ಜೈಪುರ: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಾಯಕರಿಗೆ ಗೋಮೂತ್ರ ಪ್ರೋಕ್ಷಣೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಶಾಸಕ ಬಾಲಮುಕುಂದ್ ಆಚಾರ್ಯ (Balmukund Acharya) ಗೆ ಗೋಮೂತ್ರ ಪ್ರೋಕ್ಷಣೆ ಮಾಡುವ ಮೂಲಕ ಶುದ್ಧೀಕರಣ ಮಾಡಲಾಗಿದೆ.
ಜೈಪುರ ಮುನ್ಸಿಪಲ್ ಕಾರ್ಪೊರೇಷನ್ ಹೆರಿಟೇಜ್ (ಜೆಎಂಸಿಎಚ್) ಕಚೇರಿಯನ್ನು ಭ್ರಷ್ಟಾಚಾರದ ಆರೋಪದಿಂದ ಮುಕ್ತಗೊಳಿಸಬೇಕೆಂದು ಹವಾ ಮಹಲ್ ಶಾಸಕ ಆಚಾರ್ಯ, ಗಂಗಾಜಲ ಮತ್ತು ಗೋಮೂತ್ರ ಮಿಶ್ರಣ ಮಾಡಿ ಕೌನ್ಸಿಲರ್ಗಳು ಮತ್ತು ಆವರಣದ ಮೇಲೆ ಸಿಂಪಡಿಸಿದರು.
ಭ್ರಷ್ಟಾಚಾರದ ಆರೋಪ ಹೊತ್ತಿದ್ದ ಮಾಜಿ ಮೇಯರ್ ಮುನೇಶ್ ಗುರ್ಜರ್ ಎಂಬುವವರು ಜಾಗಕ್ಕೆ ಕುಸುಮ್ ಯಾದವ್ ಅವರನ್ನು ಆಯ್ಕೆ ಮಾಡಲಾಯಿತು. ಅವರಿಗೆ ಕಾಂಗ್ರೆಸ್ 7 ಮತ್ತು ಪಕ್ಷೇತರ ಒಬ್ಬ ಸದಸ್ಯರ ಬೆಂಬಲ ನೀಡಿದರು. ಹೀಗಾಗಿ ಇವರೆಲ್ಲ ಬಿಜೆಪಿ ಸೇರ್ಪಣೆಗೊಂಡರು. ಅಧಿಕಾರ ವಹಿಸಿಕೊಳ್ಳುವ ಮೊದಲು, ಶಾಸಕ ಆಚಾರ್ಯ ಅವರು ಜೆಎಂಸಿಎಚ್ ಆವರಣ, ಕೌನ್ಸಿಲರ್ಗಳು ಮತ್ತು ಅಧಿಕಾರಿಗಳಿಗೆ ‘ಶುದ್ಧೀಕರಣ’ ಸಮಾರಂಭ ಮಾಡಲಾಯಿತು.