ADVERTISEMENT
Friday, December 5, 2025
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home ಕ್ರಿಕೆಟ್

ಕೈಜಾರಿದ ಕ್ಯಾಚ್, ಕೈಕೊಟ್ಟ ಮ್ಯಾಚ್! ಜೈಸ್ವಾಲ್ ಎಡವಟ್ಟು, ಭಾರತಕ್ಕೆ ಸೋಲಿನ ಪೆಟ್ಟು

Handmade catch, handmade match! Jaiswal left, the losing blow for India

Shwetha by Shwetha
December 4, 2025
in ಕ್ರಿಕೆಟ್, Newsbeat, Sports, ಕ್ರೀಡೆ
Share on FacebookShare on TwitterShare on WhatsappShare on Telegram

ರಾಯ್‌ಪುರ: ಕ್ರಿಕೆಟ್ ಜಗತ್ತಿನಲ್ಲಿ ಒಂದು ಮಾತಿದೆ, ಕ್ಯಾಚ್ ಡ್ರಾಪ್ ಆದರೆ ಮ್ಯಾಚ್ ಡ್ರಾಪ್ ಎಂದು. ರಾಯ್‌ಪುರದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಈ ಮಾತು ಅಕ್ಷರಶಃ ನಿಜವಾಗಿದೆ. ಟೀಮ್ ಇಂಡಿಯಾ ನೀಡಿದ್ದ 359 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ, ಐಡೆನ್ ಮಾರ್ಕ್ರಾಮ್ ಅವರ ಸಿಡಿಲಬ್ಬರದ ಶತಕದ ನೆರವಿನಿಂದ ಭಾರತದ ಕೈಯಲ್ಲಿದ್ದ ಗೆಲುವನ್ನು ಕಸಿದುಕೊಂಡಿದೆ.

ಬೃಹತ್ ಮೊತ್ತ ಕಲೆಹಾಕಿದರೂ ಭಾರತಕ್ಕೆ ನಿರಾಸೆ

Related posts

ಪುಟಿನ್‌ ಗೆ ಭಾರತದ ಪ್ರವಾಸದ ವೇಳೆ ‘ಅತೀ ರಹಸ್ಯ’ ಭದ್ರತೆ – ಮಲ, ಮೂತ್ರವೂ ರಷ್ಯಾಕ್ಕೆ ವಾಪಸ್!

ಪುಟಿನ್‌ ಗೆ ಭಾರತದ ಪ್ರವಾಸದ ವೇಳೆ ‘ಅತೀ ರಹಸ್ಯ’ ಭದ್ರತೆ – ಮಲ, ಮೂತ್ರವೂ ರಷ್ಯಾಕ್ಕೆ ವಾಪಸ್!

December 5, 2025
ನಾಟಿಕೋಳಿ ರುಚಿ ಬಿಡಿ, ಬಡವರ ಹಾಸ್ಟೆಲ್ ಊಟ ಮಾಡಿ: ಅಹಿಂದ ಕಾಳಜಿ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಆರ್ ಅಶೋಕ್ ಬಹಿರಂಗ ಸವಾಲ್

ನಾಟಿಕೋಳಿ ರುಚಿ ಬಿಡಿ, ಬಡವರ ಹಾಸ್ಟೆಲ್ ಊಟ ಮಾಡಿ: ಅಹಿಂದ ಕಾಳಜಿ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಆರ್ ಅಶೋಕ್ ಬಹಿರಂಗ ಸವಾಲ್

December 5, 2025

ಟಾಸ್ ಸೋತರೂ ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ್ದ ಭಾರತ ತಂಡ ನಿಗದಿತ 50 ಓವರ್‌ಗಳಲ್ಲಿ ಎದುರಾಳಿಗೆ ಕಠಿಣ ಸವಾಲನ್ನೇ ನೀಡಿತ್ತು. ಆದರೆ, ಬೌಲಿಂಗ್ ಹಾಗೂ ಫೀಲ್ಡಿಂಗ್ ನಲ್ಲಿ ಮಾಡಿದ ಎಡವಟ್ಟುಗಳು ಭಾರತಕ್ಕೆ ಮುಳುವಾದವು. 359 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ದಕ್ಷಿಣ ಆಫ್ರಿಕಾ, ಕೇವಲ 49.2 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 362 ರನ್ ಕಲೆಹಾಕಿ 4 ವಿಕೆಟ್ ಅಂತರದ ರೋಚಕ ಜಯ ಸಾಧಿಸಿತು.

