ಮೈಸೂರು : ರಾಜ್ಯದಲ್ಲಿ ಸರ್ಕಾರ ಸತ್ತಿದೆ. ಸಚಿವರೂ ಕೆಲಸ ಮಾಡುತ್ತಿಲ್ಲ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಎಸ್.ಟಿ ಸೋಮಶೇಖರ್ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಮತನಾಡಿದ ಅವರು, ‘ಸಿದ್ದರಾಮಯ್ಯನವರು ವೀರಾವೇಶದಿಂದ ಮೈಸೂರಿನಲ್ಲಿ ಏನೇನೋ ಮಾತನಾಡಿದ್ದಾರೆ.
ಇದೆ ತಿಂಗಳ 21ರಂದು ಅಧಿವೇಶನ ಆರಂಭವಾಗಲಿದೆ. ಸದನದೊಳಗೂ ಅದೇ ರೀತಿ ಮಾತಾಡಲಿ. ಹೊಸ ಸುದ್ದಿಗಳನ್ನು ಇಲ್ಲಿ ಓದಿ
ಅಷ್ಟೇ ವೀರಾವೇಶದಿಂದ ಉತ್ತರ ನೀಡುವಂಥ ಶಕ್ತಿಯನ್ನು ದೇವರು ನಮಗೂ ನೀಡಿದ್ದಾನೆ’ ಎಂದಿದ್ದಾರೆ.
‘ವಿರೋಧ ಪಕ್ಷದವರ ಕೆಲಸ ಏನಿದೆ? ವಿರೋಧ ಮಾಡುವುದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಾರೆ.
ನಾವು ಆಡಳಿತ ಪಕ್ಷದವರು ಆಡಳಿತ ನಡೆಸಲು ಸಿದ್ಧತೆ ಮಾಡಿಕೊಳ್ಳುತ್ತೇವೆ’ ಎಂದು ಸಚಿವರು ಹೇಳಿದ್ದಾರೆ.








