ಭಗವಾನ್ ವಿಷ್ಣುವಿನ ಈ 10 ಮಂತ್ರಗಳನ್ನು ಯಾರು ನಿಯಮಿತವಾಗಿ ಪಠಿಸುತ್ತಾರೋ ಅವರು ತೊಂದರೆಗಳಿಂದ ಮುಕ್ತಿ ಹೊಂದಿ, ಸಂಪತ್ತು ಮತ್ತು ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಶ್ರೀಹರಿಯ ಆ 10 ಶಕ್ತಿಶಾಲಿ ಮಂತ್ರಗಳಾವುವು ಗೊತ್ತೇ?
ಗುರು ಮತ್ತು ಗುರುವಾರದ ಅಧಿಪತಿಯನ್ನು ಭಗವಾನ್ ಮಹಾವಿಷ್ಣು ಎಂದು ಹೇಳಲಾಗುತ್ತದೆ. ಗುರುವಾರ ಭಗವಾನ್ ವಿಷ್ಣುವಿಗೆ ಸಮರ್ಪಿತವಾಗಿದೆ. ವ್ಯಕ್ತಿಯ ಜಾತಕದಲ್ಲಿ ಗುರುದೋಷವಿದ್ದರೆ ಗುರುವಾರದಂದು ಶ್ರೀ ಹರಿ ನಾರಾಯಣ ಮತ್ತು ಬೃಹಸ್ಪತಿ ದೇವರನ್ನು ಪೂಜಿಸುವ ಸಂಪ್ರದಾಯ ಮತ್ತು ಪದ್ಧತಿಯಿದೆ. ಈ ದಿನ ಉಪವಾಸ ವ್ರತವನ್ನು ಮಾಡುವುದರಿಂದ ವ್ಯಕ್ತಿಯ ಜೀವನದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಅಲ್ಲದೇ, ಮನೆಯಲ್ಲಿ ಹಣದ ಕೊರತೆ ಕೂಡ ಇರುವುದಿಲ್ಲ. ಈ ದಿನ ಭಗವಾನ್ ವಿಷ್ಣುವಿನ ಪೂಜೆಯ ಜೊತೆಗೆ ಲಕ್ಷ್ಮೀ ದೇವಿಯನ್ನು ಪೂಜಿಸುವುದು ಕೂಡ ಶ್ರೇಯಸ್ಕರವಾಗಿರುತ್ತದೆ.
ನಿತ್ಯವೂ ಭಗವಾನ್ ವಿಷ್ಣುವಿನ ಮಂತ್ರಗಳನ್ನು ಪಠಿಸುವುದರಿಂದ ಶುಭ ಫಲಗಳು ಲಭಿಸುತ್ತವೆ ಎಂಬುದು ಧಾರ್ಮಿಕ ನಂಬಿಕೆ. ಭಗವಾನ್ ವಿಷ್ಣುವಿನ ಮಂತ್ರಗಳನ್ನು ನಿಯಮಿತವಾಗಿ ಪಠಿಸುವುದರಿಂದ, ಒಬ್ಬ ವ್ಯಕ್ತಿಯು ಎಲ್ಲಾ ತೊಂದರೆಗಳಿಂದ ಮುಕ್ತಿ ಹೊಂದುತ್ತಾನೆ ಮತ್ತು ಒಬ್ಬ ವ್ಯಕ್ತಿಯು ಸಂಪತ್ತು ಮತ್ತು ಅದೃಷ್ಟವನ್ನು ಪಡೆಯುತ್ತಾನೆ ಎಂದು ನಂಬಲಾಗಿದೆ. ಗುರುವಾರ ನಾವು ಪಠಿಸಬೇಕಾದ ಮಂತ್ರಗಳ ಬಗ್ಗೆ ತಿಳಿದುಕೊಳ್ಳೋಣ..
ಹಿಂದೂ ಧರ್ಮಗ್ರಂಥಗಳ ಪ್ರಕಾರ, ವಿಷ್ಣು ಮಂತ್ರಗಳು ಎಷ್ಟು ಶಕ್ತಿಯುತವಾಗಿವೆಯೆಂದರೆ ಅದು ವ್ಯಕ್ತಿಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಲು ನೆರವಾಗುತ್ತದೆ. ಈ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಅದ್ಭುತ ಬದಲಾವಣೆಗಳಾಗುವುದನ್ನು ಗಮನಿಸಬಹುದಾಗಿದೆ. ಹಾಗಾದರೆ ಸಂಪತ್ತು, ಸಮೃದ್ಧಿ, ನೆಮ್ಮದಿ ಹೆಚ್ಚಾಗಲು ವಿಷ್ಣುವಿನ ಯಾವ ಮಂತ್ರದ ಪಠಣೆ ಮಾಡಬೇಕು?
ಶುಕ್ರವಾರದಂದು ಈ 10 ವಿಷ್ಣು ಮಂತ್ರಗಳನ್ನು ಪಠಿಸುವುದರಿಂದ ನಮ್ಮೆಲ್ಲಾ ಕಷ್ಟಗಳು ದೂರಾಗಲು ಪ್ರಾರಂಭವಾಗುತ್ತದೆ. ಈ ಮಂತ್ರಗಳು ನಮಗೆ ಲಕ್ಷ್ಮಿ ದೇವಿಯ ಮತ್ತು ವಿಷ್ಣುವಿನ ಆಶೀರ್ವಾದವನ್ನು ಪಡೆದುಕೊಳ್ಳಲು ಸಹಕರಿಸುತ್ತದೆ. ಈ ಮಂತ್ರಗಳನ್ನು ಯಾರು ಬೇಕಾದರೂ ಸರಳವಾದ ವಿಧಿ – ವಿಧಾನಗಳ ಮೂಲಕ, ಶ್ರದ್ಧೆಯಿಂದ ಪಠಿಸಬಹುದಾಗಿದೆ.
ಇದನ್ನೂ ಓದಿ: ಶನಿವಾರದಂದು ನಡೆಯುವ ಏಕಾದಶಿ ಪೂಜೆಯ ಮಹತ್ವ ತಿಳಿಯಿರಿ
ಭಗವಾನ್ ವಿಷ್ಣುವು ತ್ರಿಮೂರ್ತಿಗಳಲ್ಲಿ ಒಬ್ಬನಾಗಿದ್ದು, ಅವನನ್ನು ಪ್ರಪಂಚದಾದ್ಯಂತ ಎಲ್ಲರೂ ಪೂಜಿಸುತ್ತಾರೆ. ಇನ್ನು ವಿಷ್ಣುವಿನ 10 ಅವತಾರಗಳಲ್ಲಿಯೂ ಅವನ ಶಕ್ತಿಯುತ ಪಾತ್ರಗಳ ಬಗೆಗಿನ ಕಥೆಯನ್ನು ನೀವು ಕೇಳಿರಬಹುದು. ಇದೆಲ್ಲಾ ಕಾರಣಗಳಿಂದಲೇ ವಿಷ್ಣುವನ್ನು ಪೂರ್ಣ ಭಕ್ತಿ ಮತ್ತು ಸಮರ್ಪಣೆಯಿಂದ ಪೂಜಿಸುತ್ತಾರೆ. ವಿಷ್ಣುವನ್ನು ಮೆಚ್ಚಿಸಲು ಅನೇಕ ಮಾರ್ಗಗಳಿವೆ. ಕೆಲವರು ವಿಷ್ಣುವಿನ ನೆಚ್ಚಿನ ವಸ್ತುಗಳಾದ ತುಳಸಿ ಅರ್ಪಿಸುವ ಮೂಲಕ, ಕೆಲವರು ಉಪವಾಸ ಆಚರಿಸುವ ಮೂಲಕ ಆಶೀರ್ವಾದ ಪಡೆಯುತ್ತಾರೆ. ಇದರ ಜೊತೆಗೆ ಹಿಂದೂ ಧರ್ಮಗ್ರಂಥಗಳ ಪ್ರಕಾರ, ವಿಷ್ಣು ಮಂತ್ರಗಳು ಎಷ್ಟು ಶಕ್ತಿಯುತವಾಗಿವೆಯೆಂದರೆ ಅದು ವ್ಯಕ್ತಿಯಲ್ಲಿ ಸಕಾರಾತ್ಮಕ ಶಕ್ತಿಯನ್ನು ತುಂಬಲು ನೆರವಾಗುತ್ತದೆ. ಈ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ಅದ್ಭುತ ಬದಲಾವಣೆಗಳಾಗುವುದನ್ನು ಗಮನಿಸಬಹುದಾಗಿದೆ. ಹಾಗಾದರೆ ಸಂಪತ್ತು, ಸಮೃದ್ಧಿ, ನೆಮ್ಮದಿ ಹೆಚ್ಚಾಗಲು ವಿಷ್ಣುವಿನ ಯಾವ ಮಂತ್ರದ ಪಠಣೆ ಮಾಡಬೇಕು? ಇಲ್ಲಿದೆ ಮಾಹಿತಿ.
ಭಗವಾನ್ ಶ್ರೀ ವಿಷ್ಣು ಮಂತ್ರಗಳು;
ಓಂ ನಮೋ ಭಗವತೇ ವಾಸುದೇವಾಯ
ಈ ಮಂತ್ರದ ಅರ್ಥ ಎಲ್ಲರ ಹೃದಯದಲ್ಲಿ ನೆಲೆಸಿರುವ ಭಗವಂತನ ಮುಂದೆ ನಾನು ಶರಣಾಗುತ್ತೇನೆ ಎಂಬುದಾಗಿದೆ. ಇದನ್ನು ಪ್ರತಿನಿತ್ಯ ಪಠಿಸುವುದರಿಂದ ಮಾನಸಿಕವಾಗಿ ಗಟ್ಟಿಯಾಗುತ್ತೇವೆ, ಸಕಾರಾತ್ಮಕ ಆಲೋಚನೆ ಹೆಚ್ಚಾಗುತ್ತದೆ. ಇದಲ್ಲದೆ ಈಗಾಗಲೇ ಇರುವಂತಹ ಅನಾರೋಗ್ಯದ ಸಮಸ್ಯೆಗಳು ದಿನದಿಂದ ದಿನಕ್ಕೆ ಕ್ರಮೇಣವಾಗಿ ಕಡಿಮೆಯಾಗುತ್ತದೆ ಉತ್ತಮ ಆರೋಗ್ಯ ವೃದ್ಧಿಯಾಗುತ್ತದೆ.
ಓಂ ನಮೋ ನಾರಾಯಣಾಯ
ಇದರ ಅರ್ಥ “ನಾನು ಸರ್ವಶಕ್ತನಾದ ದೇವರಿಗೆ ನಮಸ್ಕರಿಸುತ್ತೇನೆ”. ಈ ಮಂತ್ರವನ್ನು ಪಠಿಸುವವರು, ಎಲ್ಲಾ ರೀತಿಯ ಪಾಪಗಳಿಂದ ಮುಕ್ತರಾಗುತ್ತಾರೆ ಮತ್ತು ನೇರವಾಗಿ ವೈಕುಂಠ ಧಾಮಕ್ಕೆ (ವಿಷ್ಣುವಿನ ವಾಸಸ್ಥಾನ) ಹೋಗುತ್ತಾರೆ. ಜೊತೆಗೆ ಒಬ್ಬ ವ್ಯಕ್ತಿ ಎಲ್ಲಾ ಲೌಕಿಕ ಸುಖ, ಆಸೆಗಳಿಂದ ಮುಕ್ತನಾಗಿ ಮೋಕ್ಷವನ್ನು ಪಡೆಯಬಹುದು ಎಂದು ಪುರಾಣಗಳು ಹೇಳುತ್ತವೆ.
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ ।
ವಿಶ್ವಾಧಾರಂ ಗಗನ ಸದೃಶಂ ಮೇಘವರ್ಣಂ ಶುಭಾಂಗಂ ।
ಲಕ್ಷ್ಮೀಕಾಂತಂ ಕಮಲನಯನಂ ಯೋಗಿಹೃಧ್ಯಾನಗಮ್ಯಂ ।
ವಂದೇ ವಿಷ್ಣುಂ ಭವಭಯಹರಂ ಸರ್ವಲೋಕೈಕನಾಥಂ ।।
ಈ ಬ್ರಹ್ಮಾಂಡದ ರಕ್ಷಕನಾದ ವಿಷ್ಣುವಿಗೆ ನಾನು ನಮಿಸುತ್ತೇನೆ. ಶಾಂತ ಸ್ವರೂಪನೂ, ಆದಿಶೇಷನ ಮೇಲೆ ಮಲಗಿರುವವನು, ನಾಭಿಯಲ್ಲಿ ಕಮಲ ಉಳ್ಳವನೂ, ದೇವತೆಗಳಿಗೆ ಒಡೆಯನು, ವಿಶ್ವಕ್ಕೆ ಆಧಾರವಾಗಿರುವವನೂ, ಆಕಾಶದಂತೆ ವ್ಯಾಪಕನೂ, ಮೋಡದಂತೆ ಶಾಮಲವರ್ಣನೂ, ಶುಭಕರ ಅಥವಾ ಮಂಗಳಕರ ದೇಹ ಉಳ್ಳವನೂ, ಲಕ್ಷ್ಮೀ ದೇವಿಯ ಪತಿಯೂ, ಕಮಲದ ಕಣ್ಣುಳ್ಳವನೂ ಮತ್ತು ಧ್ಯಾನದಿಂದ ಯೋಗಿಗಳಿಗೆ ತಲುಪಬಲ್ಲವನು, ಲೌಕಿಕ ಅಸ್ತಿತ್ವದ ಭಯವನ್ನು ಹೋಗಲಾಡಿಸುವವನು, ಸರ್ವ ಲೋಕಗಳ ಅಧಿಪತಿ, ಏಕೈಕ ಪ್ರಭುವೂ ಆದ ಆ ವಿಷ್ಣುವಿಗೆ ನಾನು ನಮಸ್ಕರಿಸುತ್ತೇನೆ ಎನ್ನುವುದಾಗಿದೆ. ಈ ಮಂತ್ರ ಪಠಣೆಯಿಂದ ಬಯಸಿದ ಕಾರ್ಯಗಳೆಲ್ಲವೂ ನೆರವೇರುತ್ತದೆ.
ತ್ವಮೇವ ಮಾತಾ ಚ ಪಿತಾ ತ್ವಮೇವ ।
ತ್ವಮೇವ ಬಂಧುಶ್ಚ ಸಖಾ ತ್ವಮೇವ ।
ತ್ವಮೇವ ವಿದ್ಯಾ ದ್ರವಿಣಮ್ ತ್ವಮೇವ ।
ತ್ವಮೇವ ಸರ್ವಂ ಮಮ ದೇವ ದೇವ ॥
ಈ ಶ್ಲೋಕದ ಅರ್ಥ “ದೇವ ದೇವನೇ, ನೀನೇ ನನ್ನ ತಾಯಿ ತಂದೆ, ಬಂಧು, ಸ್ನೇಹಿತ, ನೀನೇ ವಿದ್ಯೆ, ನೀನೇ ಸಕಲ ಸಂಪತ್ತು, ನೀನೇ ನನ್ನ ಸರ್ವಸ್ವವೂ ಆಗಿದ್ದೀಯಾ” ಎಂಬುದಾಗಿದೆ. ಈ ಮಂತ್ರದ ಪಠಣವು ವ್ಯಕ್ತಿಯು ಏಕಾಗ್ರತೆ ಪಡೆಯಲು ಸಹಾಯ ಮಾಡುತ್ತದೆ. ಜೊತೆಗೆ ಭಗವಾನ್ ವಿಷ್ಣು ಭಕ್ತರಿಗೆ ಜೀವನದ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ನೀಡುತ್ತಾನೆ ಎಂದು ನಂಬಲಾಗಿದೆ. ಹಾಗಾಗಿ ಮಾರ್ಗದರ್ಶನದ ಅಗತ್ಯವಿರುವವರು ಈ ಮಂತ್ರವನ್ನು ಪಠಿಸಬೇಕು.
ಓಂ ನಾರಾಯಣಾಯ ವಿದ್ಮಹೇ,
ವಾಸುದೇವಾಯ ಧೀಮಹೀ
ತನ್ನೋ ವಿಷ್ಣು ಪ್ರಚೋದಯಾತ್
ಈ ವಿಷ್ಣು ಗಾಯತ್ರಿ ಮಂತ್ರವು ತುಂಬಾ ಶಕ್ತಿಯುತ ಮಂತ್ರವಾಗಿದೆ ಮತ್ತು ಹಿಂದೂ ಧರ್ಮದಲ್ಲಿ ಹೆಚ್ಚು ಪೂಜನಿಯವಾಗಿದೆ. ಈ ಮಂತ್ರ ಪಠಣೆಯಿಂದ ಮನಸ್ಸಿನಲ್ಲಿರುವ ಎಲ್ಲಾ ರೀತಿಯ ಭಯ ತೊಲಗಿಸಬಹುದಾಗಿದೆ. ಈ ವಿಷ್ಣು ಗಾಯತ್ರಿ ಮಂತ್ರವನ್ನು ಪಠಣೆ ಮಾಡಿದರೆ ಅಂದುಕೊಂಡ ಕೆಲಸಗಳು ಸರಾಗವಾಗಿ ಆಗುತ್ತದೆ.
ಲೇಖಕರು: ಧಾರ್ಮಿ ಕಚಿಂತಕರು ಮತ್ತು ಸಲಹೆಗಾರರು . ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564
ಮತ್ತಷ್ಟು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







