ಗದಗ: ರಾಜ್ಯದಲ್ಲಿ ಈ ವರ್ಷ ಭೀಕರ ಬರಗಾಲ ಮನೆ ಮಾಡಿದೆ. ರೈತರು ಮಳೆಗಾಗಿ ದೇವರನ್ನು ಪ್ರಾರ್ಥಿಸುತ್ತಲೇ ಇದ್ದಾರೆ. ಕಪ್ಪೆ, ಕತ್ತೆಗಳ ಮದುವೆ ಸೇರಿದಂತೆ ಹಲವಾರು ರೀತಿಯಲ್ಲಿ ದೇವರನ್ನು ಪ್ರಾರ್ಥಿಸಿದರು. ಆದರೂ ಮಳೆರಾಯ ಮುನಿಸಿಕೊಂಡಿದ್ದಾರೆ. ಆದರೂ ರೈತರು ಪ್ರಯತ್ನ ಬಿಡುತ್ತಿಲ್ಲ. ಗದಗದಲ್ಲಿ ಮಳೆಗಾಗಿ ಕತ್ತೆಗಳ ಮದುವೆ ಮಾಡಿದ್ದಾರೆ.
ಈ ಜೋಡಿಗಳ ಮದುವೆ ಮಾಡಿ ಅನ್ನದಾತರು ಮಳೆಗಾಗಿ ಪ್ರಾರ್ಥಿಸಿದ್ದಾರೆ. ಗದಗ(Gadag) ತಾಲೂಕಿನ ತಿಮ್ಮಾಪೂರ ಗ್ರಾಮದಲ್ಲಿ ಮಳೆಯಿಲ್ಲದೆ ಭೀಕರ ಬರಕ್ಕೆ ತುತ್ತಾಗಿದ್ದಾರೆ. ಬಿತ್ತನೆ ಮಾಡಿದ ಎಲ್ಲ ಬೆಳೆಗಳು ಮಳೆ ಇಲ್ಲದೆ ಒಣಗಿ ಹೋಗಿವೆ. ಕಷ್ಟಪಟ್ಟು ಸಾಲಸೋಲ ಮಾಡಿ ಬಿತ್ತನೆ ಮಾಡಿದ ಬೆಳೆ ನಾಶವಾಗಿದೆ.
ಗ್ರಾಮದ ಹುಡೇದ ಲಕ್ಷ್ಮಿ ದೇವಸ್ಥಾನದಲ್ಲಿ ಕತ್ತೆಗಳ ಮದುವೆ ನಡೆಯಿತು. ಎಲ್ಲ ಮದುವೆಗಳಂತೆ ಸಾಂಪ್ರದಾಯಿಕವಾಗಿಯೇ ಮದುವೆ ಮಾಡಲಾಗಿದೆ. ಹೂಗಾರರ ಮನೆಯಿಂದ ಭಾಸಿಂಗ್ ತರಲಾಯಿತು. ಉಳಿದಂತೆ ಎಲ್ಲವೂ ಸಾಂಪ್ರದಾಯಿಕವಾಗಿ ನಡೆಯಿತು. ಇನ್ನಾದರೂ ವರುಣ ದೇವ ಕೈ ಹಿಡಿಯಲು ಎಂಬುವುದು ರೈತರ ಅಂಬೋಣವಾಗಿದೆ.