ದಾವಣಗೆರೆ: ಸ್ಯಾಂಡಲ್ವುಡ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ಸಾಕು ಪ್ರಾಣಿಗಳೆಂದರೆ ಎಲ್ಲಿದ ಪ್ರೀತಿ. ತಮ್ಮ ಫಾರ್ಮ್ಹೌಸ್ನಲ್ಲಿ ಹಸುಗಳು ಸೇರಿದಂತೆ ಸಾಕು ಪ್ರಾಣಿಗಳ ಲೋಕವೇ ತುಂಬಿ ತುಳುಕುತ್ತಿದೆ.
ಆದರೂ, ದರ್ಶನ್ ಪ್ರಾಣಿಗಳ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಇತ್ತೀಚೆಗೆ ಧಾರವಾಡದ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಫಾರ್ಮ್ಹೌಸ್ಗೆ ತೆರಳಿದ್ದ ದರ್ಶನ್, ಕುದುರೆ ಹಾಗೂ ಆಕಳು ಮತ್ತು ಮೇಕೆಗಳನ್ನು ಖರೀದಿಸಿದ್ದರು. ಅಷ್ಟೇ ಅಲ್ಲ ಎತ್ತಿನ ಬಂಡಿಯಲ್ಲಿ ಒಂದು ಸುತ್ತು ರೌಂಡ್ ಹಾಕಿ ಎಂಜಾಯ್ ಮಾಡಿದ್ದರು.
ಇದೀಗ ದರ್ಶನ್ ಮತ್ತೆರಡು ಕುದುರೆಗಳ ಒಡೆಯರಾಗಿದ್ದಾರೆ. ದಾವಣಗೆರೆಯಲ್ಲಿ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್ ಭೇಟಿಯಾದ ದರ್ಶನ್ ವಿದೇಶಿ ತಳಿಯ ಕುದುರೆಗಳ ಬಗ್ಗೆ ಮಾಹಿತಿ ಪಡೆದರು. ದರ್ಶನ್ರ ಆಸಕ್ತಿ ನೋಡಿದ ಎಸ್.ಎಸ್ ಮಲ್ಲಿಕಾರ್ಜುನ್, ಎರಡು ಕುದುರೆಗಳನ್ನು ಉಚಿತವಾಗಿ ಗಿಫ್ಟ್ ನೀಡಿದ್ದಾರೆ.
ಲಾಕ್ಡೌನ್ ಶುರುವಾದ ಮೇಲೆ ಸಿನಿಮಾ ಕೆಲಸಗಳು ನಿಂತಿವೆ. ಹಾಗಾಗಿ ಕುರಿ, ಕೋಳಿ, ಆಕಳು, ಕುದುರೆಗಳನ್ನು ಪಡೆದು ಸಾಕುತ್ತಿದ್ದೇನೆ. ಇತ್ತಿಚೆಗಷ್ಟೇ ವಿನಯ್ ಕುಲಕರ್ಣಿ ಅವರಿಂದ ಒಂದಷ್ಟು ಜಾನುವಾರು ಪಡೆದುಕೊಂಡಿದ್ದೆ. ಇದೀಗ ಮಲ್ಲಿಕಾರ್ಜುನ್ ಬಳಿ ಒಳ್ಳೇ ತಳಿಯ ಕುದುರೆಗಳು ಇರುವುದು ಗೊತ್ತಾಯಿತು. ಹಾಗಾಗಿ ಅವುಗಳನ್ನು ತೆಗೆದುಕೊಂಡು ಹೋಗಲು ಬಂದಿದ್ದೇನೆ ಎಂದು ದರ್ಶನ್ ಹೇಳಿದ್ದಾರೆ.
******
ಕೇರಳ ಮತ್ತು ಕೊಳ್ಳೇಗಾಲದ ಮಹಾ ವಶೀಕರಣ ಮಾಂತ್ರಿಕರು ಮತ್ತು ತಾಂತ್ರಿಕರು ಪಂಡಿತ್ ಸಂತೋಷ್ ಆಚಾರ್ಯ ಗುರೂಜಿ
ಇವರು ನಿಮ್ಮ ಸಮಸ್ಯೆಗಳಾದ ವಶೀಕರಣ, ವಿವಾಹ, ಸಂತಾನ, ಪ್ರೀತಿ ಪ್ರೇಮದಲ್ಲಿ ನಂಬಿ ಮೋಸ ಹೋಗಿದ್ರೆ, ಇಷ್ಟ ಪಟ್ಟ ಪುರುಷ ಮತ್ತು ಸ್ತ್ರಿ ನಿಮ್ಮ ವಶ ಆಗಬೇಕಾದರೆ ಮತ್ತು ಲೈಂಗಿಕ ಸಮಸ್ಯೆ, ಸಾಲಬಾಧೆ, ಗುಪ್ತ ಸಮಸ್ಯೆಗಳಿಗೆ ಕೇರಳದ ಭದ್ರಕಾಳಿ ದೇವಿ ಶಕ್ತಿಯಿಂದ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ.
ದೂರವಾಣಿ ಸಂಖ್ಯೆ 9901005534
ಕರೆ ಅಥವಾ ವಾಟ್ಸಾಪ್ ಮಾಡಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಿ.