ಬೆಂಗಳೂರು: ಮದ್ಯಪಾನ ಮಾಡಿ ಕಾಲೇಜಿಗೆ ಬಂದಿದ್ದನ್ನು ವಿರೋಧಿಸಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್ಗಳ ಮೇಲ್ವಿಚಾರಕನನ್ನೇ ಚಾಕುವಿನಿಂದ ಇರಿದು ವಿದ್ಯಾರ್ಥಿಯೊಬ್ಬಾತ ಕೊಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಸಿಲಿಕಾನ್ ಸಿಟಿಯ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾಲೇಜೊಂದರಲ್ಲಿ ನಡೆದಿದೆ. ಸೆಕ್ಯೂರಿಟಿ ಗಾರ್ಡ್ ಹಾಗೂ ಡಿಸಿಪ್ಲೀನ್ ಉಸ್ತುವಾರಿ ಜೈ ಕಿಶೋರ್ ರಾಯ್ ಎಂಬವರನ್ನು ಕಾಲೇಜು ವಿದ್ಯಾರ್ಥಿ ಭಾರ್ಗಬ್ ಕೊಲೆ ಮಾಡಿದ್ದಾನೆ.
ಭಾರ್ಗವ್ ಮದ್ಯಪಾನ ಮಾಡಿ ಕಾಲೇಜಿಗೆ ಬಂದಿದ್ದ. ಭಾರ್ಗವ್ ನನ್ನು ಜೈ ಕಿಶೋರ್ ಗೇಟ್ ಹತ್ತಿರ ತಡೆದಿದ್ದರು. ಇದರಿಂದ ಇಬ್ಬರ ನಡುವೆ ವಾಗ್ವಾದ ನಡೆದಿದೆ. ನಂತರ ಮನೆಗೆ ಹೋಗಿ ಚಾಕು ತಂದ ವಿದ್ಯಾರ್ಥಿಯು ಸೆಕ್ಯೂರಿಟಿ ಗಾರ್ಡ್ ಉಸ್ತುವಾರಿಗೆ ಇರಿದಿದ್ದಾನೆ.
ಅಸ್ಸಾಂ ಮೂಲದ ಭಾರ್ಗವ್ ಕಾಲೇಜಿನಲ್ಲಿ ಬಿಎ ಅಂತಿಮ ವರ್ಷದಲ್ಲಿ ಓದುತ್ತಿದ್ದಾನೆ. ಸದ್ಯ ಕೊಲೆ ಆರೋಪಿಯನ್ನು ಅಮೃತಹಳ್ಳಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಲೆಯಾದ ಕಿಶೋರ್ ಉತ್ತರ ಭಾರತ ಮೂಲದವರಾಗಿದ್ದು, ಕಳೆದ ಹತ್ತು ವರ್ಷಗಳಿಂದ ಇದೇ ಕಾಲೇಜಿನಲ್ಲಿ ಸೆಕ್ಯೂರಿಟಿ ಗಾರ್ಡ್ಗಳ ಮೇಲ್ವಿಚಾರಕರಾಗಿ ಕೆಲಸ ಮಾಡುತ್ತಿದ್ದರು