ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಕಾರ್ಣಿಕ ಕ್ಷೇತ್ರ ಆಳದಂಗಡಿಯ ಸತ್ಯದೇವತೆ ದೇವಸ್ಥಾನದ ಎದುರು ಮತ್ತೊಂದು ಪಡಾವ ನಡೆದಿದ್ದು, ಭಕ್ತರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಲಾಕ್ ಮಾಡಿ ನಿಲ್ಲಿಸಿದ್ದ ಅಟೋ ಇದ್ದಕ್ಕಿದ್ದಂತೆ ಸ್ಟಾರ್ಟ್ ಆಗಿ ತಾನೇ ಚಲಿಸಿದ್ದು, ಜನರು ಆಶ್ಚರ್ಯ ವ್ಯಕ್ತಪಡಿಸುವಂತೆ ಮಾಡಿದೆ. ಜೂ.28 ರಂದು ಬೆಳಗ್ಗೆ 10:30ರ ವೇಳೆಗೆ ಸತ್ಯದೇವತೆ ದೈವಸ್ಥಾನ ಮುಂದೆ ಆಟೋ ನಿಲ್ಲಿಸಿ ಚಾಲಕ ದೈವಸ್ಥಾನಕ್ಕೆ ತೆರಳಿದ್ದ. ಈ ಸಂದರ್ಭದಲ್ಲಿ ಆಟೋ ತನ್ನಿಂತಾನೆ ಸ್ಟಾರ್ಟ್ ಆಗಿ ಮುಂದೆಕ್ಕೆ ಸಾಗಿದೆ. ಅಲ್ಲದೇ, ಮುಂದೆ ನಿಲ್ಲಿಸಿದ್ದ ಬೈಕ್ ಗೆ ಡಿಕ್ಕಿಯಾಗಿದೆ.
ಆಟೋ ಚಲಿಸುವುದನ್ನು ಗಮನಿಸಿದ ಚಾಲಕ ತಕ್ಷಣ ದೈವಸ್ಥಾನದಿಂದ ಓಡಿಹೋಗಿ ಆಟೋ ನಿಲ್ಲಿಸಿದ್ದಾರೆ. ಘಟನೆಯ ದೃಷ್ಯ ದೈವಸ್ಥಾನದ ಸಿಸಿ ಕ್ಯಾಮದಲ್ಲಿ ಸೆರೆಯಾಗಿದೆ. ಐದು ವರ್ಷದ ಹಿಂದೆ ಕೂಡ ಇದೇ ಜಾಗದಲ್ಲಿ ಪವಾಡವೇ ನಡೆದಿತ್ತು.
ಉಡುಪಿ ಶಿರೂರು ಮಠದ ಸ್ವಾಮೀಜಿ ನಿಧನ ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರಮ್ಯಾ ಶೆಟ್ಟಿ ವಶಕ್ಕೆ ಪಡೆಯಲು ಪೊಲೀಸರು ಯತ್ನಿಸುತ್ತಿರುವಾಗ ಬುರ್ಖಾ ಧರಿಸಿ ರಮ್ಯಾ ಪರಾರಿಯಾಗಲು ಮುಂದಾಗಿದ್ದರು. ಆದರೆ, ಇದೇ ದೇವಸ್ಥಾನದ ಮುಂದೆ ರಮ್ಯಾ ಇದ್ದ ಕಾರು ಪಂಕ್ಚರ್ ಆಗಿ, ಪೊಲೀಸರ ಕೈಗೆ ರಮ್ಯಾ ಸಿಗುವಂತಾಗಿದೆ. ದೇವತೆಯ ಪವಾಡ ಕಂಡು ಜನರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.