ಗುಜರಾತ್ ಮಾದರಿಯು ಪಶ್ಚಿಮ ಬಂಗಾಳವನ್ನು ಆಳಲು ಸಾಧ್ಯವಿಲ್ಲ – ಮಮತಾ ಬ್ಯಾನರ್ಜಿ
ಕೋಲ್ಕತ್ತ, ಜುಲೈ 22: ಗುಜರಾತ್ ಮಾದರಿಯು ಪಶ್ಚಿಮ ಬಂಗಾಳವನ್ನು ಆಳಲು ಸಾಧ್ಯವಿಲ್ಲ. ತೃಣಮೂಲ ಕಾಂಗ್ರೆಸ್ (ಟಿಎಂಸಿ) 2021 ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಐತಿಹಾಸಿಕ ವಿಜಯವನ್ನು ಕಾಣಲಿದೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ಮಧ್ಯಾಹ್ನ ನಡೆದ ವರ್ಚುವಲ್ ಸಭೆಯಲ್ಲಿ ಹೇಳಿದರು. ಭಾರತೀಯ ಜನತಾ ಪಕ್ಷದ ಮೇಲೆ ತನ್ನ ಹರಿಹಾಯ್ದ ಮಮತಾ ಬ್ಯಾನರ್ಜಿ ಕೇಂದ್ರೀಯ ಸಂಸ್ಥೆಗಳನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿರುವುದಾಗಿ ಆರೋಪಿಸಿದರು.
ಸಿಎಂ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಅವರ ಹೆಸರನ್ನು ಹೇಳದೆ, ಬದಲಿಗೆ ಅವರ ತವರು ರಾಜ್ಯವಾದ ಗುಜರಾತ್ ಅನ್ನು ಉಲ್ಲೇಖಿಸಿದರು.
ಬಿಜೆಪಿ ರಾಜ್ಯ ಚುನಾವಣೆಗಳನ್ನು ಗೆಲ್ಲಲು ಅಥವಾ ಮಧ್ಯಪ್ರದೇಶ ಮತ್ತು ಕರ್ನಾಟಕದ ವಿರೋಧ ಸರ್ಕಾರಗಳನ್ನು ಉರುಳಿಸಲು ಹಣವನ್ನು ಬಳಸಿದೆ ಎಂದು ಬ್ಯಾನರ್ಜಿ ಆರೋಪಿಸಿದರು. ಕೇಂದ್ರವು ಕರಾಳ ಕಾನೂನನ್ನು ಅನ್ನು ಪರಿಚಯಿಸುತ್ತಿದೆ ಮತ್ತು ದೇಶದ ಆರ್ಥಿಕ ಮತ್ತು ಪ್ರಜಾಪ್ರಭುತ್ವ ರಚನೆಯನ್ನು ನಾಶಪಡಿಸುತ್ತಿದೆ ಎಂದು ಅವರು ಆರೋಪಿಸಿದರು.
ಕೋವಿಡ್ -19 ಸಾಂಕ್ರಾಮಿಕ ರೋಗದ ಸಂದರ್ಭದಲ್ಲೂ ಜನರು ನಾಗರಿಕರ ರಾಷ್ಟ್ರೀಯ ನೋಂದಣಿ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿಯನ್ನು ಬಳಸಿಕೊಂಡು ಬಿಜೆಪಿ ಜನರನ್ನು ಹೇಗೆ ವಿಭಜಿಸಲು ಬಯಸುತ್ತಿದೆ ಎಂಬುದನ್ನು ಮರೆತಿಲ್ಲ ಎಂದು ಹೇಳಿದರು. ಜುಲೈ 21, 1993 ರಂದು ಕೋಲ್ಕತ್ತಾದಲ್ಲಿ ನಡೆದ ಪೊಲೀಸ್ ಗುಂಡಿನ ದಾಳಿಯಲ್ಲಿ ಕೊಲ್ಲಲ್ಪಟ್ಟ 13 ಯುವ ಕಾಂಗ್ರೆಸ್ ಕಾರ್ಯಕರ್ತರ ನೆನಪಿಗಾಗಿ ನಡೆದ ಟಿಎಂಸಿಯ ವಾರ್ಷಿಕ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು ಹಿಂದೂಗಳು, ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು ಎಲ್ಲರೂ ಭಾರತದ ಪ್ರಜೆಗಳು ಎಂದರು.

ರೈಲ್ವೆ, ಏರ್ ಇಂಡಿಯಾ, ಕೋಲ್ ಇಂಡಿಯಾ ಲಿಮಿಟೆಡ್ ಇತ್ಯಾದಿಗಳನ್ನು ಮಾರಾಟ ಮಾಡಲಾಗುತ್ತಿದೆ. ನೀವು ಕೇಂದ್ರದಲ್ಲಿ ಅಧಿಕಾರದಲ್ಲಿದ್ದೀರಿ ಎಂದು ನನಗೆ ವಿಷಾದವಿದೆ. ನೀವು ಆರ್ಥಿಕತೆ ಮತ್ತು ಪ್ರಜಾಪ್ರಭುತ್ವ ರಚನೆಯನ್ನು ನಾಶ ಮಾಡಿದ್ದೀರಿ. ಗುಜರಾತ್ ಮಾದರಿ ಬಂಗಾಳವನ್ನು ಆಳಲು ಸಾಧ್ಯವಿಲ್ಲ. ಗುಜರಾತ್ ಎಲ್ಲಾ ರಾಜ್ಯಗಳನ್ನು ಆಳಬೇಕಾದರೆ ಭಾರತದ ಚುನಾವಣಾ ಆಯೋಗ, ನ್ಯಾಯಾಂಗ, ಇತರ ಪಕ್ಷಗಳ ಉಪಯೋಗವೇನು? ಒಂದೇ ಪಕ್ಷ ಮತ್ತು ಅಧ್ಯಕ್ಷೀಯ ಸರ್ಕಾರ ಇರಲಿ ಎಂದು ಬ್ಯಾನರ್ಜಿ ಹೇಳಿದರು.
ಟಿಎಂಸಿ ಸರ್ಕಾರವು ರಾಜ್ಯದಲ್ಲಿ ಉದ್ಯೋಗ ದರವನ್ನು 40% ಹೆಚ್ಚಿಸಿದೆ ಮತ್ತು ದೇಶದಲ್ಲಿ ನಿರುದ್ಯೋಗ ದರವು 45% ಕ್ಕೆ ತಲುಪಿದೆ. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಬಡವರಿಗೆ ತಮ್ಮ ಜೀವಿತಾವಧಿಯಲ್ಲಿ ಉಚಿತ ಪಡಿತರ, ವೈದ್ಯಕೀಯ ಚಿಕಿತ್ಸೆ ಮತ್ತು ಶಿಕ್ಷಣ ಸಿಗುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು.
ನಾನು ಇತರ ಪಕ್ಷಗಳಿಗೆ ಸೇರಿದವರನ್ನು ಮರಳಿ ಬರಲು ಆಹ್ವಾನಿಸುತ್ತೇನೆ. ಟಿಎಂಸಿ ಮಾತ್ರ ಉತ್ತಮ ಆಡಳಿತವನ್ನು ನೀಡುವ ಏಕೈಕ ಪಕ್ಷ ಎಂಬುದನ್ನು ದಯವಿಟ್ಟು ನೆನಪಿಡಿ. ಸಮರ್ಪಿತ ಯುವಕರನ್ನು ನಮ್ಮೊಂದಿಗೆ ಸೇರಲು ಮತ್ತು ಕೆಲಸ ಮಾಡಲು ನಾನು ಆಹ್ವಾನಿಸುತ್ತಿದ್ದೇನೆ. ಮುಂದಿನ ಸಾಲಿನ ನಾಯಕತ್ವವನ್ನು ನಾವು ಬಯಸುತ್ತೇವೆ, ಎಂದು ಬ್ಯಾನರ್ಜಿ ಹೇಳಿದರು.








