ಗದಗ: ರಾಜ್ಯದ ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರ ಮುಂದುವರೆದಿದ್ದು, ಗೋಡೆ ಕುಸಿದು ದಂಪತಿ ಪ್ರಾಣಾಪಾಯದಿಂದ ಪಾರಾದ ಘಟನೆ ಗದಗ್ನಲ್ಲಿ ನಡೆದಿದೆ.
ಇಂದು ಬೆಳಗಿನ ಜಾವ ದಂಪತಿ ನಿದ್ದೆಯಲ್ಲಿದ್ದ ವೇಳೆ ಏಕಾಏಕಿ ಮನೆ ಗೋಡೆ ಕುಸಿದು ಬಿದ್ದಿದೆ. ಕೂಡಲೇ ದಂಪತಿಯ ಕಿರುಚಾಟ ಕೇಳಿದ ಸ್ಥಳೀಯರು ಮಣ್ಣು-ಕಲ್ಲುಗಳ ನಡುವೆ ಸಿಕ್ಕ ದಂಪತಿಯನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ..
ಗದಗ ತಾಲೂಕಿನ ಕಣವಿಯ ಕುರುಬರ ಓಣಿಯ ರೇವಣಸಿದ್ದೇಶ್ವರ ಗುಡಿ ಸಮೀಪ ಈ ಘಟನೆ ನಡೆದಿದೆ. ಘಟನೆಯಲ್ಲಿ ಗೂಳಪ್ಪ ಬಸಾಪೂರ(60) ಮತ್ತು ರೇಣವ್ವ ಗೂಳಪ್ಪ ಬಸಾಪೂರ(55) ಗಾಯಗೊಂಡಿದ್ದು, ಜಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.