ಖ್ಯಾತ ನಿರ್ದೇಶಕ ಸೂರ್ಯ ಕಿರ್ಣ್ ತಮ್ಮ 48ನೇ ವಯಸ್ಸಿಗೆ ಸಾವನ್ನಪ್ಪಿದ್ದಾರೆ. ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ಸೂರ್ಯ ಕಿರಣ್ ಇಹಲೋಕ ತ್ಯಜಿಸಿದ್ದಾರೆ.
ಸೂರ್ಯ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಈ ನಿಧನ ತೆಲುಗು ಚಿತ್ರರಂಗಕ್ಕೆ ಶಾಕ್ ಕೊಟ್ಟಿದೆ. ನಿರ್ದೇಶಕರ ನಿಧನಕ್ಕೆ ಆಪ್ತರು, ಕಲಾವಿದರು, ಅಭಿಮಾನಿಗಳು ಸಂತಾಪ ಸೂಚಿಸಿದ್ದಾರೆ.
ಮಾಸ್ಟರ್ ಸುರೇಶ್ ಎಂಬ ಹೆಸರಿನಲ್ಲಿ 200ಕ್ಕೂ ಅಧಿಕ ಸಿನಿಮಾಗಳಲ್ಲಿ ಸೂರ್ಯ ನಟಿಸಿದ್ದಾರೆ. ‘ಸತ್ಯಂ’ ಚಿತ್ರದ ಮೂಲಕ ನಿರ್ದೇಶನಕ್ಕೆ ಕಾಲಿಟ್ಟಾಗ ಸೂರ್ಯ ಕಿರಣ್ ಎಂದು ತಮ್ಮ ಹೆಸರನ್ನು ಬದಲಿಸಿಕೊಂಡರು. ತೆಲುಗಿನ ಬಿಗ್ ಬಾಸ್ ಸೀಸನ್ 4ರಲ್ಲಿ ಕೂಡ ಮಿಂಚಿದ್ದರು. ಕನ್ನಡದ ರಾಮಕೃಷ್ಣ ಚಿತ್ರ ನಾಯಕಿ ಕಾವೇರಿ ಅವರನ್ನು ಮದುವೆಯಾಗಿದ್ದರು.ಆ ನಂತರ ಅದು ಡಿವೋರ್ಸ್ ಆಗಿತ್ತು. ಇಡೀ ಚಿತ್ರರಂಗ ಈಗ ಕಂಬನಿ ಮಿಡಿಯುತ್ತಿದೆ.