ಡಿಜೆ ಹಳ್ಳಿ ಗಲಭೆ ಪ್ರಕರಣ ಸಂಬಂಧ ಅರವಿಂದ ಲಿಂಬಾವಳಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಮೇಲ್ನೋಟಕ್ಕೆ ನೋಡಿದ್ರೆ ಶಾಸಕರ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ವ್ಯವಸ್ಥಿತವಾದ ದಾಳಿಯನ್ನು ನಡೆಸಲಾಗಿದೆ. ಶ್ರೀನಿವಾಸ ಮೂರ್ತಿ, ಮುನೇಗೌಡ, ಅರುಣ್ ಮನೆಗೆ ಪೊಲೀಸರು ತಲುಪದ ಹಾಗೆ ತಡೆದಿದ್ದಾರೆ. ಮನೆಯಲ್ಲಿ ನಿಲ್ಲಿಸಲಾಗಿದ್ದ ವಾಹನ ರಸ್ತೆಗೆ ತಂದು ಬೆಂಕಿ ಹಾಕಿದ್ದಾರೆ. ಕಾಶ್ಮೀರದಲ್ಲೂ ಕೂಡ ಇಂತಹ ಪರಿಸ್ಥಿತಿ ಇಲ್ಲ. ಆ ರೀತಿ ಇಲ್ಲಿ ವರ್ತನೆ ಮಾಡಿದ್ದಾರೆ. ಪಕ್ಷ ಬೇಧ ಮರೆತು ಖಂಡಿಸುತ್ತೇವೆ. ನವೀನ್ ಫೇಸ್ ಬುಕ್ ಪೋಸ್ಟ್ ನಿಂದ ಗಲಾಟೆ ಪ್ರಾರಂಭವಾಯ್ತು ಎನ್ನಲಾಗಿದೆ. ಸಂಜೆ 5 ಗಂಟೆ ಪೋಸ್ಟ್ ನೋಡಿ ಎಂಟತ್ತು ಸಾವಿರ ಜನ ಸೇರಿದ್ದಾರೆ ಅನ್ನೊದಾದ್ರೆ. ಇದು ಆಕಸ್ಮಿಕನಾ ಅಥವಾ ವ್ಯವಸ್ಥಿತವಾಗಿ ಆಗಿದ್ಯಾ ಅನ್ನೋ ಪ್ರಶ್ನೆ ಎದುರಾಗತ್ತೆ. ಮನೆ ಲೂಟಿ ಮಾಡಿ ಬೆಂಕಿ ಇಟ್ಟಿದ್ದಾರೆ. ಇದು ಆಕಸ್ಮಿಕವಾದುದ್ದಲ್ಲ,ವ್ಯವಸ್ಥಿತ ಷಡ್ಯಂತರ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಯಾವ ಪುರುಷಾರ್ಥಕ್ಕೆ ಈ ಗಲಭೆ ಮಾಡುತ್ತಿದ್ದೀರಿ? ಕಾಂಗ್ರೆಸ್ ಸ್ಪಷ್ಟಪಡಿಸಲೀ, ಮೊದಲು ಗಲಾಟೆ ಖಂಡಿಸಲೀ. ಅಮಾಯಕರಿಗೆ ಆನ್ಯಾಯ ಆಗಿದೆ ಅಂತಾರೆ. ಅಮಾಯಕರು ಯಾರು?. ನನ್ನ ಪಕ್ಕ ಕುಳಿತಿದ್ದಾರಲ್ಲ ಅವರು ಅಮಾಯಕರು. ಪೊಲೀಸ್ ಸಿಬ್ಬಂದಿಗಳು ಅಮಾಯಕರು. ನಿಮ್ಮ ಪಕ್ಷದ ಕಾರ್ಯಕರ್ತರನ್ನು , ಶಾಸಕರನ್ನು ಮೊದಲು ರಕ್ಷಿಸಲು ಮುಂದಾಗಿ ಎಂದಿದ್ದಾರೆ.
ಅಲ್ಲದೇ ನಾನು ಪೊಲೀಸ್ ಇಲಾಖೆಗೆ ಅಭಿನಂದಿಸುತ್ತೇನೆ. ಅಂದು ಅವರು ಅಂತಹ ನಿರ್ಧಾರ ತೆಗೆದುಕೊಳ್ಳದಿದ್ರೆ ಮತ್ತಷ್ಟು ಅನಾಹುತಗಳು ಆಗುತ್ತಿತ್ತು. ಡಿ.ಕೆ.ಶಿವಕುಮಾರ್ ಹೇಳ್ತಾರೆ, ಬಿಜೆಪಿ ಪೊಲೀಸರನ್ನು ಬಳಸಿಕೊಂಡು ದೂರು ದಾಖಲಿಸುತ್ತಿದ್ದಾರೆ ಅಂತ. ಕಾಂಗ್ರೆಸ್ ಪಕ್ಷದ ನಾಯಕರ ಹಿಂದೆ ಯಾರೆಲ್ಲಾ ಇದ್ದರೂ ಎಂಬುದು ಮಾಧ್ಯಮಗಳಲ್ಲಿ ಬರುತ್ತಿದೆ. ಕಾನೂನು ವ್ಯವಸ್ಥೆಯಲ್ಲಿ ಯಾರನ್ನ ಬೇಕಾದ್ರೂ ತನಿಖೆ ಮಾಡುವ ಹಕ್ಕು ಪೊಲೀಸರಿಗೆ ಇದೆ. ವಿಚಾರಣೆ ಮಾಡುವ ಹಕ್ಕು ಪೊಲೀಸರಿಗೆ ಇದೆ. ಕರ್ನಾಟಕದ ಈ ಘಟನೆ ತಲೆ ತಗ್ಗಿಸುವಂತಿದೆ. ನಮ್ಮ ನಿಯೋಗ ಎರಡು ಪೊಲೀಸ್ ಠಾಣೆಗೂ ಭೇಟಿ ನೀಡಬೇಕಿದೆ ಎಂದು ಹೇಳಿದ್ದಾರೆ.
ಟಿಕೆಟ್ ಕೊಡಿಸುವುದಾಗಿ 2.5 ಕೋಟಿ ರೂ. ವಂಚನೆ; ಕೇಂದ್ರ ಸಚಿವರ ಸಹೋದರ ಅರೆಸ್ಟ್
ಹುಬ್ಬಳ್ಳಿ: ಲೋಕಸಭೆ ಚುನಾವಣೆಯಲ್ಲಿ (Loksabha Election) ಬಿಜೆಪಿ ಟಿಕೆಟ್ ಕೊಡಿಸುವುದಾಗಿ 2.25 ಕೋಟಿ ರೂ. ಸುಲಿಗೆ ಮಾಡಿದ ಆರೋಪದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad...