ಬೈ ಎಲೆಕ್ಷನ್ ತಯಾರಿಯಲಿದ್ದ ಡಿ.ಕೆ.ಶಿವಕುಮಾರ್ಗೆ ಸಿಬಿಐ ಸಮನ್ಸ್
ಬೆಂಗಳೂರು : ಮಸ್ಕಿ, ಬಸವಕಲ್ಯಾಣ ಉಚಉಪಚುನಾವಣೆ ತಯಾರಿಯಲ್ಲಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಸಿಬಿಐ ಶಾಕ್ ನೀಡಿದೆ.
ಇದೇ ತಿಂಗಳ 23 ರಂದು ಅಂದ್ರೆ ಸೋಮವಾರ ವಿಚಾರಣೆಗೆ ಹಾಜರಾಗುವಂತೆ ಡಿಕೆಶಿಗೆ ಸಿಬಿಐ ಸಮನ್ಸ್ ನೀಡಿದೆ.
ಈ ಕುರಿತು ಮಾತನಾಡಿರುವ ಡಿ.ಕೆ.ಶಿವಕುಮಾರ್,ಬೆಂಗಳೂರಿನ ಸಿಬಿಐ ಅಧಿಕಾರಿಗಳು ನನಗೆ ನೋಟಿಸ್ ನೀಡಿದ್ದು ನಿಜ.
ನವೆಂಬರ್ 19ರಂದು ಅಧಿಕಾರಿಗಳು ನಮ್ಮ ಮನೆಗೆ ನೋಟಿಸ್ ನೀಡಲು ಬಂದಿದ್ದರು.
ಕನ್ನಡಪರ ಹೋರಾಟಗಾರರನ್ನು ರೋಲ್ಕಾಲ್, ನಕಲಿ ಎಂದು ಟೀಕಿಸಿದ ಯತ್ನಾಳ್..!
ಆದ್ರೆ ನಾನು ಮನೆಯಲ್ಲಿರಲಿಲ್ಲ. ನವೆಂಬರ್ 23 ಸಂಜೆ ನಾಲ್ಕು ಗಂಟೆಗೆ ಕಚೇರಿಗೆ ಬರಲು ಸೂಚಿಸಿದ್ದಾರೆ.
ಆದ್ರೆ ನಾನು ಮಸ್ಕಿ ಮತ್ತು ಬಸವಕಲ್ಯಾಣ ಕ್ಷೇತ್ರಗಳಿಗೆ ತೆರಳುತ್ತಿದ್ದೇನೆ. ಹೀಗಾಗಿ ನವೆಂಬರ್ 23ರ ಬದಲಾಗಿ ನವೆಂಬರ್ 25ಕ್ಕೆ ವಿಚಾರಣೆಗೆ ಬರೋದಾಗಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆ ಡಿಕೆಶಿವಕುಮಾರ್ ಅವರಿಗೆ ಸಿಬಿಐ ಸಮನ್ಸ ಜಾರಿ ಮಾಡಿದೆ. ಅಕ್ಟೋಬರ್ ಐದರಂದು ಡಿಕೆ ಬ್ರದರ್ಸ್ ಸೇರಿದಂತೆ ಡಿ.ಕೆ ಆಪ್ತರ ನಿವಾಸಗಳ ಮೇಳೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel