ಬೆಂಗಳೂರು, ಮೇ 14 : ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ) ಯನ್ನು ಜುಲೈ 30 ಮತ್ತು 31 ರಂದು ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮಾಸ್ಕ್, ಸ್ಯಾನಿಟೈಸರ್ ಸಹಿತ ಮುಂಜಾಗ್ರತಾ ಕ್ರಮದೊಂದಿಗೆ ಸಿಇಟಿ ನಡೆಸಲು ನಿರ್ಧರಿಸಿದ್ದೇವೆ. ಪರೀಕ್ಷಾ ಕೇಂದ್ರಗಳನ್ನು ಕೂಡ ಹೆಚ್ಚಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಗೆಟ್ ಸೆಟ್ ಗೋ ಮೂಲಕ ನೀಟ್, ಸಿಇಟಿ ಎದುರಿಸಲಿರುವ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಕೋಚಿಂಗ್ ನೀಡಲಾಗುತ್ತಿದ್ದು, ಯೂಟ್ಯೂಬ್ ಮೂಲಕ ಕಲಿಕಾ ವೀಡಿಯೋ ಡೌನ್ ಲೋಡ್ ಗೆ ಅವಕಾಶ ನೀಡಲಾಗಿದೆ ಎಂದರು.
ಪದವಿ ತರಗತಿಗಳ ಶೈಕ್ಷಣಿಕ ವರ್ಷ ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭವಾಗಲಿದ್ದು, ಎಂಜಿನಿಯರಿಂಗ್ ಮತ್ತು ಪದವಿ ತರಗತಿಗಳ ಪಠ್ಯದ ಬಗ್ಗೆ ಕೆಲ ಮಹತ್ವದ ಸೂಚನೆಗಳನ್ನು ಈಗಾಗಲೇ ನೀಡಲಾಗಿದೆ. ಮೇ 31 ರ ಒಳಗೆ ಆನ್ ಲೈನ್ ಮೂಲಕ ಪಾಠಗಳನ್ನು ಮುಗಿಸಲು ತಿಳಿಸಲಾಗಿದ್ದು, ಬಳಿಕ ಪರೀಕ್ಷೆ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಅಭಿಜಿತ್ ನಕ್ಷತ್ರದ ಸಮಯದಲ್ಲಿ ಈ ಮಂತ್ರವನ್ನು ಪಠಿಸುವವರ ನ್ಯಾಯಯುತ ಆಸೆಗಳು ಶೀಘ್ರದಲ್ಲೇ ಈಡೇರುತ್ತವೆ.
ಆಸೆಗಳನ್ನು ಈಡೇರಿಸಲು ಅಭಿಜಿತ್ ನಕ್ಷತ್ರ ಮಂತ್ರ ಅಭಿಜಿತ್ ನಕ್ಷತ್ರದ ರಹಸ್ಯ ನಮ್ಮಲ್ಲಿ ಹಲವರಿಗೆ ತಿಳಿದಿದೆ. ಇಂತಹ ಅದ್ಭುತ ಅಭಿಜಿತ್ ನಕ್ಷತ್ರದ ಸಮಯದಲ್ಲಿ ನಾವು ಮಾಡಬಹುದಾದ ಯಾವುದೇ ಪೂಜೆ,...