ಜೈಸ್ವಾಲ್ ಮಾಡಿದ ಆ ಒಂದು ತಪ್ಪು!

ಪಂದ್ಯದ ಗತಿಯನ್ನೇ ಬದಲಿಸಿದ್ದು ಯಶಸ್ವಿ ಜೈಸ್ವಾಲ್ ಮಾಡಿದ ಫೀಲ್ಡಿಂಗ್ ಎಡವಟ್ಟು. ಹರಿಣಗಳ ಪಡೆಯ ಪ್ರಮುಖ ಬ್ಯಾಟರ್ ಐಡೆನ್ ಮಾರ್ಕ್ರಾಮ್ 53 ರನ್ ಗಳಿಸಿ ಆಡುತ್ತಿದ್ದಾಗ, ಲಾಂಗ್-ಆನ್ ಬೌಂಡರಿಯಲ್ಲಿ ಸುಲಭದ ಕ್ಯಾಚ್ ನೀಡಿದ್ದರು. ಆದರೆ, ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಜೈಸ್ವಾಲ್ ಚೆಂಡನ್ನು ಹಿಡಿಯುವಲ್ಲಿ ವಿಫಲರಾದರು. ಇದೇ ಜೀವದಾನವನ್ನು ಬಳಸಿಕೊಂಡ ಮಾರ್ಕ್ರಾಮ್, ಭಾರತದ ಬೌಲರ್ ಗಳನ್ನು ಮನಬಂದಂತೆ ದಂಡಿಸಿದರು.

ಮಾರ್ಕ್ರಾಮ್ ಅಬ್ಬರದ ಶತಕ

ಜೈಸ್ವಾಲ್ ನೀಡಿದ ಜೀವದಾನದ ನಂತರ ಮಾರ್ಕ್ರಾಮ್ ಅವರ ಆಟದ ಸ್ವರೂಪವೇ ಬದಲಾಯಿತು. ಆರಂಭದಲ್ಲಿ ಕ್ರೀಸ್ ಗೆ ಹೊಂದಿಕೊಳ್ಳಲು ಪರದಾಡಿದ್ದ ಅವರು, ನಂತರ ರುದ್ರನರ್ತನಗೈದರು. ಕೇವಲ 98 ಎಸೆತಗಳನ್ನು ಎದುರಿಸಿದ ಮಾರ್ಕ್ರಾಮ್, ಬರೋಬ್ಬರಿ 10 ಬೌಂಡರಿ ಹಾಗೂ 4 ಆಕಾಶದೆತ್ತರದ ಸಿಕ್ಸರ್ ಗಳ ನೆರವಿನಿಂದ 110 ರನ್ ಸಿಡಿಸಿದರು. ಇದು ಏಕದಿನ ಕ್ರಿಕೆಟ್ ನಲ್ಲಿ ಅವರ 4ನೇ ಶತಕವಾಗಿದ್ದು, ಭಾರತದ ವಿರುದ್ಧ ಆರಂಭಿಕ ಆಟಗಾರನಾಗಿ ದಾಖಲಿಸಿದ ಚೊಚ್ಚಲ ಶತಕವಾಗಿದೆ.

ಅಂತಿಮವಾಗಿ ಹರ್ಷಿತ್ ರಾಣಾ ಬೌಲಿಂಗ್ ನಲ್ಲಿ ಮಾರ್ಕ್ರಾಮ್ ಔಟಾದರಾದರೂ, ಅಷ್ಟರಲ್ಲಾಗಲೇ ಅವರು ತಂಡವನ್ನು ಗೆಲುವಿನ ದ್ವಾರಕ್ಕೆ ತಂದು ನಿಲ್ಲಿಸಿದ್ದರು.

