ಗದಗ: ಕಾಂಗ್ರೆಸ್ ಸರ್ಕಾರ (Karnaraka Govt) ಕರ್ನಾಟಕವನ್ನೇ ಮಾರಾಟಕ್ಕೆ ಇಟ್ಟಿದೆ ಎಂದು ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (Basavaraj Bommai) ಆರೋಪಿಸಿದ್ದಾರೆ.
ಗದಗ ನಗರದ ತೋಂಟದಾರ್ಯ ಕಲ್ಯಾಣ ಕೇಂದ್ರದಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಕೃತಜ್ಞತಾ ಸಮಾವೇಶದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕಾಂಗ್ರೆಸ್ ನಲ್ಲಿ (Congress ಕೇವಲ ಅಧಿಕಾರದ ದಾಹ ಇದೆಯೇ ಹೊರತು, ಬೇರೆ ಯಾವುದೂ ಇಲ್ಲ. ಕುರ್ಚಿಗಾಗಿ ಕಾಂಗ್ರೆಸ್ ಕಿತ್ತಾಡುವುದನ್ನು ಜನರು ಪ್ರತಿ ದಿನ ನೋಡುತ್ತಿದ್ದಾರೆ. ಯಾರು ಸಿಎಂ ಆಗಬೇಕು? ಯಾರು, ಎಷ್ಟು ಜನ ಡಿಸಿಎಂ ಆಗಬೇಕು? ಯಾವ ಜಾತಿಯವರು ಡಿಸಿಎಂ ಆಗಬೇಕು? ಎಂಬ ಕಚ್ಚಾಟ ಕಾಂಗ್ರೆಸ್ನಲ್ಲಿ ನಡೆಯುತ್ತಿದೆ. ಅಭಿವೃದ್ಧಿ ಶೂನ್ಯ ಅಂತ ಕಾಂಗ್ರೆಸ್ ಪಕ್ಷದ ಶಾಸಕರೇ ಹೇಳ್ತಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಈ ಸರ್ಕಾರ ದಿವಾಳಿ ಆಗಿದೆ. ಸರ್ಕಾರದ ವಿರುದ್ಧ ಜನರ ಆಂದೋಲನ ಪ್ರಾರಂಭ ಮಾಡುವ ಕಾಲವೂ ಬಂದಂತಾಗಿದೆ. ಈ ಪಕ್ಷ ರಾಜ್ಯವನ್ನು ಮಾರಾಟ ಮಾಡುವುದಕ್ಕು ಮುನ್ನವೇ ನಾವು ಎಚ್ಚೆತ್ತುಕೊಳ್ಳಬೇಕು ಎಂದು ಹೇಳಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲೇ ಹೇಳಿದ್ದೆನೆ, ಈಗಲೂ ಹೇಳ್ತೀನಿ. 1 ವರ್ಷದಲ್ಲಿ ವಿಧಾನಸಭೆ ಚುನಾವಣೆ ಬಂದೇ ಬರುತ್ತೆ. ಗದಗನಲ್ಲಿ ಮತ್ತೊಮ್ಮೆ 4 ಕ್ಷೇತ್ರದಲ್ಲಿ ಬಿಜೆಪಿ ಶಾಸಕರನ್ನು ಆಯ್ಕೆ ಮಾಡುವ ಮೂಲಕ ಕಮಲದ ಬಾವುಟ ಹಾರಿಸುವ ಸಂಕಲ್ಪ ಮಾಡೋಣ ಎಂದು ಹೇಳಿದ್ದಾರೆ.