ಭಾರತದ ರಾಕೆಟ್ ಉಡಾವಣಾ ಕೇಂದ್ರ ಶ್ರೀಹರಿಕೋಟ ಉದ್ಯೋಗಿಗಳಿಗೆ ಕೊರೊನಾ ಸೋಂಕು
ನೆಲ್ಲೂರು, ಜುಲೈ 27: ಸಾಂಕ್ರಾಮಿಕ ರೋಗದಿಂದ ಸುಮಾರು 6 ತಿಂಗಳುಗಳ ಕಾಲ ಹೊರಗುಳಿದ ನಂತರ ಭಾರತದ ರಾಕೆಟ್ ಉಡಾವಣಾ ಕೇಂದ್ರ ಶ್ರೀಹರಿಕೋಟ ತನ್ನ ಮೊದಲ ಕೊರೊನಾವೈರಸ್ ಪ್ರಕರಣವನ್ನು ವರದಿ ಮಾಡಿದೆ. ರಾಕೆಟ್ ಬಂದರಿನ ಇಬ್ಬರು ಉದ್ಯೋಗಿಗಳಿಗೆ ಕೊರೋನವೈರಸ್ ಸೋಂಕು ದೃಢಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆಂಧ್ರಪ್ರದೇಶದ ಸುಲ್ಲೂರ್ಪೆಟ್ಟಾದಲ್ಲಿರುವ ತಮ್ಮ ಊರಿನಿಂದ ಅವರು ಹಿಂತಿರುಗಿದ್ದರು. ಬಹುಶಃ ಅವರಿಗೆ ಅಲ್ಲಿಂದಲೇ ಸೋಂಕು ತಗುಲಿರಬಹುದು ಎಂದು ಶಂಕಿಸಲಾಗಿದೆ.

ಮೂಲಗಳ ಪ್ರಕಾರ, ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ಹಲವಾರು ಉದ್ಯೋಗಿಗಳು ರಾಕೆಟ್ ಬಂದರಿನಿಂದ 18 ಕಿ.ಮೀ ದೂರದಲ್ಲಿರುವ ಸುಲ್ಲೂರ್ಪೆಟ್ಟಾದಿಂದ ಬಂದವರಾಗಿದ್ದಾರೆ. ಚೆಲ್ಲೈನ ಹತ್ತಿರದ ಕೊಯೆಂಬೆಡು ಮಾರುಕಟ್ಟೆಯಿಂದಾಗಿ ಸುಲ್ಲರ್ಪೆಟ್ಟಾದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ ಮತ್ತು ಈ ಪ್ರದೇಶವನ್ನು ಧಾರಕ ವಲಯವೆಂದು ಘೋಷಿಸಲಾಗಿದೆ.
ಇಬ್ಬರು ಉದ್ಯೋಗಿಗಳಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಶ್ರೀಹರಿಕೋಟಾದ ಘಟಕ ಮತ್ತು ಸತೀಶ್ ಧವನ್ ಸ್ಪೇಸ್ ಸೆಂಟರನಲ್ಲಿ ಪೂರ್ಣಪ್ರಮಾಣದ ಸ್ಯಾನಿಟೈಸೇಷನ್ ನಡೆಸಲಾಗಿದೆ. ಕೇಂದ್ರದಲ್ಲಿ ಕನಿಷ್ಠ ಉದ್ಯೋಗಿಗಳಷ್ಟೇ ಕೆಲಸ ಮಾಡುತ್ತಿದ್ದು, ರಾಜ್ಯ ವಿಧಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಇಲ್ಲಿ ಪಾಲಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.








