ದೇಶದಲ್ಲಿ ಲೋಕಸಭಾ(Lok Sabha Election) ಚುನಾವಣೆಗೆ ಭರ್ಜರಿ ತಯಾರಿ ನಡೆದಿದ್ದು, ಬಿಜೆಪಿ ಈಗಿನಿಂದಲೇ ಸಿದ್ಧತೆ ಮಾಡಿಕೊಂಡಿದೆ. ಈ ಬಾರಿ ಉತ್ತರ ಪ್ರದೇಶದಲ್ಲಿ (Uttar Pradesh) ದಲ್ಲಿ ಹೊಸ ಮುಖಗಳಿಗೆ ಮಣೆ ಹಾಕಲು ಮುಂದಾಗಿದೆ ಎನ್ನಲಾಗುತ್ತಿದೆ.
ಉತ್ತರ ಪ್ರದೇಶದಲ್ಲಿ ಹಾಲಿ ಬಿಜೆಪಿಯ 18 ಸದಸ್ಯರಿಗೆ ಕೊಕ್ ನೀಡಿ, ಹೊಸ ಮುಖಗಳಿಗೆ ಟಿಕೆಟ್ ನೀಡುವ ಕುರಿತು ಚರ್ಚೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಅಲ್ಲದೇ, ಸೋತ ಕ್ಷೇತ್ರಗಳನ್ನು ಗೆಲ್ಲುವುದಕ್ಕಾಗಿ ಕೂಡ ಹೊಸ ತಂತ್ರ ಹೆಣೆಯುತ್ತಿದೆ.
ಸಹರಾನ್ ಪುರ ಸಂಸದ ರಾಘವ್ ಲಖನ್ ಪಾಲ್, ಬಿಜ್ನೋರ್ ನ ಕುನ್ವರ್ ಭರತೇಂದ್ರ ಸಿಂಗ್, ನಗೀನಾ ಕ್ಷೇತ್ರದ ಯಶವಂತ್ ಸಿಂಗ್, ಮೊರಾದಾಬಾದ್ ನ ಕುನ್ವರ್ ಸರ್ವೇಶ್ ಕುಮಾರ್, ಸಂಭಾಲ್ ನ ಪರಮೇಶ್ವರ್ ಲಾಲ್ ಸೈನಿ, ಅಮ್ರೋಹಾದ ಕನ್ವರ್ ಸಿಂಗ್, ಮೈನ್ಪುರಿಯ ಪ್ರೇಮ್ ಸಿಂಗ್ ಶಾಕ್ಯಾ, ರಾಯ್ ಬರೇಲಿಯ ದಿನೇಶ್ ಪ್ರತಾಪ್ ಸಿಂಗ್, ಅಂಬೇಡ್ಕರ್ ನಗರದ ವರ್ಮಾ, ಶ್ರಾವಸ್ತಿಯ ದದ್ದನ್ ಮಿಶ್ರಾ, ಲಾಲ್ ಗಂಜ್ ನಿಂದ ನೀಲಂ ಸೋಂಕರ್ ಅವರ ಬದಲಾಗಿ ಬೇರೆಯವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅಲ್ಲದೇ, ಕಳೆದ ಬಾರಿ ಗೆದ್ದ ಹಿರಿಯರಿಗೆ ಟಿಕೆಟ್ ಕೊಕ್ ಸಿಗುವ ಸಾಧ್ಯತೆ ಇದೆ. ಹೀಗಾಗಿ ಹಲವಾರು ಉತ್ತರ ಪ್ರದೇಶದ ಹಿರಿಯ ನಾಯಕರು ಮನೆಯಲ್ಲಿಯೇ ಕುಳಿತುಕೊಳ್ಳಬಹುದು. ಮೇನಕಾ ಗಾಂಧಿ ಹಾಗೂ ವರುಣಾ ಗಾಂಧಿಗೆ ಕೂಡ ಟಿಕೆಟ್ ಇನ್ನೂ ಪಕ್ಕಾ ಆಗಿಲ್ಲ ಎನ್ನಲಾಗುತ್ತಿದೆ.