ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಅವರ ಗೆಳತಿ ಪವಿತ್ರಾಗೌಡ ಸೇರಿದಂತೆ ಟೀಂ ಜೈಲು ಪಾಲಾಗಿದೆ. ಇನ್ನೊಂದೆಡೆ ಪೊಲೀಸರು ಪ್ರಕರಣದ ಕುರಿತು ಇಂಚಿಂಚು ತನಿಖೆ ನಡೆಸುತ್ತಿದ್ದಾರೆ. ಕೊಲೆಯ ಜಾಡು ಬೆನ್ನತ್ತಿರುವ ಪೊಲೀಸರು ಎಲ್ಲ ಆರೋಪಿಗಳ ಮೊಬೈಲ್ ಡಿವೈಸ್ ಜಪ್ತಿ ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಮತ್ತು ಪವಿತ್ರಾ ಗೌಡ ಬಗೆಗಿನ ಹಲವು ಸಿಕ್ರೇಟ್ ಹೊರ ಬಿದ್ದಿವೆ.
ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳಿಗೆ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಹಲವರು ಬೇರೆಯವರ ಹೆಸರಿನಲ್ಲಿದ್ದ ಸಿಮ್ ಕಾರ್ಡ್ ಬಳಸುತ್ತಿದ್ದರು ಎಂಬ ಮಾಹಿತಿ ಸಿಕ್ಕಿದೆ. ಹೀಗಾಗಿ ಈ ವಿಷಯ ಪೊಲೀಸರಿಗೆ ಹೊಸ ಟ್ವಿಸ್ಟ್ ನೀಡಿದೆ. ರಾಜರಾಜೇಶ್ವರಿ ನಗರದ ಶೆಡ್ ನಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ ಕುರಿತು ಇಂಚಿಂಚು ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಗಳ ಮೊಬೈಲ್ ಜಪ್ತಿ ಮಾಡಿರುವ ಪೋಲಿಸ್ ಫೋನ್ ಮೂಲಕ ಅನೇಕ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೇ, ಹಲವಾರು ಸಾಕ್ಷ್ಯಾಧಾರಗಳನ್ನು ಕೂಡ ಈ ಮೊಬೈಲ್ ಫೋನ್ ಗಳು ನೀಡಿವೆ ಎನ್ನಲಾಗಿದೆ.
ಈ ಮಧ್ಯೆ ದರ್ಶನ್ ಹಾಗೂ ಪವಿತ್ರಾ ಗೌಡ ಬಳಸಿರುವ ಸಿಮ್ ನೈಜ ಹೆಸರು ಯಾರದ್ದು ಎಂದು ಪೊಲೀಸರು ಪತ್ತೆ ಮಾಡಿದ್ದಾರೆ. ಹೀಗಾಗಿ ಸದ್ಯ ಅವರಿಗೆಲ್ಲ ನೋಟಿಸ್ ಜಾರಿ ಮಾಡಲಾಗಿದೆ. ದರ್ಶನ್ ಬೆಂಗಳೂರಿನ ಪ್ರತಿಷ್ಠಿತ ಶಾಸಕರ ಕಾರು ಚಾಲಕನ ಹೆಸರಿನಲ್ಲಿ ಸಿಮ್ ಪಡೆದಿರುವುದು ತಿಳಿದು ಬಂದಿದೆ. ಈ ಕುರಿತು ಉಪ ಮೇಯರ್ ಮೋಹನ್ ರಾಜ್ ಗೆ ನೋಟೀಸ್ ನೋಟೀಸ್ ಜಾರಿ ಮಾಡಿದ್ದಾರೆ. ಮೊಬೈಲ್ ಸಿಮ್ ವಿಚಾರವಾಗಿ ಪವಿತ್ರಾ ಸ್ನೇಹಿತೆ ಸಮತಾಗೂ ನೋಟೀಸ್ ಜಾರಿ ಮಾಡಲಾಗಿದೆ.
ಹೇಮಂತ್ ಎಂಬ ಹೆಸರಿನಲ್ಲಿದ್ದ ಮೊಬೈಲ್ ಸಿಮ್ ನ್ನು ದರ್ಶನ್ ಬಳಕೆ ಮಾಡುತ್ತಿದ್ದರು. ಅಷ್ಟೇ ಅಲ್ಲ, ನಟ ದರ್ಶನ್ ಗ್ಯಾಂಗ್ ನ 7 ಜನರು ಬೇರೆಯವರ ಹೆಸರಿನಲ್ಲಿ ಸಿಮ್ ಬಳಕೆ ಮಾಡುತ್ತಿರುವುದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಚಿತ್ರದುರ್ಗದ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಲ್ಲಿ ಪ್ರಮುಖರಾದ ನಂದೀಶ್ ಎಂಬುವವರು ಹೇಮಂತ್ ಎಂಬಾತನ ಹೆಸರಿನಲ್ಲಿ ಹಾಗೂ ಪ್ರದೋಶ್ ಎಂಬಾತ ಸುಪರ್ಣ ಹೆಸರಿನಲ್ಲಿ ಸಿಮ್ ಬಳಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹೀಗಾಗಿ ಪೊಲೀಸರು ಸಿಮ್ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.
ಹಾಗಾದರೆ, ಇವರೇಕೆ ಬೇರೆಯವರ ಹೆಸರಿನಲ್ಲಿ ಸಿಮ್ ಪಡೆದಿದ್ದರು? ಬೇರೆಯವರ ಹೆಸರಿನ ಸಿಮ್ ಬಳಕೆ ಅಗತ್ಯವೇನಿತ್ತು? ಯಾವ ಉದ್ದೇಶದಿಂದ ಈ ಡಿ ಗ್ಯಾಂಗ್ ಬೇರೆಯವರ ಹೆಸರಿನ ಸಿಮ್ ಬಳಸಿ, ಇವರ ಪ್ಲಾನ್ ಏನಾಗಿತ್ತು? ಎಂಬೆಲ್ಲ ಆಯಾಮಗಳಲ್ಲಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನೋಟಿಸ್ ನೀಡಿದವರನ್ನು ಕರೆ ತಂದು ವಿಚಾರಣೆ ನಡೆಸಲು ಈಗಾಗಲೇ ಪೊಲೀಸರು ತಯಾರಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಿಮ್ ಬಳಕೆ ಮಾಡುತ್ತಿದ್ದ ನಟ ದರ್ಶನ್, ಪವಿತ್ರಗೌಡ, ಪ್ರದೂಷ್, ಕಾರ್ತಿಕ್, ಕೇಶವಮೂರ್ತಿ, ನಿಖಿಲ್ ನಾಯಕ್ ಕುರಿತು ಹಲವು ಪ್ರಶ್ನೆಗಳು ಪೊಲೀಸರು ಅವರ ಮುಂದಿಡಲಿದ್ದಾರೆ. ಮನೋಜ್ ಹೆಸರಿನಲ್ಲಿದ್ದ ಸಿಮ್ ಪವಿತ್ರಾ ಬಳಕೆ ಮಾಡುತ್ತಿದ್ದಾರೆ ನಟ ದರ್ಶನ್ ಅವರು ಸಿಪಿ ಹೇಮಂತ್, ಬಿನ್. ಎನ್ ಚಂದನ್ ಹೆಸರಿನಲ್ಲಿರುವ ಸಿಮ್ ಕಾರ್ಡ್ ಬಳಸುತ್ತಿದ್ದರು ಎನ್ನಲಾಗುತ್ತಿದೆ. ಈಗಾಗಲೇ ಪ್ರಕರಣದಲ್ಲಿ ದರ್ಶನ್ ಆಂಡ್ ಟೀಂ ಜೈಲು ಸೇರಿ ಎರಡು ವಾರಗಳು ಕಳೆದಿವೆ. ಪೊಲೀಸರು ಪ್ರಾಮಾಣಿಕವಾಗಿ ಇಂಚೂ ಮಾಹಿತಿ ಬಿಡದೆ ತನಿಖೆ ಕೈಗೊಂಡಿರುವುದರಿಂದಾಗಿ ದರ್ಶನ್ ಮತ್ತು ಗ್ಯಾಂಗ್ ಗೆ ಸಂಕಷ್ಟ ಅನುಭವಿಸುವಂತಾಗಿದೆ. ಇದನ್ನು ಗಮನಿಸಿದರೆ, ದರ್ಶನ್ ಆಂಡ್ ಗ್ಯಾಂಗ್ ಸದ್ಯಕ್ಕೆ ಜೈಲಿನಿಂದ ಆಚೆ ಬರುವುದು ಕಷ್ಟ ಎನ್ನಲಾಗುತ್ತಿದೆ.