ಬೆಂಗಳೂರು: ಇಂದು ವಾಲ್ಮೀಕಿ ಜಯಂತಿಯನ್ನು ರಾಜ್ಯದಲ್ಲಿ ಆಚರಿಸಲಾಗುತ್ತಿದ್ದು, ಶಾಸಕರ ಭವನದಲ್ಲಿ ವಾಲ್ಮೀಕಿ ಪ್ರತಿಮೆಗೆ ಸಿಎಂ ಸಿದ್ದರಾಮಯ್ಯ ನಮಿಸಿದ್ದಾರೆ.
ಜಯಂತಿ ಸಮಾರಂಭದಲ್ಲಿ ವಾಲ್ಮೀಕಿ ಜ್ಯೋತಿಯನ್ನ ಸಿಎಂ ಬರಮಾಡಿಕೊಂಡರು. ಸಚಿವ ರಾಜಣ್ಣ, ಶಾಸಕ ದದ್ದಲ್, ಸಮುದಾಯದ ಸ್ವಾಮೀಜಿ ಸೇರಿ ಹಲವರು ಈ ವೇಳೆ ಇದ್ದರು.
ಪಾದಯಾತ್ರೆ ಮೂಲಕ ಬ್ಯಾಂಕ್ವೆಟ್ ಹಾಲ್ ಕಾರ್ಯಕ್ರಮಕ್ಕೆ ತೆರಳಿದ ಸಿಎಂಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ವಿವಿಧ ಕಲಾತಂಡಗಳಿಂದ ನೃತ್ಯದ ಮೂಲಕ ವಿಧಾನಸೌಧಕ್ಕೆ ಸಿಎಂ ಆಗಮಿಸಿದರು. ಆನಂತರ ವಾಲ್ಮೀಕಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿತ್ರದುರ್ಗದ ಕಿಲಾರೆ ಜೋಗಯ್ಯ, ಚಾಮರಾಜನಗರದ ಡಾ.ರತ್ನಮ್ಮ, ಬೆಳಗಾವಿಯ ರಾಜಶೇಖರ ತಳವಾರ, ಬೆಂಗಳೂರು ಕೇಂದ್ರದ ಕೆ.ಎಸ್.ಮೃತ್ಯುಂಜಯ, ಕಲಬುರಗಿಯ ರತ್ನಮ್ಮ ಬಿ ಸೋಗಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.