ಕೇವಲ ಹೆಡ್ ಲೈನ್ ಗಾಗಿ ಯೋಜನೆ ಘೋಷಿಸುವ ಖಯಾಲಿ ಬಿಜೆಪಿಯದ್ದು BJP saaksha tv
ಪ್ರಧಾನಿ ನರೇಂದ್ರ ಮೋದಿ 2014ರ ಅಕ್ಟೋಬರ್ 11 ರಂದು ಸಂಸದರ ಆದರ್ಶ ಗ್ರಾಮ ಯೋಜನೆಯನ್ನು ಜಾರಿಗೊಳಿಸಿದ್ದರು.
ಗ್ರಾಮಗಳ ಸಮಗ್ರ ಅಭಿವೃದ್ಧಿಯ ಜೊತೆಗೆ ಸಂಸದರ ನಾಯಕತ್ವ, ಸಾಮರ್ಥ್ಯ ತೋರುವುದು ಯೋಜನೆಯ ಉದ್ದೇಶವಾಗಿತ್ತು.
ಆದ್ರೆ ರಾಜ್ಯದ 11 ಸಂಸದರು 2019-20ರಿಂದ ಇಲ್ಲಿಯವರೆಗೆ ಸಂಸದರ ಆದರ್ಶ ಗ್ರಾಮ ಯೋಜನೆಯಡಿ ಗ್ರಾಮಗಳನ್ನು ಆಯ್ಕೆಯೇ ಮಾಡಿಲ್ಲ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಕೇವಲ ಹೆಡ್ ಲೈನ್ ಗಾಗಿ ಯೋಜನೆ ಘೋಷಿಸುವ ಖಯಾಲಿ ಬಿಜೆಪಿಯದ್ದು ಎಂದು ಟೀಕೆ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಕೇವಲ ಹೆಡ್ಲೈನ್ಗಾಗಿ ಯೋಜನೆ ಘೋಷಿಸುವ ಖಯಾಲಿ ಬಿಜೆಪಿಯದ್ದು.
‘ಸಂಸದರ ಆದರ್ಶ ಗ್ರಾಮ’ದಲ್ಲಿ ಯಾವೊಬ್ಬ ಸಂಸದರೂ ಪ್ರಗತಿ ತೋರದಿರುವುದು ಬಿಜೆಪಿಯ 25 ಸಂಸದರ ನಿಷ್ಕ್ರಿಯತೆಯನ್ನು ತೋರಿಸುತ್ತದೆ.
ರಾಜ್ಯದ ಪರ ಧ್ವನಿ ಎತ್ತಲಾಗದೆ, ತಮ್ಮ ಜವಾಬ್ದಾರಿ ನಿಭಾಯಿಸದೇ, ಮೋದಿ ಎದುರು ಸೇವಕರಂತೆ ತಲೆ ತಗ್ಗಿಸಿ ನಿಲ್ಲುವುದಷ್ಟೇ ಇವರಿಗೆ ತಿಳಿದಿರುವುದು ಎಂದು ವ್ಯಂಗ್ಯವಾಡಿದೆ.









