ಕಳೆದ 40 ದಿನಗಳಿಂದ ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಜಾರಿಯಲ್ಲಿದ್ದ ಲಾಕ್ ಡೌನ್ ಕಾರಣದಿಂದಾಗಿ ಮದ್ಯ ಮಾರಾಟ ನಿಷೇಧವಾಗಿತ್ತು. ಮದ್ಯವ್ಯಸನಿಗಳು ಕೂಡ ಮದ್ಯ ಲಭ್ಯವಿಲ್ಲದೆ ದಿನಗಳನ್ನು ಕಳೆಯುತ್ತಾ ಬಂದಿದ್ದು, ಮದ್ಯದ ಚಟದಿಂದ ಹೊರಗೆ ಬಂದಿದ್ದಾರೆ. ಆದರೆ ಮೇ 4 ರಿಂದ ಮದ್ಯ ಮಾರಾಟ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರಾದ ವೀರೇಂದ್ರ ಹೆಗ್ಗಡೆಯವರು ಪುನಃ ಮದ್ಯಸೇವನೆ ಆರಂಭಿಸುವುದು ಬೇಡ ಎಂದು ಜನರಲ್ಲಿ ಮನವಿ ಮಾಡಿದ್ದಾರೆ. ಕಳೆದ 40 ದಿನಗಳ ಕಾಲ ಮದ್ಯ ದೊರಕದ ಕಾರಣ, ಮದ್ಯ ಸೇವನೆ ಮಾಡದೆ, ಮದ್ಯಪಾನ ತ್ಯಜಿಸಿದ್ದಿರಿ. ಇದರಿಂದ ಮನೆಗಳಲ್ಲಿ ಸಂತೋಷ, ನೆಮ್ಮದಿ ಹೆಚ್ಚಾಗಿದೆ. ಅನೇಕರ ಆರೋಗ್ಯ ಸುಧಾರಿಸಿದೆ. ಮನೆಯ ಖರ್ಚು ಕಡಿಮೆಯಾಗಿದೆ. ಅಲ್ಲದೆ ಮದ್ಯ ಸೇವನೆ ಬಿಟ್ಟಿದ್ದರಿಂದ ನಮಗೇನೂ ಕೆಡುಕು ಸಂಭವಿಸಲಿಲ್ಲ. ಹಾಗಿರುವಾಗ ಇದೀಗ ಮತ್ತೊಮ್ಮೆ ಮದ್ಯ ಸೇವನೆ ಯಾಕೆ? ಆದುದರಿಂದ ದಯವಿಟ್ಟು ಯಾರೂ ಮದ್ಯ ಸೇವನೆಯನ್ನು ಪುನರ್ ಆರಂಭ ಮಾಡಬೇಡಿ. ಮದ್ಯಪಾನ ಮಾಡದಂತೆ ತಡೆಯಿರಿ. ಮದ್ಯಪಾನ ಶಾಶ್ವತವಾಗಿ ತ್ಯಜಿಸಿರಿ. ಆರೋಗ್ಯ, ಐಶ್ವರ್ಯ, ಕುಟುಂಬ ಭಾಗ್ಯ ಗಳಿಸಿರಿ. 40 ದಿನಗಳಲ್ಲಿ ಗಳಿಸಿದ ಆರೋಗ್ಯವನ್ನು ಜೀವನಪೂರ್ತಿ ಉಳಿಸಿಕೊಳ್ಳೊಣ.
ಎಂದು ತಮ್ಮ ಪ್ರಕಟಣೆಯ ಮೂಲಕ ಮನವಿಯನ್ನು ಮಾಡಿಕೊಂಡಿದ್ದಾರೆ.
ಗಾಂಧೀಜಿಯವರ ಕನಸಾಗಿದ್ದ ಮದ್ಯಸೇವನೆ ಮುಕ್ತ ಸಮಾಜದ ನಿರ್ಮಾಣ ನಮ್ಮ ಆಶಯವೂ ಕೂಡ ಎಂದಿರುವ ಧರ್ಮಸ್ಥಳದ ಧರ್ಮಾಧಿಕಾರಿಯವರು ಜನರು ಸುಖ ಸಂತೋಷವಾಗಿರಲು ಮದ್ಯಪಾನ ಶಾಶ್ವತವಾಗಿ ತ್ಯಜಿಸುವ ತೀರ್ಮಾನ ಮಾಡಿ. ದೇವರ ಹೆಸರಿನಲ್ಲಿ ಮದ್ಯ ತಿರಸ್ಕರಿಸುವ ಸಂಕಲ್ಪ ಮಾಡಿರಿ ಎಂದು ಜನರಿಗೆ ಹೆಗ್ಗಡೆಯವರು ಮನವಿ ಮಾಡಿಕೊಂಡಿದ್ದಾರೆ.
ಇರಾನ್ನ 45 ನಾವಿಕರ ಮೃತದೇಹ ಹಸ್ತಾಂತರ
ಹಿಂದೂ ಮಹಾಸಾಗರದಲ್ಲಿ ಇರಾನ್ ಯುದ್ಧನೌಕೆಯ ಮೇಲೆ ನಡೆದ ದಾಳಿಯಲ್ಲಿ ಸಾವನ್ನಪ್ಪಿದ 45 ನಾವಿಕರ ಮೃತದೇಹಗಳನ್ನು ಶ್ರೀಲಂಕಾ ಸರ್ಕಾರವು ಇರಾನ್ ರಾಯಭಾರ ಕಚೇರಿಗೆ ಹಸ್ತಾಂತರಿಸಿದೆ. ಈ ಘಟನೆ ಹಿಂದೂ...








