ಬೆಂಗಳೂರು: ಕೇವಲ 20 ನಿಮಿಷದಲ್ಲಿ ಕೊರೊನಾ ರಿಸಲ್ಟ್ ನೀಡುವ ಆಂಟಿಜೆನ್ rapid ಟೆಸ್ಟ್ ನ ರಿಸಲ್ಟ್ ಬಗ್ಗೆಯೂ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ಅನುಮಾನ ಶುರುವಾದ ಹಿನ್ನೆಲೆಯಲ್ಲಿ ಈ ಪರೀಕ್ಷೆಗೆ ತಿಲಾಂಜಲಿ ಇಡಲು ಚಿಂತನೆ ನಡೆದಿದೆ.
ಸಾಮಾನ್ಯ ಜ್ವರದ ಲಕ್ಷಣಗಳು ಇದ್ದರೂ ಹಾಗೂ ಕೊರೊನಾ ಸೋಂಕಿನ ಲಕ್ಷಣಗಳಾದ ಜ್ವರ, ಕೆಮ್ಮು, ಶೀತ ಇಲ್ಲದೆ ಇದ್ದರೂ ಹಲವರಿಗೆ ಪಾಸಿಟಿವ್ ಎಂದೇ ಬರುತ್ತಿದೆ. ಆದರೆ, ಆರ್ಟಿಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಎಂದು ಬರುತ್ತಿದೆ. ಹೀಗಾಗಿ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಬಗ್ಗೆ ಗೊಂದಲ ಹಾಗೂ ಜನ ಸಾಮಾನ್ಯರ ವಲಯದಲ್ಲೂ ತೀವ್ರ ವಿರೋಧ ವ್ಯಕ್ತವಾಗಿದೆ. ಪಾಸಿಟಿವ್, ನೆಗೆಟಿವ್ ಗೊಂದಲ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಂಟಿಜೆನ್ ಟೆಸ್ಟ್ ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಆಂಟಿಜೆನ್ ಟೆಸ್ಟ್ ಶುರುವಾಗಿದ್ಹೇಗೆ..!
ದೇಶದಲ್ಲಿ ಹೆಮ್ಮಾರಿ ಕೊರೊನಾ ಅಟ್ಟಹಾಸ ಮೆರೆಯುತ್ತಿದ್ದಾಗ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೋಂಕಿತರ ಪರೀಕ್ಷೆ ನಡೆಸುವುದೇ ದೊಡ್ಡ ಸವಾಲಾಗಿತ್ತು.
ಆರ್ಟಿಪಿಸಿಆರ್ ಪರೀಕ್ಷೆ ನಡೆಸಿದರೂ ಕೊರೊನಾ ರಿಪೋರ್ಟ್ ಬರುವುದು ನಾಲ್ಕೈದು ದಿನ, ವಾರ ತೆಗೆದುಕೊಂಡ ಉದಾಹರಣೆಗಳೂ ಇದ್ದವು. ಈ ವಿಳಂಬ ತಪ್ಪಿಸಲು ಕೇವಲ 20 ನಿಮಿಷದಲ್ಲಿ ರಿಪೋರ್ಟ್ ಬರುವ ಅಂಟಿಜೆನ್ test ನ್ನು ದೆಹಲಿಯಲ್ಲ ಆರಂಭಿಸಲಾಯಿತು. ಆನಂತರ ಎಲ್ಲಾ ರಾಜ್ಯಗಳು ಆಂಟಿಜೆನ್ ಟೆಸ್ಟ್ ಮೊರೆ ಹೋದವು. ಹೀಗಾಗಿ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಲಕ್ಷದ ಗಡಿ ದಾಟಿ ಈಗ 80 ಲಕ್ಷಕ್ಕೆ ಬಂದು ತಲುಪಿದೆ. ಇದರ ಪರಿಣಾಮ ಆಸ್ಪತ್ರೆಗಳು ತುಂಬಿ ತುಳುಕಿ ಬೆಡ್ ಸಿಗದ ಪರಿಣಾಮ ಸಕಾಲಕ್ಕೆ ಅದೆಷ್ಟೋ ಮಂದಿ ಜೀವ ಬಿಟ್ಟಿದ್ದಾರೆ.
ಕೊರೊನಾ ಪಾಸಿಟಿವ್ ಇದೆ ಎಂದು ಬಿಬಿಎಂಪಿ ಹಾಗೂ ಜಿಲ್ಲಾಡಳಿತಗಳು ಸೋಂಕಿತರನ್ನು ಕೋವಿಡ್ ಸೆಂಟರ್ ಗಳಲ್ಲಿ ಇರಿಸಿ rtpcr ಟೆಸ್ಟ್ ಮಾಡಿಸಿದಾಗ ನೆಗೆಟಿವ್ ಎಂದು ವರದಿಗಳು ಬಂದಿವೆ. ಹೀಗಾಗಿ ಎರಡು-ಮೂರು ದಿನಗಳಲ್ಲಿಯೇ ಸೋಂಕಿತರನ್ನು ಮನೆಗೆ ಕಳಿಸಿದ ಸಾವಿರಾರು ಉದಾಹರಣೆಗಳು ರಾಜ್ಯದಲ್ಲಿವೆ.
ಆದರೆ, ಇತ್ತೀಚೆಗೆ ಆಂಟಿಜೆನ್ ಟೆಸ್ಟ್ ಬಗ್ಗೆಯೂ ಜನಸಾಮಾನ್ಯರಲ್ಲಿ ಅನುಮಾನ ವ್ಯಕ್ತವಾಗಿದೆ. ಕೊರೊನಾ ಸೋಂಕಿನ ಯಾವುದೇ ಲಕ್ಷಣಗಳಿಲ್ಲದಿದ್ದರೂ ಪಾಸಿಟಿವ್ ರಿಪೋರ್ಟ್ ಬರುತ್ತಿವೆ. ಬೇರೆ ಊರುಗಳಿಗೆ ಪ್ರಯಾಣ ಬೆಳೆಸುವವರು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಜನಜಂಗುಳಿ ಇರುವ ಮಾರುಕಟ್ಟೆಗಳಲ್ಲಿ ಜನರನ್ನು ಬಲವಂತವಾಗಿ ಕೊರೊನಾ ಅಂಟಿಜೆನ್ ಟೆಸ್ಟ್ಗೆ ಸರ್ಕಾರ ಹಾಗೂ ಬಿಬಿಎಂಪಿ ಒಳಪಡಿಸುತ್ತಿದೆ. ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಲು ಹಿಂದೇಟು ಹಾಕಿದರೆ 50 ಸಾವಿರ ದಂಡ ಹಾಗೂ 3 ವರ್ಷ ಜೈಲು ಶಿಕ್ಷೆ ವಿಧಿಸುವ ಆದೇಶವನ್ನೂ ಸರ್ಕಾರ ಹೊರಡಿಸಿಯೂ ಆಗಿದೆ. ಜ್ವರ, ಶೀತ, ಕೆಮ್ಮು, ಮೈ-ಕೈ ನೋವು ಸೇರಿದಂತೆ ಯಾವುದೇ ಲಕ್ಷಣಗಳು ಇಲ್ಲದೆ ಇದ್ದರೂ ನಿಮಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಆರೋಗ್ಯ ಸಿಬ್ಬಂದಿ ಕರೆ ಮಾಡಿದಾಗ ಗಲಾಟೆ ನಡೆದ ಸಾಕಷ್ಟು ಉದಾಹರಣೆಗಳು ಇವೆ. ಹೀಗಾಗಿ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಕೈಬಿಡಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎನ್ನಲಾಗಿದೆ.
ಹಂತ-ಹಂತವಾಗಿ ಟೆಸ್ಟ್ ಕಡಿತ..!
ಬೆಂಗಳೂರು ನಗರದಲ್ಲಿ ಪ್ರತಿದಿನ ಶೇ.40ರಷ್ಟು ಆಂಟಿಜೆನ್ ಟೆಸ್ಟ್ ಮಾಡಿ ಕೊರೊನಾ ಸೋಂಕಿತರನ್ನು ಪತ್ತೆ ಮಾಡಲಾಗುತ್ತಿತ್ತು. ಇದರಿಂದ ಕೊರೊನಾ ಸೋಂಕಿತರ ಸಂಖ್ಯೆಯೂ ಏರಿಕೆಯಾಗುತ್ತಿದೆ. ಆಸಲಿ ನಿಜವಾದ ಸೋಂಕಿತರು ಪತ್ತೆಯಾಗದ ಕಾರಣ ಈಗಾಗಲೇ ಶೇ.25ರಷ್ಟು ಆಂಟಿಜೆನ್ ಟೆಸ್ಟ್ ಕಡಿಮೆ ಮಾಡಲಾಗಿದೆ. ಆಂಟಿಜೆನ್ ಟೆಸ್ಟ್ ಬದಲು ಆರ್ಟಿಪಿಸಿಆರ್ ಮೂಲಕ ಗಂಟಲು ದ್ರವ ಪರೀಕ್ಷೆಗೆ ಒತ್ತು ನೀಡಲು ಸರ್ಕಾರ ಒತ್ತು ನೀಡುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಸಂಪೂರ್ಣವಾಗಿ ಆಂಟಿಜೆನ್ ಟೆಸ್ಟ್ ಕೈಬಿಡುವ ಸಾಧ್ಯತೆ ಇದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel