ADVERTISEMENT
Sunday, December 14, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ರಾಜ್ಯ

ನನಗೇ ವಾರ್ನಿಂಗ್ ಕೊಡೋ ಮುನ್ನ ಹುಷಾರ್, ಕಾಮನ್ ಸೆನ್ಸ್ ಇಟ್ಟುಕೊಂಡು ಡೀಲ್ ಮಾಡಿ: ಪತ್ರ ಬರೆದವನಿಗೆ ಡಿಕೆಶಿ ಖಡಕ್ ಎಚ್ಚರಿಕೆ

Deal with common sense: DKS Khadak warns the person who wrote the letter

Shwetha by Shwetha
December 14, 2025
in ರಾಜ್ಯ, Newsbeat, State
Share on FacebookShare on TwitterShare on WhatsappShare on Telegram

ಬೆಂಗಳೂರು: ರಾಜ್ಯದ ಅಪಾರ್ಟ್‌ಮೆಂಟ್ ನಿವಾಸಿಗಳ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವ ಉದ್ದೇಶದಿಂದ ಕರೆಯಲಾಗಿದ್ದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪತ್ರ ಬರೆದ ವ್ಯಕ್ತಿಯೊಬ್ಬರ ವಿರುದ್ಧ ಕೆಂಡಾಮಂಡಲವಾದ ಪ್ರಸಂಗ ನಡೆದಿದೆ. ಪ್ರಧಾನಿ ಹಾಗೂ ಗೃಹ ಮಂತ್ರಿಗೇ ಹೆದರದೆ ಜೈಲಿಗೆ ಹೋಗಿ ಬಂದವನು ನಾನು, ನನಗೆ ಬೆದರಿಕೆ ಹಾಕಲು ಬರಬೇಡಿ ಎಂದು ಡಿಸಿಎಂ ಬಹಿರಂಗವಾಗಿಯೇ ಗುಡುಗಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಿನ್ನೆ ಬೆಳಿಗ್ಗೆ ನಗರಾಭಿವೃದ್ಧಿ ಇಲಾಖೆ ಹಾಗೂ ಗ್ರೇಟರ್ ಬೆಂಗಳೂರು ಅಥಾರಿಟಿ (GBA) ವತಿಯಿಂದ ಆಯೋಜಿಸಲಾಗಿದ್ದ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ಗಳ ಸಭೆಯಲ್ಲಿ ಈ ಹೈಡ್ರಾಮಾ ನಡೆದಿದೆ.

Related posts

ಕೇರಳದ ರಾಜಧಾನಿಯಲ್ಲಿ ಕಮಲ ಕಹಳೆ: 45 ವರ್ಷಗಳ ಕೆಂಪು ಕೋಟೆ ಛಿದ್ರ, ತಿರುವನಂತಪುರಂನಲ್ಲಿ ಬಿಜೆಪಿ ಐತಿಹಾಸಿಕ ದಿಗ್ವಿಜಯ

ಕೇರಳದ ರಾಜಧಾನಿಯಲ್ಲಿ ಕಮಲ ಕಹಳೆ: 45 ವರ್ಷಗಳ ಕೆಂಪು ಕೋಟೆ ಛಿದ್ರ, ತಿರುವನಂತಪುರಂನಲ್ಲಿ ಬಿಜೆಪಿ ಐತಿಹಾಸಿಕ ದಿಗ್ವಿಜಯ

December 14, 2025
2025ರ ಬಾಕ್ಸಾಫೀಸ್ ರಣರಂಗದಲ್ಲಿ ಸ್ಟಾರ್ ವಾರ್ ಠುಸ್: ಕೋಟಿ ಕೋಟಿ ಸುರಿದರೂ ಮಣ್ಣುಮುಕ್ಕಿದ 10 ಬಿಗ್ ಬಜೆಟ್ ಚಿತ್ರಗಳು

2025ರ ಬಾಕ್ಸಾಫೀಸ್ ರಣರಂಗದಲ್ಲಿ ಸ್ಟಾರ್ ವಾರ್ ಠುಸ್: ಕೋಟಿ ಕೋಟಿ ಸುರಿದರೂ ಮಣ್ಣುಮುಕ್ಕಿದ 10 ಬಿಗ್ ಬಜೆಟ್ ಚಿತ್ರಗಳು

December 14, 2025

ಕಿರಣ್ ಹೆಬ್ಬಾರ್ ಪತ್ರಕ್ಕೆ ಡಿಸಿಎಂ ಕೆಂಗೆಣ್ಣು

ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಸದಸ್ಯ ಕಿರಣ್ ಹೆಬ್ಬಾರ್ ಎಂಬುವವರು ಡಿಸಿಎಂ ಅವರಿಗೆ ಪತ್ರವೊಂದನ್ನು ಬರೆದು ಪ್ರಶ್ನಿಸಿದ್ದರು ಎನ್ನಲಾಗಿದೆ. ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿಲ್ಲ ಎಂದು ಎಚ್ಚರಿಕೆ ಧಾಟಿಯಲ್ಲಿ ಬರೆದಿದ್ದ ಈ ಪತ್ರ ಡಿ.ಕೆ. ಶಿವಕುಮಾರ್ ಅವರ ಕೋಪಕ್ಕೆ ಕಾರಣವಾಯಿತು. ಸಭೆಯಲ್ಲೇ ಆ ವ್ಯಕ್ತಿಯ ವಿರುದ್ಧ ಹರಿಹಾಯ್ದ ಡಿಸಿಎಂ, ನನ್ನ ಬಳಿ ವ್ಯವಹರಿಸುವಾಗ ಕನಿಷ್ಠ ಸಾಮಾನ್ಯ ಜ್ಞಾನ (Common Sense) ಇಟ್ಟುಕೊಂಡು ಮಾತನಾಡಿ ಎಂದು ತೀವ್ರ ತರಾಟೆಗೆ ತೆಗೆದುಕೊಂಡರು.

ದೆಹಲಿ ನಾಯಕರಿಗೇ ಹೆದರದವನು ನಾನು

ಕಿರಣ್ ಹೆಬ್ಬಾರ್ ಅವರನ್ನು ಉದ್ದೇಶಿಸಿ ಮಾತನಾಡಿದ ಡಿಕೆಶಿ, ನನ್ನನ್ನು ಹೆದರಿಸಲು ಬರಬೇಡಿ, ನಾನು ಯಾರಿಗೂ ಹೆದರುವವನಲ್ಲ. ಬಹುಶಃ ಕೆಲವರಿಗೆ ನಾನು ಯಾರು ಎನ್ನುವುದೇ ತಿಳಿದಿಲ್ಲ. ಸಾಕ್ಷಾತ್ ಪ್ರಧಾನ ಮಂತ್ರಿ ಹಾಗೂ ಕೇಂದ್ರದ ಗೃಹ ಸಚಿವರಿಗೇ ಹೆದರದೆ, ಜೈಲಿಗೆ ಹೋಗಿ ಬಂದವನು ನಾನು. ಇನ್ನು ಈ ಹೆಬ್ಬಾರ್‌ಗೆ ನಾನು ಹೆದರುತ್ತೇನಾ? ನಿಮ್ಮ ವಾರ್ನಿಂಗ್‌ಗಳಿಗೆಲ್ಲಾ ಬಗ್ಗುವ ಜಾಯಮಾನ ನಮ್ಮದಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿಮ್ಮ ಕೆಲಸ ಮಾಡಿಸಿಕೊಳ್ಳಿ, ರಾಜಕೀಯ ಬೇಡ

ನಿಮ್ಮ ಸೇವೆ ಮಾಡಿದರೆ ನಾಲ್ಕು ಓಟು ಬರುತ್ತದೆ ಎಂಬ ಕಾರಣಕ್ಕೆ ನಾವಿಲ್ಲಿ ಕೆಲಸ ಮಾಡುತ್ತಿದ್ದೇವೆ. ಕೊಟ್ಟ ಮಾತನ್ನು ನಾವು ಉಳಿಸಿಕೊಂಡಿಲ್ಲವೇ? ಎಂದು ಪ್ರಶ್ನಿಸಿದ ಡಿಕೆಶಿ, ಈ ಸರ್ಕಾರವನ್ನು ಹೆದರಿಸಲು ಬರಬೇಡಿ. ನಿಮ್ಮ ಸಮಸ್ಯೆಗಳೇನಿದ್ದರೂ ಹೇಳಿಕೊಳ್ಳಿ, ಕೆಲಸ ಮಾಡಿಸಿಕೊಳ್ಳಿ. ಆದರೆ ಸರ್ಕಾರಕ್ಕೆ ವಾರ್ನ್ ಮಾಡುವುದು, ಬೆದರಿಕೆ ಹಾಕುವುದು ನನ್ನ ಬಳಿ ನಡೆಯಲ್ಲ ಎಂದು ಕಡಕ್ ಆಗಿ ಹೇಳಿದರು.

