ಧೋನಿ ದಂತಕಥೆ…. ಕೊಹ್ಲಿ ಸ್ಪೂರ್ತಿಯ ಚಿಲುಮೆ.. ಇದು ಸ್ಕೈನ ಖ್ಯಾತಿಯ ಸೂರ್ಯನ ವರ್ಣನೆ..!
ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಲಿ..
ಕಳೆದ 15-20 ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ನಲ್ಲಿ ಮುಂಚೂಣಿಯಲ್ಲಿ ಕೇಳಿಬರುತ್ತಿರುವ ಎರಡು ಹೆಸರು.
ವಿಶ್ವ ಕ್ರಿಕೆಟ್ ನಲ್ಲಿ ಟೀಮ್ ಇಂಡಿಯಾ ಯಶಸ್ಸಿನ ಉತ್ತುಂಗಕ್ಕೇರಿದ್ದು ಧೋನಿ ಮತ್ತು ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಎಂಬುದರಲ್ಲಿ ಎರಡು ಮಾತಿಲ್ಲ.
2007ರ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಮತ್ತು ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದು ಮಹೇಂದ್ರ ಸಿಂಗ್ ಧೋನಿಯ ನಾಯಕತ್ವದಲ್ಲಿ.
ಹಾಗೇ ಧೋನಿಯ ಉತ್ತರಾಧಿಕಾರಿಯಾಗಿರುವ ವಿರಾಟ್ ಕೊಹ್ಲಿ ಪ್ರತಿಷ್ಠಿತ ಐಸಿಸಿ ಪ್ರಶಸ್ತಿಗಳನ್ನು ಗೆದ್ದಿಲ್ಲ. ಆದ್ರೂ ವಿರಾಟ್ ಕೊಹ್ಲಿ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಗೆಲುವಿನ ಅಲೆಯಲ್ಲಿ ಮುನ್ನುಗ್ಗುವಂತೆ ಮಾಡಿದ್ದಾರೆ.
ಹಾಗಿದ್ರೆ ಇವರಿಬ್ಬರಲ್ಲಿ ಯಾರು ಗ್ರೇಟ್ ಅನ್ನೋ ಪ್ರಶ್ನೆ ಪ್ರಶ್ನೆಯಾಗಿಯೇ ಉಳಿದಿದೆ. ಯಾಕಂದ್ರೆ ಇಬ್ಬರು ಕೂಡ ಶ್ರೇಷ್ಠ ಆಟಗಾರರೇ.. ಅತ್ಯುತ್ತಮ ನಾಯಕರೇ. ಹಾಗಿದ್ರೂ ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿ ಒಂದು ಹೆಜ್ಜೆ ಮುಂದಿದ್ರೆ, ಧೋನಿ ನಾಯಕತ್ವದ ವಿಚಾರದಲ್ಲಿ ಕೊಹ್ಲಿಗಿಂತ ಮುಂದಿದ್ದಾರೆ. ಅಂಕಿ ಅಂಶಗಳ ಪ್ರಕಾರ ಕೊಹ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದಿದ್ರೂ ಕೂಡ ಧೋನಿಯ ಚಾಣಕ್ಯ ನೀತಿ ವಿರಾಟ್ ಅವರನ್ನು ನಾಯಕತ್ವದಲ್ಲಿ ಹಿಂದಿಕ್ಕಿದೆ.
ಅದೇನೇ ಇರಲಿ, ಇಬ್ಬರು ಕೂಡ ಟೀಮ್ ಇಂಡಿಯಾದ ಯಶಸ್ವಿನ ರೂವಾರಿಗಳು.
ಹಾಗೇ ಇವರಿಬ್ಬರ ಬಗ್ಗೆ ಮುಂಬೈ ಇಂಡಿಯನ್ಸ್ ತಂಡದ ಸ್ಕೈ ಖ್ಯಾತಿಯ ಸೂರ್ಯ ಕುಮಾರ್ ಯಾದವ್ ಏನು ಹೇಳ್ತಾರೆ.. ? ಸೂರ್ಯ ಕುಮಾರ್ ಯಾದವ್ ತನ್ನ ಇನ್ಸ್ಟಾ ಗ್ರಾಂ ನಲ್ಲಿ ಅಭಿಮಾನಿಗಳು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ್ದು ಹೀಗೆ.
ಮಹೇಂದ್ರ ಸಿಂಗ್ ಧೋನಿ ಮತ್ತು ವಿರಾಟ್ ಕೊಹ್ಕಿ ಅವರನ್ನು ಒಂದೇ ಪದದಲ್ಲಿ ವರ್ಣಿಸುವುದಾದ್ರೆ ಹೇಗೆ ಹೇಳ್ತಿರಿ ಅನ್ನೋ ಪ್ರಶ್ನೆಗೆ ಸೂರ್ಯ ಕುಮಾರ್ ಯಾದವ್ ಉತ್ತರ ಹೀಗಿದೆ.
ಮಹೇಂದ್ರ ಸಿಂಗ್ ಧೋನಿ ದಂತಕಥೆ…. ವಿರಾಟ್ ಕೊಹ್ಲಿ ಸ್ಪೂರ್ತಿಯ ಚಿಲುಮೆ ಎಂದು ಸೂರ್ಯ ಕುಮಾರ್ ಯಾದವ್ ಹೇಳಿದ್ದಾರೆ.
ಹಾಗಿದ್ರೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಬಗ್ಗೆ ಏನು ಹೇಳ್ತೀರಿ ಅಂದಾಗ ಸೂರ್ಯ ಹೇಳಿದ್ದು ಇಷ್ಟೇ.. ಹಿಟ್ ಮ್ಯಾನ್ ಅಂತ
ಇನ್ನು ಸೂರ್ಯಕುಮಾರ್ ಯಾದವ್ ಅವರ ಶ್ರೇಷ್ಠ ಇನಿಂಗ್ಸ್ ಯಾವುದು ಅನ್ನೋ ಪ್ರಶ್ನೆಗೆ, ಇಂಗ್ಲೆಂಡ್ ವಿರುದ್ಧದ ಚೊಚ್ಚಲ ಟಿ-ಟ್ವೆಂಟಿಯಲ್ಲಿ ಅರ್ಧಶತಕ ದಾಖಲಿಸಿದ್ದು. ಅದ್ರಲ್ಲೂ ಸೂರ್ಯಕುಮಾರ್ ಯಾದವ್ ತಾನು ಎದುರಿಸಿದ್ದ ಮೊದಲ ಎಸೆತ ಅಂದ್ರೆ ಜೋಫ್ರಾ ಆರ್ಚೆರ್ ಅವರ ಎಸೆತವನ್ನು ಸಿಕ್ಸರ್ ಬಾರಿಸಿದ್ದರು.
ಅಂದ ಹಾಗೇ, ಸೂರ್ಯಕುಮಾರ್ ಯಾದವ್ ಅನ್ನೋ ಪ್ರತಿಭೆ ಬೆಳಕಿಗೆ ಬಂದಿದ್ದು ಐಪಿಎಲ್ ಟೂರ್ನಿಯಲ್ಲಿ. ತನ್ನ ಹೊಡಿಬಡಿಯ ಆಟದ ಮೂಲಕವೇ ಗಮನ ಸೆಳೆದಿದ್ದ ಸ್ಕೈ, ಟೀಮ್ ಇಂಡಿಯಾದಲ್ಲೂ ತನಗೆ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡು ಮಿಂಚು ಹರಿಸಿದ್ದರು.








