊತೆ ಹೊರಗಡೆ ಅವರನ್ನ ಬೆಂಬಲಿಸುವವರೂ ಅಷ್ಟೇ ಇದ್ದಾರೆ. ಸಾಲದಕ್ಕೆ ಮನೆಯಲ್ಲಿ ಒಬ್ಬರಾದ್ರೂ ಕಿರಿಕ್ ಪಾರ್ಟಿಯನ್ನ ಇರಿಸಿಕೊಳ್ಳಬೇಕು ಅನ್ನೋ ಲೆಕ್ಕಾಚಾರ ಬಂದ್ರೆ ಸಂಬರಗಿ ಹೊರಬರುವುದು ಡೌಟ್.. ಆದ್ರೆ ಫಿನಾಲೆಗೆ ಬರುವುದು ಅನುಮಾನ ಎನ್ನಬಹುದು.

- ಚಂದ್ರಚೂಡ್ ಚಕ್ರವರ್ತಿ : ವೈಲ್ಡ್ ಕಾರ್ಡ್ ಮೂಲಕ ಲೇಟಾಗಿ ಎಂಟ್ರಿಕೊಟ್ರೂ ಲೇಟೆಸ್ಟ್ ಆಗಿ ಬಂದ ಚಕ್ರವರ್ತಿ ನೇರ ನುಡಿಯಿಂದಲೇ ಆರಂಭದಲ್ಲೇ ಮನೆ ಸದ್ಯರ ಜೊತೆಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವಲ್ಲಿ ಎಡವಿದ್ರು.. ಆದ್ರೆ ಮುಂದಿನ ದಿನಗಳಲ್ಲಿ ಅವರು ಸ್ಟ್ರಾಂಗೆಸ್ಟ್ ಕಂಟೆಸ್ಟೆಂಟ್ ಎಂಬುದನ್ನ ಕ್ಯಾಪ್ಟನ್ ಆಗಿ ಆಯ್ಕೆಯಾದ ಬಳಿಕ ಸಾಬೀತು ಪಡಿಸಿದ್ಧಾರೆ. ಹೀಗಾಗಿ ಇವರೂ ಕೂಡ ಈ ವಾರ ಮನೆಯಿಂದ ಆಚೆ ಹೋಗುವುದು ಬಹುತೇಕ ಅನುಮಾನ.. ಫಿನಾಲೆಗೆ ಬರುವುದು ಕೂಡ ಅನುಮಾನವೇ ಆದ್ರೆ ಇನ್ನೂ ಒಂದೆರೆಡು ವಾರ ಅಂತು ಚಕ್ರವರ್ತಿ ಮನೆಯಲ್ಲಿಯೇ ಸೇಫ್ ಆಗಬಹುದು.

ಎಲಿಮಿನೇಟ್ ಆಗಬಹುದಾದ ಸ್ಪರ್ಧಿಗಳು
ಉಳಿದವರು ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕಾ ತಿಮ್ಮೇಶ್ .
ದಿವ್ಯಾ ಸುರೇಶ್ ಆರಂಭದಿಂದಲ್ಲೂ ಮಹಿಳಾ ಸ್ಪರ್ಧಿಗಳ ಪೈಕಿ ತುಂಬಾನೆ ಸ್ಟ್ರಾಂಗ್ ಎನಿಸಿಕೊಂಡಿದ್ದಾರೆ. ಆದ್ರೆ ಇತ್ತೀಚೆಗೆ ಅದ್ರಲ್ಲೂ ಹಾಸ್ಟೆಲ್ ಟಾಸ್ಕ್ ನಲ್ಲಿ ಅವರ ಮೋಸದಾಟದಿಂದ ಅವರ ಮೇಲೆ ನೆಗೆಟಿವ್ ಇಂಪ್ರೆಶನ್ ಮೂಡಿದೆ. ಜೊತೆಗೆ ಅವರು ಸದಾ ಮಂಜು ಪಾವಗಡ ಹಿಂದೆಯೇ ಓಡಾಡುವ ಕಾರಣ ದಿವ್ಯಾ ಸುರೇಶ್ ಇಂದಲೇ ಮಂಜು ಸೈಡ್ ಲೈನ್ ಆಗ್ತಿದ್ದಾರೆ ಎಂಬ ಅಂಶವೂ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆರಯಾಗ್ತಿದೆ. ಹೀಗಾಗಿ ದಿವ್ಯಾ ಈ ಬಾರಿ ಎಲಿಮಿನೇಟ್ ಆದ್ರು ಅಚ್ಚರಿ ಪಡಬೇಕಿಲ್ಲ..
ಇನ್ನೂ ಪ್ರಿಯಾಂಕಾ ತಿಮ್ಮೇಶ್ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಟಾಸ್ಕ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ಧಾರೆ. ಆದ್ರೂ ಅವರ ಆಟ ಜನರ ಮೇಲೆ ಅಷ್ಟಾಗಿ ಪ್ರಭಾವ ಬೀರಿಲ್ಲ.. ಅಲ್ಲದೇ ಉಳಿದ ಮಹಿಳಾ ಕಂಟೆಸ್ಟೆಂಟ್ಸ್ ಗೆ ಹೋಲಿಕೆ ಮಾಡಿದ್ರೆ ಪ್ರಿಯಾಂಕಾ ತಿಮ್ಮೇಶ್ ಆಚೆ ಹೋಗುವ ಚಾನ್ಸಸ್ ತುಂಬಾನೆ ಇದೆ..
ಆದ್ರೆ ಬಿಗ್ ಬಾಸ್ ನಲ್ಲಿ ಗೆಸ್ ಮಾಡಿದ್ದೆಲ್ಲಾ ಸರಿ ಇರುತ್ತೆ ಅನ್ನೋಕಾಗಲ್ಲ. ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗೋದಕ್ಕೆ ಹೆಚ್ಚು ಸಮಯವೂ ಬೇಕಾಗಲ್ಲ.. ಅದನ್ನ ನಾವು ಈಗಾಗಲೇ ರಾಜೀವ್ ಎಲಿಮೇಷನ್ ಸಮಯದಲ್ಲೇ ನೋಡಿದ್ದೇವೆ. ರಾಜೀವ್ ಫಿನಾಲೆಗೆ ಬರುವುದು ಪಕ್ಕಾ, ಗೆಲ್ಲೋದು ಪಕ್ಕಾ ಅಂತಲೇ ಜನ ಅಂದುಕೊಂಡಿದ್ರು.. ಟಾಸ್ಕ್ ವಿಚಾರದಲ್ಲೂ ರಾಜೀವ್ ತುಂಬಾನೆ ಒಳ್ಳೆ ಪ್ರದರ್ಶನ ನೀಡ್ತಿದ್ದರು. ಆದ್ರೆ ಅವರ ಎಲಿಮಿನೇಷನ್ ಎಲ್ಲರನ್ನೂ ಶಾಕ್ ಆಗಿಸುತ್ತು.. ಹೀಗಾಗಿ ಯಾವುದನ್ನ ಖಚಿತವಾಗಿ ಹೇಳುವುದಕ್ಕೆ ಆಗಲ್ಲ.. ಬ್ಲೈಂಡ್ ಆಗಿ ಗೆಸ್ ಮಾಡಬಹುದಷ್ಟೇ..
ಈವರೆಗೂ ಎಲಿಮಿನೇಟ್ ಆಗಿರುವ ಸ್ಪರ್ಧಿಗಳು
ಧನುಶ್ರೀ
ನಿರ್ಮಲಾ
ಗೀತಾ
ಚಂದ್ರಕಲಾ
ಶಂಕರ್ ಅಶ್ವಥ್
ವೈಜಯಂತಿ ( ತಮ್ಮ ಇಚ್ಛೆಯಿಂದಲೇ ಕ್ವಿಟ್ ಮಾಡಿದ ಸ್ಪರ್ಧಿ )
ವಿಶ್ವನಾಥ್ ಹಾವೇರಿ
ರಾಜೀವ್








