ಯಾವುದೇ ಸಂಭವನೀಯತೆಗೆ ಸಿದ್ಧರಾಗಿ – ಭಾರತೀಯ ಸೇನಾ ಮುಖ್ಯಸ್ಥ ಜನರಲ್ ನಾರವಾನೆ
ಹೊಸದಿಲ್ಲಿ, ಅಗಸ್ಟ್ 8: ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ತಮ್ಮ ಕ್ಷೇತ್ರ ಕಮಾಂಡರ್ಗಳನ್ನು ಯಾವುದೇ ಸಂಭವನೀಯತೆಗೆ ಸಿದ್ಧರಾಗಿ ಮತ್ತು ಹೆಚ್ಚಿನ ಕಾರ್ಯಾಚರಣೆಯ ಸಿದ್ಧತೆಯನ್ನು ಕಾಯ್ದುಕೊಳ್ಳುವಂತೆ ಕೇಳಿಕೊಂಡಿದ್ದಾರೆ.
ಸೈನ್ಯದ ಮುಖ್ಯಸ್ಥರು ಅರುಣಾಚಲ ಪ್ರದೇಶಕ್ಕೆ ಎರಡು ದಿನಗಳ ಭೇಟಿ ನೀಡಿದ್ದು, ಈಶಾನ್ಯ ರಾಜ್ಯದ ರೇಖೆಯ ವಾಸ್ತವಿಕ ನಿಯಂತ್ರಣ ರೇಖೆಯ (ಎಲ್ಎಸಿ) ಉದ್ದಕ್ಕೂ ಪರಿಶೀಲನೆ ನಡೆಸಿದರು.

ಭಾರತ-ಚೀನ ನಡುವಿನ ಗಡಿ ಬಿಕ್ಕಟ್ಟನ್ನು ಬಗೆಹರಿಸುವ ಮಾತುಕತೆಯಲ್ಲಿ ಗಡಿ ಮರು ಗುರುತಿಸುವಿಕೆ ಪ್ರಸ್ತಾಪವನ್ನು ಚೀನಾ ಮುಂದಿಟ್ಟಿದೆ. ಆದರೆ ಭಾರತೀಯ ಸೇನಾಧಿಕಾರಿಗಳು ಚೀನದ ಸೇನಾಧಿಕಾರಿಗಳು ಸಲ್ಲಿಸಿದ್ದ ಹೊಸ ಸೂತ್ರದ ಪ್ರಸ್ತಾವನೆಯನ್ನು ತಳ್ಳಿ ಹಾಕಿದ್ದಾರೆ.
ಜೊತೆಗೆ ಲಡಾಖ್ ಗಡಿಯಲ್ಲಿ ಭಾರತ ಸುಮಾರು 1500 ಕಿ.ಮೀ.ವರೆಗೆ ತನ್ನ ಕಾವಲನ್ನು ಮುಂದುವರಿಸಲು ನಿರ್ಧರಿಸಿದೆ.

ಭಾರತ-ಚೀನ ನಡುವೆ ಈಗಾಗಲೇ ಹಲವಾರು ಸುತ್ತಿನ ಮಾತುಕತೆಗಳು ನಡೆದಿದ್ದು, ಪ್ರತಿ ಮಾತುಕತೆಯಲ್ಲೂ ಭಾರತ, ಚೀನಕ್ಕೆ ಗಡಿಯಲ್ಲಿ ಏಪ್ರಿಲ್ 20ಕ್ಕೂ ಮೊದಲಿನ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಸಹಕರಿಸುವಂತೆ ತಾಕೀತು ಮಾಡುತ್ತಾ ಬಂದಿದೆ. ಆದರೆ ಇದೀಗ ಚೀನ,
ಗಡಿ ರೇಖೆಯ ಬಳಿಯ ಪ್ರದೇಶಗಳ ಮರು ಗುರುತಿಸುವಿಕೆ ಪ್ರಸ್ತಾಪವನ್ನಿಟ್ಟಿದೆ. ಈ ಪ್ರಸ್ತಾವನೆಯನ್ನು ಭಾರತೀಯ ಸೇನಾಧಿಕಾರಿಗಳು ತಳ್ಳಿಹಾಕಿದ್ದು, ಬಿಕ್ಕಟ್ಟಿಗೂ ಮೊದಲು ಇದ್ದ ಗಡಿ ಪರಿಸ್ಥಿತಿಯೇ ಮುಂದುವರಿಯಲಿ ಎಂದಿದ್ದಾರೆ.








