ಬಳ್ಳಾರಿ: ರಾಜ್ಯದಲ್ಲಿ ಕೊರೊನಾಗೆ ಹೆದರಿ ಕೆಲವರು ಆತ್ಮಹತ್ಯೆ ಮಾಡಿಕೊಂಡರೆ, ಮತ್ತೆ ಕೆಲವರು ಆತಂಕದಿಂದಲೇ ರೋಗ ಲಕ್ಷಣ ಉಲ್ಬಣ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಕೊರೊನಾಗೆ ಹೆದರಿಯೇ ಹಲವರ ಜೀವಗಳು ಹೋಗುತ್ತಿವೆ ಎಂಬ ಸಂಗತಿ ಇತ್ತೀಚಿನ ಕೊರೊನಾ ಗೆದ್ದು ಬಂದವರಿಂದ ವ್ಯಕ್ತವಾಗುತ್ತಿದೆ.
ಆದರೆ ಶತಾಯುಷಿ ಅಜ್ಜಿಯೊಬ್ಬರು ಕೊರೊನಾ ಗೆದ್ದು ಬಂದು ಪ್ರತಿಯೊಬ್ಬರೂ ಸ್ಪೂರ್ತಿಯಾಗಿರುವ ಘಟನೆ ಬಳ್ಳಾರಿ ಜಿಲ್ಲೆಯಲ್ಲಿ ನಡೆದಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಗೆದ್ದ ಮೊದಲ ಶತಾಯುಷಿ ಅಜ್ಜಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.
ಬಳ್ಳಾರಿ ಜಿಲ್ಲೆಯ ಹೂವಿನ ಹಡಗಲಿಯ 101 ಹರೆಯದ ಅಜ್ಜಿ ಕೊರೊನಾ ಗೆದ್ದು ಬಂದವರು. ಇವರ ಮನೆಯಲ್ಲಿ ನಾಲ್ಕೂ ಜನ ಸದಸ್ಯರಿಗೆ ಕೊರೊನಾ ಪಾಸಿಟಿವ್ ಆಗಿತ್ತು. ಮೊದಲು ಮಗನಿಗೆ ಪಾಸಿಟಿವ್ ಅಗಿತ್ತು, ಆ ಮೂಲಕ ಅಜ್ಜಿಯನ್ನು ಸೇರಿಸಿ ಕುಟುಂಬದ ನಾಲ್ವರಿಗೂ ಪಾಸಿಟಿವ್ ಧೃಡ ಆಗಿತ್ತು. ಎದ್ದು ಓಡಾಡಲು ಸಾದ್ಯವಿಲ್ಲದ ಅಜ್ಜಿಯನ್ನು ಅಸ್ಪತ್ರೆಗೆ ಸೇರಿಸುವುದು ಸ್ವಲ್ಪ ಕಷ್ಟವಾಗಿತ್ತು.
ವೈದ್ಯರ ಸಲಹೆಯಂತೆ ಅಜ್ಜಿಯನ್ನು ಹೋಂ ಐಸೋಲೇಷನ್ ಮಾಡಲಾಗಿತ್ತು. ಇದೀಗ ಅಜ್ಜಿ ಸೇರಿ ಕುಟುಂಬದ ಎಲ್ಲರೂ ಕೊರೊನಾದಿಂದ ಮುಕ್ತರಾಗಿದ್ದಾರೆ.
ಕೊರೊನಾದಿಂದ ಜನ ನಮ್ಮನ್ನ ಬೇರೆ ಥರ ನೋಡುವಂತಾಗಿತ್ತು ಅಂತ ಬೇಸರ ವ್ಯಕ್ತಪಡಿಸಿದ್ದಾರೆ ಅಜ್ಜಿಯ ಮೊಮ್ಮಗ. ಇದೀಗ ಕೊರೊನಾ ಗೆದ್ದ ಕುಟುಂಬ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.
ಏಪ್ರಿಲ್ ಒಂದರಿಂದ ನೌಕರರ ಸಂಬಳದ ರೂಲ್ಸ್ ಕಂಪ್ಲೀಟ್ ಚೇಂಜ್: ಕೈಗೆ ಬರೋ ಕಾಸು ಕಮ್ಮಿ ಆದ್ರೂ ರಿಟೈರ್ಮೆಂಟ್ ಲೈಫ್ ಸೂಪರ್
ತಿಂಗಳಿಡೀ ಕತ್ತೆ ಥರ ದುಡಿಯೋದೆ ಒಂದನೇ ತಾರೀಖು ಬರೋ ಆ ಸಂಬಳದ ಮೆಸೇಜ್ ನೋಡೋಕೆ ಅಲ್ವಾ? ಆದ್ರೆ ಏಪ್ರಿಲ್ ಒಂದರಿಂದ ನಮ್ಮ ನಿಮ್ಮೆಲ್ಲರ ಸಂಬಳದ ರೂಲ್ಸ್ ಕಂಪ್ಲೀಟ್...