ಬೆಂಗಳೂರಿನಲ್ಲಿ ಬಿಜೆಪಿಗೆ ಹೆಚ್ಚು ವೋಟ್ ಬಂದಿದೆ ಅಂತ ಗೊತ್ತು

ಬೆಂಗಳೂರಿನಲ್ಲಿ ಬಿಜೆಪಿಗೆ ತಾನೇ ಹೆಚ್ಚು ವೋಟು ಹೋಗಿರೋದು? ಆ ಭ್ರಮೆ ಬೇಡ. ಬಿಜೆಪಿಗೆ ವೋಟ್ ಹಾಕಿದ್ದೇವೆ ಎಂದು ಬೆದರಿಕೆ ಹಾಕಿದರೆ ನಮ್ಮ ಸರ್ಕಾರದ ವಿರುದ್ಧ ನಡೆಯುವುದಿಲ್ಲ. ನಾನು ನೇರವಾಗಿ, ದಿಟ್ಟವಾಗಿ ಮಾತನಾಡುವವನು. ನನ್ನ ಮಾತು ಕಟುವಾಗಿ ಕಂಡರೂ ನಾನು ಮನಸ್ಪೂರ್ತಿಯಾಗಿ ಕೆಲಸ ಮಾಡುತ್ತೇನೆ. ನಿಮ್ಮನ್ನು ಕರೆಯಲೇಬೇಕು ಎನ್ನುವ ಯಾವ ನಿಯಮವೂ ಇರಲಿಲ್ಲ. ಆದರೂ ನಿಮ್ಮ ಮೇಲಿನ ವಿಶ್ವಾಸದಿಂದ ನಾನೇ ಕರೆದು ಮಾತನಾಡುತ್ತಿದ್ದೇನೆ ಎಂದು ಸ್ಪಷ್ಟಪಡಿಸಿದರು.

ನಮ್ಮ ಗ್ಯಾರಂಟಿ ನಿಮಗೆ ತಲುಪಿಲ್ಲವೇ?

ಯಾರೋ ಕಿರಣ್ ಹೆಬ್ಬಾರ್ ಅಂತೆ, ಆತ ನನಗೇ ಎಚ್ಚರಿಕೆ ಕೊಡುತ್ತಾನೆ ಎಂದು ಗರಂ ಆದ ಡಿಕೆಶಿ, ನನಗೆ ಎಚ್ಚರಿಕೆ ಕೊಡುವ ಮುನ್ನ ಹುಷಾರಾಗಿರಿ ಎಂದರು. ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಮಗೆ ತಲುಪಿಲ್ಲವೇ? ಬಿಜೆಪಿ ಆಡಳಿತವಿರುವ ರಾಜ್ಯಗಳೇ ನಮ್ಮ ಯೋಜನೆಗಳನ್ನು ಜಾರಿ ಮಾಡುತ್ತಿವೆ. ಇದನ್ನೆಲ್ಲಾ ಮೊದಲು ತಿಳಿದುಕೊಳ್ಳಿ. ನಾನು ಸಾವಿರಾರು ಅಪಾರ್ಟ್‌ಮೆಂಟ್ ಕಟ್ಟಿದ್ದೇನೆ, ಜಾಗ ಕೊಟ್ಟಿದ್ದೇನೆ. ನಮ್ಮ ಅಧಿಕಾರಿಗಳು ನಿಮಗೆ ಸಹಕರಿಸದಿದ್ದರೆ ಏನು ಮಾಡುತ್ತೀರಾ? ಸುಮ್ಮನೆ ನಮ್ಮನ್ನೇ ದೂಷಣೆ ಮಾಡಬೇಡಿ ಎಂದು ಕಿವಿಮಾತು ಹೇಳಿದರು.

