ಯೋಧರಿಗೆ ಶಸ್ತ್ರಾಸ್ತ್ರ ಬಳಸಲು ಸಂಪೂರ್ಣ ಸ್ವಾತಂತ್ರ್ಯ – ಜಿ.ಕೆ.ಕಿಶನ್ ರೆಡ್ಡಿ
ಹೈದರಾಬಾದ್, ಜೂನ್ 23: ಚೀನಾ ಸೈನಿಕರನ್ನು ನಿಭಾಯಿಸಲು ಹಾಗೂ ಭಾರತದ ಭೂಮಿಯನ್ನು ಕಾಪಾಡಿಕೊಳ್ಳಲು ಯೋಧರಿಗೆ ಶಸ್ತ್ರಾಸ್ತ್ರ ಬಳಸಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಅಂತ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕೆ.ಕಿಶನ್ ರೆಡ್ಡಿ ಹೇಳಿದ್ದಾರೆ.
ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕೆ.ಕಿಶನ್ ರೆಡ್ಡಿ ಅವರು ಚೀನಾದ ಸೈನಿಕರನ್ನು ನಿಭಾಯಿಸಲು ಮತ್ತು ಭಾರತದ ಗಡಿ ಪ್ರದೇಶವನ್ನು ರಕ್ಷಿಸಲು ಯೋಧರಿಗೆ ಶಸ್ತ್ರಾಸ್ತ್ರ ಬಳಸಲು ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಹೇಳಿದ್ದಾರೆ.
ಗಾಲ್ವಾನ್ ಕಣಿವೆಯಲ್ಲಿ ನಡೆದ ಚೀನಾ ಭಾರತ ಘರ್ಷಣೆಯಲ್ಲಿ ಹುತಾತ್ಮರಾದ ಯೋಧ ಕರ್ನಲ್ ಸಂತೋಷ್ ಬಾಬು ಕುಟುಂಬಸ್ಥರನ್ನು ಭೇಟಿ ಮಾಡಿದ ಸಚಿವ ಜಿ.ಕೆ.ಕಿಶನ್ ರೆಡ್ಡಿ, ಬಳಿಕ ಮಾಧ್ಯಮಗಳ ಬಳಿ ಮಾತನಾಡಿ ಭಾರತೀಯ ಸೇನೆಗೆ ಗಡಿಯಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ಶಸ್ತ್ರಾಸ್ತ್ರ ಬಳಸಲು ಸರ್ಕಾರ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ. ಚೀನಾದ ಸೈನಿಕರನ್ನು ನಿಭಾಯಿಸಲು ನಮ್ಮ ಭೂಪ್ರದೇಶಗಳನ್ನು ರಕ್ಷಿಸಿಕೊಳ್ಳಲು ಮತ್ತು ಭಾರತೀಯ ಯೋಧರ ಪ್ರಾಣವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಸೇನೆಗೆ ಶಸ್ತ್ರಾಸ್ತ್ರ ಬಳಸುವುದಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಗಾಲ್ವಾನ್ ಕಣಿವೆಯಲ್ಲಿನ ಸಂಘರ್ಷದ ಬಳಿಕ ಹಲವೆಡೆ ಚೀನಾ ವಿರುದ್ಧ ಪ್ರತಿಭಟನೆ , ಚೀನಾ ವಿರೋಧಿಸಿ ಅಭಿಯಾನಗಳು ನಡೆಯುತ್ತಿದೆ. ಆದರೆ ಜನರು ಇದರ ಜೊತೆಗೆ ತಾವಾಗಿಯೇ ಚೀನಾದ ಉತ್ಪನ್ನಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಜಿ.ಕೆ.ಕಿಶನ್ ರೆಡ್ಡಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.