ಕುರ್ಚಿ ಭದ್ರಕ್ಕೆ ಬಿಎಸ್ ವೈ ( BSY ) ತಂತ್ರ : ರಾರಾ.. ಶಿರಾ… ಗೆಲ್ಲಲು ಕಾರ್ಯತಂತ್ರ
ಬೆಂಗಳೂರು : ರಾಜರಾಜೇಶ್ವರಿ ಹಾಗೂ ಶಿರಾ ಉಪಚುನಾವಣೆ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರಲ್ಲ. ಆದರೂ ರಾಜ್ಯ ಕೇಸರಿ ಪಡೆ ಈ ಎರಡು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲೇಬೇಕೆಂದು ಪಣತೊಟ್ಟು ಅಖಾಡಕ್ಕೆ ಇಳಿದಿದೆ.
ಶತಾಯಗತಾಯ ಈ ಮಿನಿಸಮರದಲ್ಲಿ ಗೆಲ್ಲಲೇಬೇಕೆಂಬ ದೃಢ ಸಂಕಲ್ಪದೊಂದಿಗೆ ಬಿಜೆಪಿ ನಾಯಕರು ರಾರಾ…ಶಿರಾ ಕಣದಲ್ಲಿ ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ. ಇದಕ್ಕೆ ಕಾರಣ ಸಿಎಂ ಬಿಎಸ್ ಯಡಿಯೂರಪ್ಪ..! ( BSY )
ಹೌದು..! ರಾಜ್ಯ ಬಿಜೆಪಿಯ ರಾಜಾಹುಲಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಈ ಉಪಚುನಾವಣೆ ಪ್ರತಿಷ್ಠೆಯ ಪ್ರಶ್ನೆ. ಜೊತೆಗೆ ಕುರ್ಚಿ ಭದ್ರಪಡಿಕೊಳ್ಳಲು ಇರುವ ಬಹು ದೊಡ್ಡ ಮಾರ್ಗವೂ ಕೂಡ.
ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಿ ಹಿಡಿದಾಗಿನಿಂದಲೂ ಸಿಎಂ ಬದಲಾವಣೆಯ ಚರ್ಚೆಗಳು ನಡೆಯುತ್ತಲೇ ಇವೆ.
ಇದನ್ನೂ ಓದಿ : ಶ್ರೀ ರಾಮುಲು ಡಿಸಿಎಂ ಕನಸು ಆದಷ್ಟು ಬೇಗ ನನಸಾಗುತ್ತೆ : ಸೋಮಶೇಖರ್ ರೆಡ್ಡಿ
ಈ ಕಾರಣಕ್ಕಾಗಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿ, ಆ ಮೂಲಕ ತಮ್ಮ ನಾಯಕತ್ವವನ್ನು ಇನ್ನಷ್ಟು ಗಟ್ಟಿಗೊಳಿಕೊಳ್ಳುವ ತಂತ್ರಗಾರಿಕೆ ಯಡಿಯೂರಪ್ಪನವರದ್ದು.
ತಂಡಗಳ ರಚನೆ : ಖಡಕ್ ಎಚ್ಚರಿಕೆ
ಈ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಸಿಎಂ ಸ್ಥಾನದ ಜೊತೆ ಜೊತೆಗೆ ವಿರೋಧಿಗಳಿಗೆ ಟಕ್ಕರ್ ನೀಡಲು ಯಡಿಯೂರಪ್ಪ ಪ್ಲಾನ್ ಮಾಡಿಕೊಂಡಿದ್ದಾರೆ. ಹೀಗಾಗಿಯೇ ಎರಡೂ ಕ್ಷೇತ್ರಗಳಲನ್ನು ಗೆಲ್ಲುವ ಕಾರ್ಯತಂತ್ರ ರೂಪಿಸಿ, ಅದರ ಪ್ರಕಾರ ತಂಡಗಳನ್ನು ರಚಿಸಿ ಚುನಾವಣಾ ಅಖಾಡಕ್ಕೆ ಇಳಿಸಿದ್ದಾರೆ.
ಆರ್.ಆರ್.ನಗರ ಕ್ಷೇತ್ರಕ್ಕೆ ಸಚಿವರಾದ ಆರ್.ಅಶೋಕ್, ವಿ.ಸೋಮಣ್ಣ, ಎಸ್.ಟಿ.ಸೋಮಶೇಖರ್, ಶಾಸಕ ಅರವಿಂದ ಲಿಂಬಾವಳಿಗೆ ಪ್ರಮುಖ ಜವಾಬ್ದಾರಿಗಳನ್ನು ಕೊಟ್ಟಿದ್ದಾರೆ.
ಇತ್ತ ಶಿರಾದಲ್ಲಿ ಡಿಸಿಎಂ ಗೋವಿಂದ ಕಾರಜೋಳ ಸೇರಿದಂತೆ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರಿಗೆ ಮೇಲುಸ್ತುವಾರಿ ಹೊಣೆಗಾರಿಕೆ ನೀಡಿದ್ದಾರೆ.
ಸಿಎಂ ಬದಲಾವಣೆ : ಸ್ಪಷ್ಟ ಸಂದೇಶ ರವಾನೆ ಚಿಂತನೆ
ಇದನ್ನೂ ಓದಿ : ಬಿಎಸ್ವೈ 3 ವರ್ಷ ಸಿಎಂ ಆಗಿರ್ತಾರಂತ ಹೇಳೊಕಾಗಲ್ಲ: ರಾಜಾಹುಲಿಗೆ ಮತ್ತೆ ತಿವಿದ ಯತ್ನಾಳ್
ಈ ಹಿಂದೆ ನಡೆದ ಉಪಚುನಾವಣೆಯಲ್ಲಿ 15 ಕ್ಷೇತ್ರಗಳ ಪೈಕಿ 12 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಎಸ್ ವೈ ಸರ್ಕಾರವನ್ನು ಸುಭದ್ರಪಡಿಸಿಕೊಂಡಿದ್ದರು.
ಇದೀಗ ನಾಯಕತ್ವದ ಬಗೆಗಿನ ಅಪಸ್ವರ ಚಿವುಟಿ ಹಾಕುವುದಕ್ಕೆ ಬಿಎಸ್ ವೈ ಈ 2 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಲೇಬೇಕಿದೆ. ಈ ಚುನಾವಣೆಯಲ್ಲಿ ಗೆದ್ದು, ಪಕ್ಷದ ಒಳ-ಹೊರಗಿನ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನೆಸುವ ಚಿಂತನೆ ನಡೆಸಿದ್ದಾರೆ ಯಡಿಯೂರಪ್ಪ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel