ಕಾಂಗ್ರೆಸ್ ಮುಖಂಡ ಹಲ್ತಫ್ ಹಳ್ಳೂರನನ್ನು ಬಂಧಿಸಬೇಕು : ಪ್ರಮೋದ ಮುತಾಲಿಕ್
ಹುಬ್ಬಳ್ಳಿ: ನಗರದ ಹಳೇ ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಭೇಟಿ ನೀಡಿದ್ದಾರೆ.
ಠಾಣೆಗೆ ಭೇಟಿ ನೀಡಿದ ಪ್ರಮೋದ ಮುತಾಲಿಕ್ ಅವರು ಡಿಸಿಪಿ ಗೋಪಾಲ್ ಜತೆ ಪ್ರಕರಣದ ಕುರಿತು ಠಾಣೆಯಲ್ಲಿ ಚರ್ಚೆ ನಡೆಸಿದ್ದಾರೆ. ಹಾಗೇ ಠಾಣೆಯ ಪಕ್ಕದಲ್ಲಿರುವ ದಿಡ್ಡಿ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಈ ದೇವಸ್ಥಾನಕ್ಕೆ ಪುಂಡರು ಕಲ್ಲು ಎಸೆದಿದ್ದರು. ಹೀಗಾಗಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಗಲಭೆ ಸಂಬಂಧ ಮಾತನಾಡಿದ ಪ್ರಮೋದ ಮುತಾಲಿಕ್ ಅವರು ಗಲಭೆ ಹಿಂದೆ ಕಾಂಗ್ರೇಸ್ ಕೈವಾಡವಿದೆ. ಕಾಂಗ್ರೆಸ್ ಮುಖಂಡ ಹಲ್ತಫ್ ಹಳ್ಳೂರನನ್ನು ಬಂಧಿಸಬೇಕು. ಕಿಡಿಗೇಡಿಗಳು ಪೊಲೀಸರನ್ನೇ ಹತ್ಯೆಗೈಯಲು ಪ್ರಯತ್ನಿಸಿದ್ದಾರೆ. ಅಲ್ಲದೇ ಬಂಧಿತ ಮೌಲ್ವಿ ವಸಿಂ ಪಠಾಣಗೆ ಬಾಂಗ್ಲಾದ ಲಿಂಕ್ ಇದೆ. ವಸೀಂ ರಜಾ ಅಕಾಡೆಮಿಯ ಅಧ್ಯಕ್ಷನಾಗಿದ್ದಾನೆ. ರಜಾ ಅಕಾಡೆಮಿಯ ಮೂಲ ಬಾಂಗ್ಲಾದೇಶದಲ್ಲಿದ್ದು, ಈ ಕುರಿತು ಕುಲಂಕುಶವಾಗಿ ತನಿಕೆಯಾಗಬೇಕು ಎಂದು ಒತ್ತಾಯಿಸಿದರು.
ಇನ್ನೂ ರಾಜ್ಯ ಬಿಜೆಪಿ ಸರಕಾರ ಇಂಥವರ ವಿರುದ್ಧ ಕ್ರಮಕೈಗೊಳ್ಳಲು ಹೆದರುತ್ತಿದೆ. ನೀವು ಕೂಡ ಬುಲ್ಡೋಜರ್ ತೆಗೆದುಕೊಂಡು ಬನ್ನಿ. ವಾಸಿಂ ಪಠಾಣ್ ಜೊತೆ ಇಬ್ಬರು ರೌಡಿ ಶೀಟರ್ ಬಂಧಿಸಿದ್ದಾರೆ. ಹಿಂದೂಗಳು ಮತ್ತು ಪೊಲೀಸರನ್ನು ಭಯ ಬೀಳಿಸುವ ಹುನ್ನಾರವಿದ್ದು, ಜೀವದ ಹಂಗು ತೊರೆದು ಪೊಲೀಸರು ಕೆಲಸ ಮಾಡಿದ್ದಾರೆ.
ಅಲ್ಲದೇ ಗಲಭೆ ಮಾಡಲು ಮೊದಲೇ ಪ್ಲ್ಯಾನ್ ಆಗಿತ್ತು ಅನ್ನೋದಕ್ಕೆ ಸಾಕ್ಷಿ ಇದೆ. ಬಂಧಿತರ ವಿರುದ್ಧ ಕೋಕಾ ಆಕ್ಟ್ ಹಾಕಿ ಒದ್ದು ಒಳಗೆ ಹಾಕಲಿ. ಬಿಜೆಪಿಯವರು ಈಗಲಾದರು ಗಂಡಸ್ತನ ತೋರಿಸಲಿ. ಹುಬ್ಬಳ್ಳಿ ಗಲಭೆಗೆ ವಾಟ್ಸಪ್ ಸ್ಟೇಟಸ್ ಒಂದು ನೆಪ ಮಾತ್ರ ಎಂದರು.