ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಮನುಕುಲವೇ ತಲೆತಗ್ಗಿಸುವಂತಹ ಘಟನೆಗೆ ಸಾಕ್ಷಿಯಾಗಿದೆ. ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಘಟನೆ ಜಿಲ್ಲೆಯ ಕಡೂರು ತಾಲೂಕಿನ ನಾಯಕನಹಟ್ಟಿ ಗ್ರಾಮದಲ್ಲಿ ನಡೆದಿದೆ. ಈ ಗ್ರಾಮದ ಸಂಗೀತ ಎಂಬುವವರು ಹೆಣ್ಣು ಮಗುವೆಂಬ ಒಂದೇ ಒಂದು ಕಾರಣಕ್ಕೆ ತಾನೇ 9 ತಿಂಗಳು ಹೊತ್ತು ಹೆತ್ತ 23 ದಿನದ ಹಸುಗೂಸನ್ನ ಸೌದೆಯಂತೆ ಒಲೆಯಲ್ಲಿ ಉರಿಸಿ ಕೊಂದಿದ್ದಾಳೆ. ಮಗುವನ್ನ ಒಲೆಗೆ ಹಾಕುವ ಮುನ್ನ ಅಳುತ್ತೆಂದು ಕುತ್ತಿಗೆಯನ್ನ ಕಚ್ಚಿದ್ದಾಳೆ.
ಈ ವಿಷಯ ಜಿಲ್ಲೆಯಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿದ್ದು, ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿರೋ ಕಡೂರು ಪೊಲೀಸರು ಪರಮಪಾಪಿ ತಾಯಿ ಸಂಗೀತಾಳನ್ನ ಬಂಧಿಸಿದ್ದಾರೆ.
ಅಲ್ಲದೆ ಮಗುವನ್ನ ಕೊಲ್ಲಲು ಪ್ರೇರೇಪಿಸಿದರೆಂಬ ಕಾರಣಕ್ಕೆ ಚಂದ್ರಮ್ಮ, ರಮೇಶ್ ಹಾಗೂ ಬಾಬು ಎಂಬ ಮೂವರನ್ನು ಅರೆಸ್ಟ್ ಮಾಡಿದ್ದಾರೆ.








