ಸುರಪುರ : ಡಾ. ಬಿ. ಆರ್. ಅಂಬೇಡ್ಕರ್ ಒಂದು ಜಾತಿ ಸಮುದಾಯಕ್ಕೆ ಮಾತ್ರ ಸೀಮಿತವಲ್ಲ. ಬಾಬಾ ಸಾಹೇಬರು ದೇಶದ ಆಸ್ತಿ.
ಪ್ರತಿಯೊಬ್ಬ ಭಾರತೀಯನು ಬಾಬಾ ಸಾಹೇಬರ ಮುಂದಾಲೋಚನೆಯನ್ನು ಅರಿತುಕೊಳ್ಳಬೇಕು ಎಂದು ಮುನೀರ ಬೊಮ್ಮನಹಳ್ಳಿಯ ದಲಿತ ಮುಖಂಡ ಮಲ್ಲನಗೌಡ ಹೊಸಮನಿ ಹೇಳಿದ್ದಾರೆ.
ಗ್ರಾಮದಲ್ಲಿ ಡಾ.ಬಿ ಆರ್. ಅಂಬೇಡ್ಕರ್ ಅವರ ಜೀವನ ಆಧಾರಿತವಾದ ಮಹಾನಾಯಕ ಧಾರವಾಹಿಯ ಬ್ಯಾನರ್ ಉದ್ಘಾಟಿಸಿ ಮಾತನಾಡಿದ ಅವರು, ಡಾ. ಬಿ. ಆರ್. ಅಂಬೇಡ್ಕರ್ ಒಂದು ಜಾತಿ ಸಮುದಾಯಕ್ಕೆ ಮಾತ್ರ ಸಿಮೀತವಾಗಿಲ್ಲ.
ಬಾಬಾ ಸಾಹೇಬರು ದೇಶದ ಆಸ್ತಿ. ಅವರು ದೇಶದ ಮಹಿಳೆಯರು? ಶೋಷಿತರ ಸಲುವಾಗಿ ತಮ್ಮ ಜೀವನವನ್ನೇ ಸವೆಸಿದ್ದಾರೆ.
ಇಡೀ ವಿಶ್ವವನ್ನು ಕೊಂಡಾಡುವಂತ ಸಂವಿಧಾನ ರಚಿಸುವುದರ ಮೂಲಕ ಬಾಬಾ ಸಾಹೇಬರು ದೇಶಕ್ಕೆ ಕೊಡುಗೆಯನ್ನು ನೀಡಿದ್ದಾರೆ.
ಇಂತಹ ಮಹಾನ್ ನಾಯಕ ಪಟ್ಟಿರುವ ಶ್ರಮವನ್ನು ಮತ್ತು ಅವಮಾನಗಳು ನಮಗೆ ಪಾಠವಾಗಬೇಕು ಎಂದರು. ಹೊಸ ಸುದ್ದಿಗಳನ್ನು ಇಲ್ಲಿ ಓದಿ
ಇದೇ ವೇಳೆ ಜೀ ಕನ್ನಡ ಮುಖ್ಯಸ್ಥರು ರಾಘವೇಂದ್ರ ಹುಣಸೂರ ಹಾಗೂ ಮಹಾನಾಯಕ ಧಾರವಾಹಿ ಸೃಷ್ಟಿಕರ್ತೆ ಪ್ರಣೀತಿ ಸಿಂಧೆ ಅವರನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಮಡಿವಾಳಪ್ಪ ದೊಡಮನಿ, ಸಿದ್ದು ದೊಡಮನಿ, ಕಾಶಿನಾಥ ನೀರಲಗಿ,ರಾಜು ವಡಗೇರಾ,ರವಿ ದೊಡಮನಿ, ಅಮರಪ್ಪ ಅಚಕೇರಿ,ಮುದಕಪ್ಪ ಸಿದ್ದಪ್ಪ ಅಚಕೇರಿ,
ಮಾನಪ್ಪ ಬಳಗಾನೂರ, ಶ್ರೀಶೈಲ ದೊಡಮನಿ, ಲಕ್ಷ್ಮಣ್ಣ ದೊಡಮನಿ, ಅಮರೇಶ ಬೆಸೆಟ್ಯಾಳ, ಧರ್ಮರಾಜ ಅಚಕೇರಿ, ಅಮರೇಶ ಗೋಗಡಿಹಾಳ, ಅಮರೇಶ ಮುದ್ನೂರ,
ಸಿದ್ದಪ್ಪ ನಾಟೀಕರ,ಅಶೋಕ ಕೀರಣಗಿ, ಸೇರಿದಂತೆ ಅನೇಕರು ಇದ್ದರು.








