ಅರಮನೆಯಲ್ಲಿ ಅದ್ಧೂರಿ ವಿವಾಹ : ಚೈತನ್ಯ ಜೊತೆ ಹಸೆಮಣೆ ಏರಿದ ನಿಹಾರಿಕಾ
ಮೆಗಾ ಸ್ಟಾರ್ ಕುಟುಂಬದಲ್ಲಿ ಸಡಗರ ಸಂಭ್ರಮ ಮನೆ ಮಾಡಿದೆ. ಚಿರಂಜೀವಿ ಸಹೋದರ ನಾಗಬಾಬು ಅವರು ಪುತ್ರಿಯ ವಿವಾಹ ಅದ್ಧೂರಿಯಾಗಿ ನೆರವೇರಿದೆ. ಕುಟುಂಬಸ್ಥರು, ಆಪ್ತರು, ಸ್ನೇಹಿತರ ಸಮ್ಮುಖದಲ್ಲಿ ಚೈತನ್ಯ ಜೊನ್ನಲಗಡ್ಡ ನಿಹಾರಿಕಾ ಕೊರಳಿಗೆ ಮಾಂಗಲ್ಯ ಧಾರಣೆ ಮಾಡಿದ್ದಾರೆ.
ಹಿಂದೂ, ಕ್ರಿಶ್ಚಿಯನ್ ಮಹಿಳೆಯರನ್ನು ಬಲವಂತವಾಗಿ ಮದುವೆ ಮಾಡಿಸಿ ಚೀನಾಕ್ಕೆ ಮಾರಾಟ ಮಾಡುತ್ತಿರುವ ಪಾಕಿಸ್ತಾನ
ರಾಜಸ್ಥಾನದ ಉದಯ್ ಪುರದ ಉದಯ್ ವಿಲಾಸ ಅರಮನೆಯಲ್ಲಿ ಅದ್ದೂರಿ ಮದುವೆ ಸಮಾರಂಭ ನೆರವೇರಿದೆ. ಡಿಸಂಬರ್ 9 ಸಂಜೆ 7.15ರ ಮುಹೂರ್ತದಲ್ಲಿ ಇಬ್ಬರೂ ಹಸೆಮಣೆ ಏರಿದ್ದು, ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಇನ್ನೂ ಮದುವೆಯಲ್ಲಿ ಕುಟುಂಬವರು, ಆಪ್ತರು, ಸ್ನೇಹಿತರು ಸೇರಿ ಕೇವಲ ನೂರು ಮಂದಿ ಮಾತ್ರ ಭಾಗಿಯಾಗಿದ್ದರು. ಇನ್ನೂ ಕಳೆದ ಐದು ದಿನಗಳಿಂದ ಮೆಹಂದಿ, ಅರಿಶಿಣ, ಸಂಗೀತ ಶಾಸ್ತ್ರ ಸೇರಿದಂತೆ ಎಲ್ಲಾ ಶಾಸ್ತ್ರಗಳು ಬಹಳ ಅದ್ಧೂರಿಯಾಗಿ ಸಡಗರ ಸಂಭ್ರದಿಂದ ನೆರವೇರಿತ್ತು. ಇನ್ನೂ ನವಜೋಡಿ, ,ಮದುವೆ ಫೋಟೋಗಳು, ನಿವರಿಕಾ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ರಾರಜಿಸುತ್ತಿದ್ದವು.
ಇದೀಗ ವಿವಾಹ ಸಂಪನ್ನವಾಗಿದೆ. ಇನ್ನೂ ಮಧುಮಗಳು ನಿಹಾರಿಕಾ ಗೋಲ್ಡ್ ಕಲರ್ ಸೀರೆಯಲ್ಲಿ ಮಿಂಚಿದ್ರೆ ವರ ಚೈತನ್ಯ ಕಂದು ಮತ್ತು ಗೋಲ್ಡ್ ಬಣ್ಣದ ಶೇರ್ವಾನಿ ಧರಿಸಿದ್ದರು. ಇನ್ನೂ ಇವರಿಬ್ಬರ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇನ್ನೂ ಮದುವೆಯಲ್ಲಿ ಅಲ್ಲು ಅರ್ಜುನ್ ಕುಟುಂಬ, ಪವನ್ ಕಲ್ಯಾಣ್ ಕುಟುಂಬ, ರಾಮ್ ಚರಣ್, ಮೆಘಾಸ್ಟಾರ್ ಪರಿವಾರ, ಸಾಯಿ ಧರಮ್, ವೈಷ್ಣವ್ ತೇಜ್, ಸೇರಿದಂತೆ ಹಲವರು ಭಾಗಿಯಾಗಿ ಸಖತ್ ಎಂಜಾಯ್ ಮಾಡಿದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel