ಬೆಂಗಳೂರು: ರಾಜ್ಯದಲ್ಲಿನ ಬರದ ಕುರಿತು ಅಧ್ಯಯನ ನಡೆಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಸಿಎಂ ಸಿದ್ದರಾಮಯ್ಯ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯಕ್ಕಾಗಿ ಬಿಜೆಪಿಯಲರು ಇಂತಹ ಅಧ್ಯಯನ ಮಾಡುತ್ತಿದ್ದಾರೆ. ಇನ್ನೂ ಕೇಂದ್ರ ತಂಡ ಬರದ ವರದಿ ನೀಡಿಲ್ಲ. ಕೇಂದ್ರ ಅಧ್ಯಯನ ಮಾಡಿ ಹೋಗಿದೆ. ಇನ್ನೂ ಇವರೇನು ಅಧ್ಯಯನ ಮಾಡೋದು ಎಂದು ಗರಂ ಆಗಿದ್ದಾರೆ.
ಇಂತಹ ನಾಟಕವನ್ನು ಇವರು ರಾಜಕೀಯಕ್ಕಾಗಿ ಆಡುತ್ತಲೇ ಬಂದಿದ್ದಾರೆ. ಬಿಜೆಪಿಯವರು ಅಧ್ಯಯನ ಮಾಡುವುದು ಬಿಟ್ಟು, ತಮ್ಮ ಕೇಂದ್ರ ಸರ್ಕಾರವೇ ಮಾಡಿರುವ ಅಧ್ಯಯನದ ವರದಿಯ ಹಣ ಬಿಡುಗಡೆ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ.
ಕೇಂದ್ರ ಸರ್ಕಾರ (Central Govt) ಇದುವರೆಗೂ ಪರಿಹಾರ ನೀಡಿಲ್ಲ. 17,900 ಕೋಟಿ ರೂ. ಪರಿಹಾರ ಕೇಳಿದ್ದೇವೆ. 33,700 ಕೋಟಿ ನಷ್ಟವಾಗಿದೆ. ಅದನ್ನು ಮೊದಲು ಕೊಡಿಸುವ ಕಾರ್ಯವನ್ನು ರಾಜ್ಯ ಬಿಜೆಪಿಯವರು ಮಾಡಲಿ . ಹಳ್ಳಿಗಾಡಿನ ಜನರ ಮೇಲೆ ಪ್ರೀತಿ ಇದ್ದರೆ, ರೈತರ ಮೇಲೆ ಗೌರವ ಇದ್ದರೆ, ಕರ್ನಾಟಕದ ಮೇಲೆ ಕಾಳಜಿ ಇದ್ದರೆ, ಮೊದಲು ಪರಿಹಾರ ಕೊಡಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.