ಗಾಂಧಿ, ಅಂಬೇಡ್ಕರ್ ಜೀವನಗಾಥೆ ನಮಗೆ ಸಾಕಷ್ಟು ಜ್ಞಾನ ನೀಡುತ್ತದೆ : ಮೋದಿ Ambedkar saaksha tv
ಬೆಂಗಳೂರು : ದೇಶಕ್ಕೆ ಹೇಗೆ ಒಂದು ದೊಡ್ಡ ಗುರಿಯನ್ನು ನಿಗದಿ ಮಾಡಬೇಕು, ಅದನ್ನು ಹೇಗೆ ಸಾಧಿಸಬೇಕು, ಹೇಗೆ ವ್ಯವಸ್ಥೆಯಲ್ಲಿ ಪರಿವರ್ತನೆ ತರಬೇಕು ಎಂಬ ವಿಚಾರದಲ್ಲಿ ಮಹಾತ್ಮಾಗಾಂಧಿ, ಸರ್ದಾರ್ ಪಟೇಲ್, ಡಾ. ಅಂಬೇಡ್ಕರ್ ಅವರಂತಹ ಮಹಾಪುರುಷರ ಜೀವನಗಾಥೆ ನಮಗೆ ಸಾಕಷ್ಟು ಜ್ಞಾನ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಪ್ರಥಮ ಆಡಿಟ್ ದಿನದ ಕಾರ್ಯಕ್ರಮದಲ್ಲಿ ಪ್ರಧಾನಿಗಳು ಭಾಗಿಯಾಗಿದ್ದರು. ಇದೇ ಸಂದರ್ಭದಲ್ಲಿ ಸರ್ದಾರ್ ವಲ್ಲಭ ಬಾಯ್ ಪಟೇಲ್ ಅವರ ಪ್ರತಿಮೆಯ ಅನಾವರಣ ಮಾಡಿದ ಪ್ರಧಾನಿ, ಈ ಹಿಂದೆ ತಾವು ಮಹಾತ್ಮಾ ಗಾಂಧೀ ಅವರು 150ನೇ ಜಯಂತಿಯ ಸಂದರ್ಭದಲ್ಲಿ ಬಾಪೂ ಪ್ರತಿಮೆ ಅನಾವರಣ ಮಾಡಿದ್ದನ್ನು ಸ್ಮರಿಸಿದರು.
ಜೊತೆಗೆ ದೇಶಕ್ಕೆ ಹೇಗೆ ಒಂದು ದೊಡ್ಡ ಗುರಿಯನ್ನು ನಿಗದಿ ಮಾಡಬೇಕು, ಅದನ್ನು ಹೇಗೆ ಸಾಧಿಸಬೇಕು, ಹೇಗೆ ವ್ಯವಸ್ಥೆಯಲ್ಲಿ ಪರಿವರ್ತನೆ ತರಬೇಕು ಎಂಬ ವಿಚಾರದಲ್ಲಿ ಮಹಾತ್ಮಾಗಾಂಧಿ, ಸರ್ದಾರ್ ಪಟೇಲ್, ಡಾ. ಅಂಬೇಡ್ಕರ್ ಅವರಂತಹ ಮಹಾಪುರುಷರ ಜೀವನಗಾಥೆ ನಮಗೆ ಸಾಕಷ್ಟು ಜ್ಞಾನ ನೀಡುತ್ತದೆ ಎಂದರು.
ಇನ್ನು ಈ ಕಾರ್ಯಕ್ರಮದಲ್ಲಿ ಭಾರತದ ನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರು ಉಪಸ್ಥಿತರಿದ್ದರು.









