ಕುಕ್ಕೆ ಸುಬ್ರಹ್ಮಣ್ಯ (Kukke Subramanya) ದೇವಾಲಯದಿಂದ ಕುಮಾರದಾರಾ ನದಿಗೆ ತೆರಳುವ ಮಾರ್ಗ ಮಧ್ಯೆ ಬಿಲದ್ವಾರ ಎಂಬ ಪವಿತ್ರ ಗುಹೆ ಇದೆ. ಕಶ್ಯಪ ಮಹಾಮುನಿಗಳಿಗೆ ವಿನುತ ಮತ್ತು ಕದ್ರು ಎಂಬ ಇಬ್ಬರು ಹೆಂಡತಿಯರು ಇರುತ್ತಾರೆ. ವಿನುತನ ಮಗ ಗರುಡ, ಕದ್ರುವಿನ ಮಕ್ಕಳು ಸರ್ಪಗಳು. ಒಮ್ಮೆ ಗರುಡನಿಗೂ ಸರ್ಪಗಳಿಗೂ ದ್ವೇಷ ಉಂಟಾಗಿ ಸಹಸ್ರಾರು ಸರ್ಪಗಳನ್ನು ಗರುಡನು ಕೊಲ್ಲುತ್ತಾನೆ. ಸರ್ಪಗಳು ಗರುಡನಿಂದ ತಪ್ಪಿಸಿಕೊಳ್ಳಲು ಸಿಕ್ಕಸಿಕ್ಕಲ್ಲಿ ಅಡಗಿಕೊಳ್ಳುತ್ತವೆ.
ಸರ್ಪರಾಜ ವಾಸುಕಿಯು ಸಹ್ಯಾದ್ರಿ ಮಡಿಲಿನ ದಾರಾ ನದಿಯ ಪಕ್ಕದಲ್ಲಿನ ಬಿಲದ್ವಾರ ಗುಹೆಯಲ್ಲಿ ಅಡಗಿ ಕೊಳ್ಳುತ್ತಾನೆ. ಇದನ್ನು ತಿಳಿದ ಗರುಡನು ವಾಸುಕಿಯನ್ನು ಕೊಲ್ಲಲು ಬಿಲದ್ವಾರದ ಬಳಿ ಹೋಗುತ್ತಾನೆ. ಗರುಡ ಮತ್ತು ವಾಸುಕಿಯ ಕಾಳಗದ ವಿಷಯ ತಿಳಿದ ಇವರ ತಂದೆಯಾದ ಕಶ್ಯಪ ಮಹಾಮುನಿ ಇವರಿಬ್ಬರ ನಡುವೆ ಪ್ರವೇಶಿಸುತ್ತಾನೆ. ವಾಸುಕಿ ಶಿವಭಕ್ತನಾಗಿದ್ದ, ಆತನಿಂದ ಅನೇಕ ಲೋಕಕಲ್ಯಾಣ ಕಾರ್ಯಗಳು ಆಗಬೇಕಾಗಿರುವುದರಿಂದ ಆತನನ್ನು ಕೊಲ್ಲದಂತೆ ಕಶ್ಯಪ ಮಹಾಮುನಿಗಳು ಗರುಡನಿಗೆ ಮನವಿ ಮಾಡುತ್ತಾರೆ. ಗರುಡನಿಂದ ತಪ್ಪಿಸಿಕೊಂಡ ವಾಸುಕಿಯು ಸರ್ಪಗಳನ್ನು ಗರುಡನಿಂದ ರಕ್ಷಿಸಲು ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಇರುವ ಜಾಗದಲ್ಲಿ ಶಿವನನ್ನು ಕುರಿತು ತಪಸ್ಸು ಮಾಡುತ್ತಾನೆ.
ವಾಸುಕಿಯ ತಪಸ್ಸಿಗೆ ಶಿವನು ಪ್ರತ್ಯಕ್ಷನಾಗಿ ತನ್ನ ಮಗ ಸುಬ್ರಹ್ಮಣ್ಯನು ಸರ್ಪಗಳ ರಕ್ಷಕನಾಗಿ ಇದೆ ಕ್ಷೇತ್ರದಲ್ಲಿ ನೆಲೆ ನಿಲ್ಲುತ್ತಾನೆ ಎಂದು ಹೇಳಿದನು. ಅದರಂತೆ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ವಾಸುಕಿಯ ಜೊತೆಗೆ ಸುಬ್ರಮಣ್ಯ ದೇವರು ನೆಲೆ ನಿಲ್ಲುತ್ತಾರೆ. ಇಲ್ಲಿ ಸುಬ್ರಹ್ಮಣ್ಯ ಸ್ವಾಮಿಯನ್ನು ನಾಗ ಸ್ವರೂಪಿಯಾಗಿ ಪೂಜಿಸಲಾಗುತ್ತದೆ. ಸುಬ್ರಮಣ್ಯ ದೇವರನ್ನು ಧರೆಗೆ ಇಳಿಸಿದ ವಾಸುಕಿಯನ್ನು ದೈವ ಸ್ವರೂಪದಲ್ಲಿ ಪೂಜಿಸಲಾಗುತ್ತದೆ. ಸುಬ್ರಹ್ಮಣ್ಯ ಸ್ವಾಮಿಯು ಧರೆಗಿಳಿಯಲು ಕಾರಣಿಕರ್ತನಾದ ಗರುಡ ಬರದೆ ಸುಬ್ರಮಣ್ಯ ಕ್ಷೇತ್ರದಲ್ಲಿ ರಥವನ್ನು ಎಳೆಯುವುದಿಲ್ಲ. ಗರುಡನ ಭಯದಿಂದ ವಾಸುಕಿಯು ಅಡಗಿ ಕುಳಿತಿದ್ದ ಬಿಲದ್ವಾರ ಗುಹೆಗೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಹತ್ವವಿದೆ. ವಾಸುಕಿಯ ಅನುಗ್ರಹ ಪಡೆಯಲು ಭಕ್ತಾದಿಗಳು ಬಿಲದ್ವಾರ ಗುಹೆಗೆ ಆಗಮಿಸುತ್ತಾರೆ.
ಇದನ್ನೂ ಓದಿ: ಯಾವ ಸಂದರ್ಭದಲ್ಲಿ ಸರ್ಪ ಸಂಸ್ಕಾರ ಮಾಡಬೇಕು? ಇಲ್ಲಿದೆ ವಿವರ
ಈ ಗುಹೆಗೆ ಎರಡು ದಾರಿಗಳಿವೆ ಒಂದು ದಾರಿ ದಕ್ಷಿಣಕ್ಕೆ ಸಾಗಿದೆ, ಇನ್ನೊಂದು ದಾರಿ ಉತ್ತರಕ್ಕೆ ಸಾಗುತ್ತದೆ. ಉತ್ತರಕ್ಕೆ ಸಾಗುವ ದಾರಿಯು ಕಾಶಿಗೆ ಹೋಗುತ್ತದೆ ಎಂಬ ನಂಬಿಕೆ ಇದೆ. ಪ್ರಾಚೀನ ಕಾಲದಲ್ಲಿ ಈ ದಾರಿಯ ಮೂಲಕ ಹಲವಾರು ಮಂದಿ ಕಾಶಿಗೆ ತೆರಳಿದ್ದಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಮಣ್ಣು ಜರಿದು ಹೋಗಿದ್ದರಿಂದ ಹೋಗಲು ಆಗುತ್ತಿಲ್ಲ.
ಈ ಗುಹೆಯು ಕತ್ತಲಿನಿಂದ ಆವರಿಸಿದೆ. ಬಿಲದ್ವಾರ ಗುಹೆ ಪವಿತ್ರ ಗುಹೆ ಆಗಿರುವುದರಿಂದ ಭಕ್ತಾದಿಗಳು ಚಪ್ಪಲಿಯನ್ನು ಹಾಕಿಕೊಂಡು ಹೋಗುವಂತಿಲ್ಲ. ಮಳೆಗಾಲದಲ್ಲಿ ಕೆಸರಿನಿಂದ ಮುಚ್ಚಿಹೋಗುತ್ತದೆ. ಬಿಲದ್ವಾರ ಗುಹೆಯ ಎದುರಿಗೆ ವಾಸುಕಿ ಉದ್ಯಾನವನವಿದೆ. ಉದ್ಯಾನವನದಲ್ಲಿ ಸುಂದರ ನಾಗ ಶಿಲ್ಪವಿದೆ, ವಾಸುಕಿ ಮತ್ತು ಗರುಡ ಕಾದಾಡುವ ಸನ್ನಿವೇಶವನ್ನು ಬಿಂಬಿಸುವ ಶಿಲ್ಪಗಳಿವೆ. ಸುಬ್ರಮಣ್ಯ ದೇವಾಲಯಕ್ಕೆ ಹೋದರೆ ತಪ್ಪದೇ ಬಿಲದ್ವಾರಕ್ಕೆ ಹೋಗಿ ಬರಬೇಕು.
ಲೇಖನ: ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯಶಾಸ್ತ್ರಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ( 8548998564 ) ರಕ್ತೇತೇಶ್ವರೀ ದೇವಿ ಮತ್ತು ದುರ್ಗಾಪರಮೇಶ್ವರೀ ದೇವಿ ತಾಯಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ರಣಮೋಡಿ ಮತ್ತು ಕೇರಳದ ಕುಟ್ಟಿಚಾತನ್ ಪೂಜಾಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ನಿಮ್ಮ ಸಮಸ್ಯೆಗಳಾದ ವಿದ್ಯಾ ಭ್ಯಾಸದಲ್ಲಿ ತೊಂದರೆ, ಉದ್ಯೋಗ ಸಮಸ್ಯೆ, ಮನೆಯಲ್ಲಿ ಹಣಕಾಸಿನ ಅಭಾವ ಎಷ್ಟೇ ದುಡ್ಡಿದ್ದರು ನೆಮ್ಮದಿಯಕೊರತೆ ಇಷ್ಟಪಟ್ಟವರು ನಿಮ್ಮಂತೆ ಆಗಲು, ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳು ಮಾತು ಕೇಳದಿದ್ದರೆ, ಗಂಡ ಹೆಂಡತಿ ನಡುವೆಹೊಂದಾಣಿಕೆ ಸಮಸ್ಯೆ ವಿವಾಹದಲ್ಲಿ ಅಡೆ ತಡೆ ಸಾಲಭಾದೆ ಇನ್ನೂ ಅನೇಕ ಸಮಸ್ಯೆಗಳಿಗೆ 100% ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ.
ಶತ್ರುನಾಶ ಧನವಶೀಕರಣದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು. ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ. ಮೊಬೈಲ್ ನಂ ಶ್ರೀ ಜ್ಞಾನೇಶ್ವರ್ ರಾವ್ ಪ್ರಧಾನ ತಾಂತ್ರಿಕ 8548998564
ಮತ್ತಷ್ಟು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