ShareTweetSendShare
Join us on:

Related Posts

ಕೇರಳದ ರಾಜಧಾನಿಯಲ್ಲಿ ಕಮಲ ಕಹಳೆ: 45 ವರ್ಷಗಳ ಕೆಂಪು ಕೋಟೆ ಛಿದ್ರ, ತಿರುವನಂತಪುರಂನಲ್ಲಿ ಬಿಜೆಪಿ ಐತಿಹಾಸಿಕ ದಿಗ್ವಿಜಯ

ಕೇರಳದ ರಾಜಧಾನಿಯಲ್ಲಿ ಕಮಲ ಕಹಳೆ: 45 ವರ್ಷಗಳ ಕೆಂಪು ಕೋಟೆ ಛಿದ್ರ, ತಿರುವನಂತಪುರಂನಲ್ಲಿ ಬಿಜೆಪಿ ಐತಿಹಾಸಿಕ ದಿಗ್ವಿಜಯ

by Shwetha
December 14, 2025
0

ತಿರುವನಂತಪುರಂ: ದೇವರ ನಾಡು ಕೇರಳದ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯವೊಂದು ಸೃಷ್ಟಿಯಾಗಿದೆ. ದಶಕಗಳಿಂದ ಕಮ್ಯುನಿಸ್ಟ್ (ಎಲ್‌ಡಿಎಫ್) ಮತ್ತು ಕಾಂಗ್ರೆಸ್ (ಯುಡಿಎಫ್) ಪಕ್ಷಗಳ ನೇರ ಹಣಾಹಣಿಗೆ ಸಾಕ್ಷಿಯಾಗಿದ್ದ ಕೇರಳದಲ್ಲಿ,...

2025ರ ಬಾಕ್ಸಾಫೀಸ್ ರಣರಂಗದಲ್ಲಿ ಸ್ಟಾರ್ ವಾರ್ ಠುಸ್: ಕೋಟಿ ಕೋಟಿ ಸುರಿದರೂ ಮಣ್ಣುಮುಕ್ಕಿದ 10 ಬಿಗ್ ಬಜೆಟ್ ಚಿತ್ರಗಳು

2025ರ ಬಾಕ್ಸಾಫೀಸ್ ರಣರಂಗದಲ್ಲಿ ಸ್ಟಾರ್ ವಾರ್ ಠುಸ್: ಕೋಟಿ ಕೋಟಿ ಸುರಿದರೂ ಮಣ್ಣುಮುಕ್ಕಿದ 10 ಬಿಗ್ ಬಜೆಟ್ ಚಿತ್ರಗಳು

by Shwetha
December 14, 2025
0

ಸಿನಿಮಾ ಎನ್ನುವುದು ಬಣ್ಣದ ಲೋಕ ಮಾತ್ರವಲ್ಲ ಅದೊಂದು ಭಯಾನಕ ಜೂಜು ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಬೆಳ್ಳಿಪರದೆ ಮೇಲೆ ಅದೃಷ್ಟ ಪರೀಕ್ಷೆಗೆ ಇಳಿದವರು ರಾತ್ರೋರಾತ್ರಿ ಕುಬೇರರಾಗುವುದು ಎಷ್ಟು ಸತ್ಯವೋ...

ಸಂಗಮೇಶನು ಅರಿವನೆ ಒಳಹಡ್ಡ ಬಂದಿದೆ : ಸಂಕ್ರಾಂತಿ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹಾಬದಲಾವಣೆ, ಕೋಡಿಶ್ರೀಗಳ ಸ್ಫೋಟಕ ಭವಿಷ್ಯ

ಸಂಗಮೇಶನು ಅರಿವನೆ ಒಳಹಡ್ಡ ಬಂದಿದೆ : ಸಂಕ್ರಾಂತಿ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹಾಬದಲಾವಣೆ, ಕೋಡಿಶ್ರೀಗಳ ಸ್ಫೋಟಕ ಭವಿಷ್ಯ

by Shwetha
December 14, 2025
0

ಬೆಳಗಾವಿ : ಚಳಿಗಾಲದ ಅಧಿವೇಶನದ ಕಾವು ಒಂದೆಡೆಯಾದರೆ, ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕತ್ವ ಬದಲಾವಣೆಯ ಚರ್ಚೆ ಇನ್ನೊಂದೆಡೆ ಜೋರಾಗಿದೆ. ಸಿದ್ದರಾಮಯ್ಯನವರು ಸಿಎಂ ಸ್ಥಾನದಿಂದ ಕೆಳಗಿಳಿಯುತ್ತಾರೆಯೇ? ಡಿಕೆ ಶಿವಕುಮಾರ್...

ಮೂರನೇ ಶಕ್ತಿಯ ಉದಯಕ್ಕೆ ಮುನ್ನುಡಿ ಬರೆದ ಸಿಎಂ ಇಬ್ರಾಹಿಂ; ಕಾಂಗ್ರೆಸ್-ಬಿಜೆಪಿ ಪಾಳಯದಲ್ಲಿ ನಡುಕ ಶುರು.!

ಮೂರನೇ ಶಕ್ತಿಯ ಉದಯಕ್ಕೆ ಮುನ್ನುಡಿ ಬರೆದ ಸಿಎಂ ಇಬ್ರಾಹಿಂ; ಕಾಂಗ್ರೆಸ್-ಬಿಜೆಪಿ ಪಾಳಯದಲ್ಲಿ ನಡುಕ ಶುರು.!

by Shwetha
December 14, 2025
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಲು ಕೇಂದ್ರ ಮಾಜಿ ಸಚಿವ ಸಿಎಂ ಇಬ್ರಾಹಿಂ ಸಜ್ಜಾಗಿದ್ದಾರೆ. ಪ್ರಸ್ತುತ ವ್ಯವಸ್ಥೆಯಿಂದ ಬೇಸತ್ತಿರುವ ಜನರಿಗಾಗಿ ತಾವು ಹೊಸ ಪಕ್ಷವೊಂದನ್ನು ಸ್ಥಾಪಿಸುತ್ತಿದ್ದು,...

ಮೆಸ್ಸಿ ಫ್ಲಾಪ್ ಶೋ : ಮೆಸ್ಸಿ ಅಭಿಮಾನಿಗಳ ರೌದ್ರಾವತಾರಕ್ಕೆ ರಣರಂಗವಾದ ಕೋಲ್ಕತ್ತಾ ಕ್ರೀಡಾಂಗಣ ಆಯೋಜಕರಿಗೆ ಜೈಲು, ಅಭಿಮಾನಿಗಳ ಆಕ್ರೋಶಕ್ಕೆ ಬೆದರಿದ ಫುಟ್ಬಾಲ್ ಜಗತ್ತು

ಮೆಸ್ಸಿ ಫ್ಲಾಪ್ ಶೋ : ಮೆಸ್ಸಿ ಅಭಿಮಾನಿಗಳ ರೌದ್ರಾವತಾರಕ್ಕೆ ರಣರಂಗವಾದ ಕೋಲ್ಕತ್ತಾ ಕ್ರೀಡಾಂಗಣ ಆಯೋಜಕರಿಗೆ ಜೈಲು, ಅಭಿಮಾನಿಗಳ ಆಕ್ರೋಶಕ್ಕೆ ಬೆದರಿದ ಫುಟ್ಬಾಲ್ ಜಗತ್ತು

by Shwetha
December 14, 2025
0

ಕೋಲ್ಕತ್ತಾ: ಫುಟ್ಬಾಲ್ ಲೋಕದ ಮಾಂತ್ರಿಕ, ಅರ್ಜೆಂಟೀನಾದ ವಿಶ್ವವಿಖ್ಯಾತ ಆಟಗಾರ ಲಿಯೋನೆಲ್ ಮೆಸ್ಸಿಯವರ ಕೋಲ್ಕತ್ತಾ ಭೇಟಿ ಕ್ರೀಡಾ ಹಬ್ಬವಾಗುವ ಬದಲು ದಾಂಧಲೆಯಲ್ಲಿ ಅಂತ್ಯಗೊಂಡಿದೆ. ಮೆಸ್ಸಿ ಮೇಲಿನ ಅಭಿಮಾನವು ಆಕ್ರೋಶವಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram