ಕೊಡಗು: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನಿಂದ ಮಾಜಿ ಸಚಿವ ಜಾರ್ಜ್ ಅವರಿಗೆ ಸಮನ್ಸ್ ಜಾರಿಯಾಗಿದೆ.
ಖಾಸಗಿ ಲಾಡ್ಜ್ನಲ್ಲಿ ಡಿವೈಎಸ್ಪಿ ಗಣಪತಿ ಸಂಶಯಾಸ್ಪದ ಸಾವಿಗೆ ಮುನ್ನ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಜಾರ್ಜ್ ಅವರ ಬಗ್ಗೆ ಆರೋಪ ಮಾಡಿದ್ದರು. ವಿಧಾನಸೌಧಕ್ಕೆ ಆಗಮಿಸಿ ಸಿಬಿಐ ಅಧಿಕಾರಿಗಳಿಂದ ಖುದ್ದಾಗಿ ಜಾರ್ಜ್ ಅವರಿಗೆ ಅಧಿಕಾರಿಗಳು ಸಮನ್ಸ್ ನೀಡಲಾಗಿದೆ. ಖಾಸಗಿ ವಾಹಿನಿಯಲ್ಲಿ ನೀಡಿದ ನೇರ ಸಂದರ್ಶನ ಮತ್ತು ದಾಖಲೆ ನಂತರ ನಿರಂತರ ಕಾನೂನು ಹೋರಾಟದ ನಡುವೆಯೂ ಗಣಪತಿ ಆತ್ಮಹತ್ಯೆ ಕೇಸ್ಗೆ ಮರುಜೀವ ಸಿಕ್ಕಿದಂತಾಗಿದೆ.
ಮತ್ತೊಮ್ಮೆ ಸಮಗ್ರ ತನಿಖೆಗೆ ಕೋರ್ಟ್ ಆದೇಶದ ಮೇರೆಗೆ ಸಿಬಿಐ ತನಿಖೆಗೆ ಮುಂದಾಗಿದೆ. ತನಿಖೆ ಸರಿಯಾಗಿ ನಡೆದಿಲ್ಲ ಎಂದು ಗಣಪತಿ ಪೋಷಕರು ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಈ ಹಿನ್ನಲೆ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡುವಂತೆ ನ್ಯಾಯಾಲಯ ಆದೇಶ ನೀಡಿತ್ತು.