ಕೇವಲ ಮಾರ್ಕ್ರಾಮ್ ಮಾತ್ರವಲ್ಲದೆ, ದಕ್ಷಿಣ ಆಫ್ರಿಕಾದ ಇತರ ಬ್ಯಾಟರ್ ಗಳು ಕೂಡ ಭಾರತದ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಮ್ಯಾಥ್ಯೂ ಬ್ರೀಟ್ಜ್ಕೆ 68 ರನ್, ಡೆವಾಲ್ಡ್ ಬ್ರೇವಿಸ್ 54 ರನ್ ಮತ್ತು ನಾಯಕ ಬವುಮಾ ಸಮಯೋಚಿತ 46 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

ಭಾರತ ತಂಡ ಬ್ಯಾಟಿಂಗ್ ನಲ್ಲಿ ಪರಾಕ್ರಮ ಮೆರೆದರೂ, ನಿರ್ಣಾಯಕ ಹಂತದಲ್ಲಿ ಕೈಚೆಲ್ಲಿದ ಕ್ಯಾಚ್ ಪಂದ್ಯದ ಫಲಿತಾಂಶವನ್ನೇ ಬದಲಿಸಿತು. ಈ ಸೋಲು ಟೀಮ್ ಇಂಡಿಯಾದ ಫೀಲ್ಡಿಂಗ್ ಗುಣಮಟ್ಟದ ಬಗ್ಗೆ ಮತ್ತೊಮ್ಮೆ ಪ್ರಶ್ನೆ ಎತ್ತುವಂತೆ ಮಾಡಿದೆ.

ShareTweetSendShare
Join us on:

Related Posts

ಪುಟಿನ್‌ ಗೆ ಭಾರತದ ಪ್ರವಾಸದ ವೇಳೆ ‘ಅತೀ ರಹಸ್ಯ’ ಭದ್ರತೆ – ಮಲ, ಮೂತ್ರವೂ ರಷ್ಯಾಕ್ಕೆ ವಾಪಸ್!

ಪುಟಿನ್‌ ಗೆ ಭಾರತದ ಪ್ರವಾಸದ ವೇಳೆ ‘ಅತೀ ರಹಸ್ಯ’ ಭದ್ರತೆ – ಮಲ, ಮೂತ್ರವೂ ರಷ್ಯಾಕ್ಕೆ ವಾಪಸ್!

by Shwetha
December 5, 2025
0

ಭಾರತ ಪ್ರವಾಸಕ್ಕೆ ಬರುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಭದ್ರತಾ ವ್ಯವಸ್ಥೆಯ ಬಗ್ಗೆ ಈಗ ಜಾಗತಿಕ ಮಟ್ಟದಲ್ಲೇ ಚರ್ಚೆ ಶುರುವಾಗಿದೆ. ಸಾಮಾನ್ಯ ರಾಷ್ಟ್ರಾಧ್ಯಕ್ಷರಿಗೆ ನೀಡುವ ಭದ್ರತೆಗಿಂತಲೂ...

ನಾಟಿಕೋಳಿ ರುಚಿ ಬಿಡಿ, ಬಡವರ ಹಾಸ್ಟೆಲ್ ಊಟ ಮಾಡಿ: ಅಹಿಂದ ಕಾಳಜಿ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಆರ್ ಅಶೋಕ್ ಬಹಿರಂಗ ಸವಾಲ್

ನಾಟಿಕೋಳಿ ರುಚಿ ಬಿಡಿ, ಬಡವರ ಹಾಸ್ಟೆಲ್ ಊಟ ಮಾಡಿ: ಅಹಿಂದ ಕಾಳಜಿ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಆರ್ ಅಶೋಕ್ ಬಹಿರಂಗ ಸವಾಲ್

by Shwetha
December 5, 2025
0

ಬೆಂಗಳೂರು: ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ಸರ್ಕಾರಿ ಹಾಸ್ಟೆಲ್ಗಳಲ್ಲಿ ಬಡ ಹೆಣ್ಣು ಮಕ್ಕಳ ಸುರಕ್ಷತೆ ಆತಂಕಕ್ಕೀಡಾಗಿದ್ದು, ಈ ವಿಚಾರವಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ...

ದೆಹಲಿಯಲ್ಲಿ ಡಿಕೆಶಿ ಬ್ರಹ್ಮಾಸ್ತ್ರ: ಸಿದ್ದರಾಮಯ್ಯ ಬಣದ ಸಚಿವರಿಗೆ ಕಂಟಕ, ಹೈಕಮಾಂಡ್ ಅಂಗಳದಲ್ಲಿ ಸಚಿವರ ತಲೆದಂಡದ ಪಟ್ಟಿ

ದೆಹಲಿಯಲ್ಲಿ ಡಿಕೆಶಿ ಬ್ರಹ್ಮಾಸ್ತ್ರ: ಸಿದ್ದರಾಮಯ್ಯ ಬಣದ ಸಚಿವರಿಗೆ ಕಂಟಕ, ಹೈಕಮಾಂಡ್ ಅಂಗಳದಲ್ಲಿ ಸಚಿವರ ತಲೆದಂಡದ ಪಟ್ಟಿ

by Shwetha
December 5, 2025
0

ಬೆಂಗಳೂರು: ರಾಜ್ಯ ಕಾಂಗ್ರೆಸ್ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದೆಹಲಿಯಲ್ಲಿ ಹೈಕಮಾಂಡ್ ನಾಯಕರಿಗೆ ಸಲ್ಲಿಸಿರುವ ಗೌಪ್ಯ ವರದಿಯೊಂದು ರಾಜ್ಯ...

Scholarship Alert:ಬಿ.ಎಡ್ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ, ಸಿಗಲಿದೆ 25,000 ರೂ ಪ್ರೋತ್ಸಾಹಧನ ಇಂದೇ ಅಪ್ಲೈ ಮಾಡಿ

Scholarship Alert:ಬಿ.ಎಡ್ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಭರ್ಜರಿ ಸಿಹಿ ಸುದ್ದಿ, ಸಿಗಲಿದೆ 25,000 ರೂ ಪ್ರೋತ್ಸಾಹಧನ ಇಂದೇ ಅಪ್ಲೈ ಮಾಡಿ

by Shwetha
December 5, 2025
0

ಬೆಂಗಳೂರು: ದೇಶದ ಭವಿಷ್ಯವನ್ನು ರೂಪಿಸುವ ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡು, ಬಿ.ಎಡ್ (B.Ed) ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವು ಭರ್ಜರಿ ಸಿಹಿ ಸುದ್ದಿಯೊಂದನ್ನು ನೀಡಿದೆ. ಶಿಕ್ಷಣ ಕ್ಷೇತ್ರದಲ್ಲಿ...

ಸಂಕ್ರಾಂತಿ ಕ್ರಾಂತಿ ಕೋಡಿಶ್ರೀಗಳ ಸ್ಫೋಟಕ ಭವಿಷ್ಯಕ್ಕೆ ಬೆಚ್ಚಿಬಿದ್ದ ರಾಜಕೀಯ ವಲಯ ಹೈಕಮಾಂಡ್ ನಡೆಗೆ ಸಿದ್ದರಾಮಯ್ಯ ಶರಣಾಗತಿ!?

ಸಂಕ್ರಾಂತಿ ಕ್ರಾಂತಿ ಕೋಡಿಶ್ರೀಗಳ ಸ್ಫೋಟಕ ಭವಿಷ್ಯಕ್ಕೆ ಬೆಚ್ಚಿಬಿದ್ದ ರಾಜಕೀಯ ವಲಯ ಹೈಕಮಾಂಡ್ ನಡೆಗೆ ಸಿದ್ದರಾಮಯ್ಯ ಶರಣಾಗತಿ!?

by Shwetha
December 5, 2025
0

ರಾಜ್ಯ ರಾಜಕೀಯದಲ್ಲಿ ಸದ್ಯದ ವಿದ್ಯಮಾನಗಳು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರ ದೇಹಭಾಷೆಯಲ್ಲಿನ ಬದಲಾವಣೆಗಳು ಅಚ್ಚರಿ ಮೂಡಿಸುತ್ತಿವೆ. ಇದಕ್ಕೆ ಪೂರಕವೆಂಬಂತೆ ಪ್ರಸಿದ್ಧ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಭವಿಷ್ಯವಾಣಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2025 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2025 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram