ಉಡುದಾರ ಕಟ್ಟಿಕೊಳ್ಳುವುದೇಕೆ ?ಅದರ ಹಿಂದಿರುವ ವೈಜ್ಞಾನಿಕ ಸತ್ಯವೇನು ಗೊತ್ತಾ ?
ಹಿಂದೂ ಸಂಪ್ರದಾಯದಲ್ಲಿನ ಪ್ರತಿಯೊಂದು ಆಚರಣೆಳಿಗೂ ವೈಜ್ಞಾನಿಕ ಹಿನ್ನೆಲೆ ಇದೆ. ನಾವು ಧರಿಸುವ ಪ್ರತಿಯೊಂದು ವಸ್ತುವೂ ನಮಗೆ ಆರೋಗ್ಯವನ್ನ ಒದಗಿಸುತ್ತದೆ. ಅದರಲ್ಲಿ ಗಂಡು ಮಕ್ಕಳು ಸೊಂಟಕ್ಕೆ ಕಟ್ಟಿಕೊಳ್ಳುವ ಉಡುದಾರ ಸಹ ಒಂದು. ಉಡುದಾರ ಕಟ್ಟಿಕೊಳ್ಳುವುದರ ಹಿಂದೆ ಆಂತರಿಕ ಸತ್ಯ ಕೂಡ ಅಡಗಿದೆ.
ನಿಮಗೆ ಗೊತ್ತಾ ? ಹಿಂದಿನ ಕಾಲದಲ್ಲಿ ಉಡುದಾರ ಕಟ್ಟದೆ ಇದ್ದಾರೆ ಮನೆ ಒಳಗೆ ಕೂಡ ಸೇರಿಸುತ್ತಿರಲಿಲ್ಲ. ಅಷ್ಟು ಕಟ್ಟು ನಿಟ್ಟಾಗಿ ಈ ವಿಷಯವನ್ನ ಪಾಲಿಸುತ್ತಿದ್ರು.ಇಷ್ಟೆಲ್ಲ ಪೀಠಿಕೆ ಕೊಟ್ಟ ಮೇಲೆ ಉಡುದಾರ ಯಾಕೆ ಧರಿಸಬೇಕು ಅನ್ನೊದು ನಿಮ್ಮ ತೆಲೆಯಲ್ಲಿ ಕಾಡುತ್ತಿರುತ್ತೆ. ಅದಕ್ಕೆ ಉತ್ತರವನ್ನ ನಾವು ಕೊಡ್ತಿವಿ ನೋಡಿ,
ಉಡುದಾರ ಧರಿಸುವುದು ಹಿಂದೂಗಳಲ್ಲಿ ಪ್ರಮುಖ. ಸಾಮಾನ್ಯವಾಗಿ ಹಿಂದೂಗಳಲ್ಲಿ ಪ್ರತಿ ಪುರುಷನು ಉಡುದಾರ ಕಟ್ಟಿಕೊಳ್ಳುತ್ತಾರೆ. ಚಿಕ್ಕ ಮಕ್ಕಳಿಗೆ ಉಡುದಾರ ಕಟ್ಟಿದರೆ ಅವರ ಬೆಳವಣಿಗೆಯ ಸಮಯದಲ್ಲಿ ಸೊಂಟದ ಮೂಳೆಗಳು, ಮಾಂಸ ಖಂಡಗಳು ಸರಿಯಾದ ರೀತಿಯಲ್ಲಿ ಬೆಳವಣಿಗೆಯಾಗುತ್ತವೆಯಂತೆ . ಚಿಕ್ಕ ಮಕ್ಕಳಿಗೆ ಬೆಳ್ಳಿಯ ಉಡುದಾರವನ್ನ ಉಡಿಸುತ್ತಾರೆ. ಬೆಳ್ಳಿ ಉತ್ತಮ ಉಷ್ಣವಾಹಕವಾಗಿದ್ದು ಇದರಿಂದ ಸೊಂಟದ ನಗರಗಳು ಬಿಗಿಯಾಗುತ್ತವೆ.
ಮುಖ್ಯವಾಗಿ ಗಂಡು ಮಕ್ಕಳ ಬೆಳವಣಿಗೆಯ ಸಂದರ್ಭದಲ್ಲಿ ಪುರುಷಾಂಗ ಯಾವುದೇ ರೀತಿಯ ಅಸಮತೋಲನೆಗೆ ಗುರಿಯಾಗದೇ ಸರಿಯಾದ ರೀತಿಯಲ್ಲಿ ಬೆಳವಣಿಗೆಯಾಗಲು ಉಡುದಾರ ಕಟ್ಟುತ್ತಾರಂತೆ.
ಉಡುದಾರ ಧರಿಸಿದರೆ ರಕ್ತ ಪ್ರಸರಣ ಕೂಡ ಉತ್ತಮಗೊಳ್ಳುತ್ತದೆ. ಗಂಡಸರಿಗೆ ಹರ್ನಿಯಾ ಬರದಂತೆ ಉಡುದಾರ ಕಾಪಾಡುತ್ತದೆಯಂತೆ. ದೇಹದ ಭಾಗಗಳು ಅಥವಾ ಕರಳು ತಮ್ಮ ಸೊಂಟದ ಸುತ್ತಲಿನ ದುರ್ಬಲ ಭಾಗವೊಂದರ ಮೂಲಕ ಹೊರಜಾರಿ ಬರುವುದನ್ನು ನಾವು ಹರ್ನಿಯಾ ಎಂದು ಗುರುತಿಸುತ್ತೇವೆ. ಈ ರೋಗ ಬಾರದಂತೆ ಉಡುದಾರ ಕಾಪಾಡುತ್ತದೆ. ಇದನ್ನು ಕೆಲವು ವಿಜ್ಞಾನಿಗಳು ಸಹ ನಿರೂಪಿಸಿದ್ದಾರಂತೆ.
ನಮ್ಮಲ್ಲಿ ಪ್ರತಿ ವರ್ಷ ಯುಗಾದಿಯಂದು ಹೊಸದಾಗಿ ಉಡುದಾರ ಕಟ್ಟಿಕೊಳ್ಳುತ್ತಾರೆ. ಚಿಕ್ಕ ಮಕ್ಕಳಿಗೆ ಬೆಳ್ಳಿ ಅಥವಾ ತಾಮ್ರದ ಎಳೆಯಿಂದ ಮಾಡಿದ ಉಡುದಾರ ಕಟ್ಟುತ್ತಾರೆ. ಹಿರಿಯರು ನೂಲಿನಿಂದ ತಯಾರಿಸಿದ ಉಡುದಾರ ಕಟ್ಟುತ್ತಾರೆ. ಯಾವುದೇ ರೀತಿಯ ಉಡುದಾರ ಧರಿಸಿದರೂ ಅದರಿಂದ ಉಪಯೋಗ ಮಾತ್ರ ಖಂಡಿತ ಇರುತ್ತದೆ.