ಯಾವತ್ತಿಗೂ ಸಚಿನ್.. ಸಚಿನ್ನೇ… ಕ್ರಿಕೆಟ್ ದೇವ್ರ ಬೆಂಬಲಕ್ಕೆ ನಿಂತ ಅಭಿಮಾನಿಗಳು..!
ಸಚಿನ್… ಸಚಿನ್.. ಸಚಿನ್ ಈ ಮಂತ್ರ ಘೋಷ ಮೊಳಗಿದ್ದು ಈಗ ಕ್ರಿಕೆಟ್ ಮೈದಾನದಲ್ಲಿ ಅಲ್ಲ. ಈ ಹಿಂದೆ ಮೈದಾನದಲ್ಲಿ ಸಚಿನ್ ಬ್ಯಾಟಿಂಗ್ ಮಾಡುತ್ತಿದ್ದಾಗ ಅಭಿಮಾನಿಗಳು ಸಚಿನ್.. ಸಚಿನ್… ಸಚಿನ್ ಅಂತ ಮಂತ್ರ ಘೋಷದಂತೆ ಕೂಗಿ ಕೂಗಿ ಹೇಳುತ್ತಿದ್ದರು.
ಇದೀಗ ಅಂತಹುದ್ದೇ ಒಂದು ಘಟನೆ ಮತ್ತೆ ನಡೆದಿದೆ. ಸಚಿನ್ ಅಭಿಮಾನಿಗಳು ಅವರು ಮನೆ ಮುಂದೆ ಧಾವಿಸಿ ತನ್ನ ಅಭಿಮಾನವನ್ನು ಮೆರೆದಿದ್ದಾರೆ. ಸಚಿನ್ ಜೊತೆ ನಾವಿದ್ದೇವೆ ಅಂತ ಸಾರಿ ಸಾರಿ ಹೇಳಿದ್ದಾರೆ.
ಅಷ್ಟಕ್ಕೂ ಕಾರಣ ಗೊತ್ತೆ ಇದೆಯಲ್ಲ. ರೈತರ ಪ್ರತಿಭಟನೆಯ ವಿಚಾರದಲ್ಲಿ ವಿದೇಶಿ ಸೆಲೆಬ್ರಿಟಿಗಳು ಸಾಮಾಜಿಕ ಜಾಲ ತಾಣದಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಆಗ ಸಚಿನ್ ದೇಶದ ಅಂತರಿಕ ವಿಚಾರದಲ್ಲಿ ವಿದೇಶಿಯರು ಮೂಗು ತೂರಿಸುವುದು ಬೇಡ. ನಮ್ಮ ಅಂತರಿಕ ವಿಚಾರವನ್ನು ನಾವೇ ಬಗೆಹರಿಸಿಕೊಳ್ಳುತ್ತೇವೆ. ಏನಿದ್ರೂ ಬೇರೆಯವರು ಪ್ರೇಕ್ಷಕರು ಎಂದು ಸಚಿನ್ ತೆಂಡುಲ್ಕರ್ ತನ್ನ ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದ್ದರು.
ಅದಕ್ಕೆ ಸಾಮಾಜಿಕ ಜಾಲ ತಾಣದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಅಲ್ಲದೆ ಸಚಿನ್ ಅವರನ್ನು ವೈಯಕ್ತಿಕವಾಗಿ ಹೀಯಾಳಿಸಿ ಅವರ ಕ್ರಿಕೆಟ್ ಬದುಕಿನ ಸಾಧನೆ ಮತ್ತು ವ್ಯಕ್ತಿತ್ವದ ಬಗ್ಗೆಯೂ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು.
ಕಾರಣ ಇಷ್ಟೇ… ಸಚಿನ್ ಸರ್ಕಾರವನ್ನು ಬೆಂಬಲಿಸಿದ್ದಾರೆ. ರೈತರ ಪ್ರತಿಭಟನೆಯನ್ನು ಬೆಂಬಲಿಸಿಲ್ಲ ಎಂಬ ಕಾರಣಕ್ಕೆ ಟೀಕೆಗಳನ್ನು ಎದುರಿಸಬೇಕಾಯ್ತು.
ಇದೀಗ ಸಚಿನ್ ಅವರ ಮುಂಬೈ ನಿವಾಸದ ಮುಂದೆ ನೂರಾರು ಅಭಿಮಾನಿಗಳು ಧಾವಿಸಿ ಕ್ರಿಕೆಟ್ ದೇವ್ರಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಚಿನ್.. ಸಚಿನ್ .. ಸಚಿನ್ ಅಂತ ಘೋಷಣೆಗಳನ್ನು ಕೂಗಿದ್ದರು. ಹಾಗಂತ ಇಲ್ಲಿ ಸಚಿನ್ ದುಡ್ಡು ಕೊಟ್ಟು ಅಭಿಮಾನಿಗಳ ಕರೆದಿರಲಿಲ್ಲ. ತಮ್ಮ ಬೆಂಬಲಕ್ಕೆ ನಿಲ್ಲಬೇಕು.. ತನ್ನ ಹೆಸರನ್ನು ಕೂಗಿ ಕೂಗಿ ಕರೆದಿರುವುದಲ್ಲ.. !