ADVERTISEMENT
Saturday, March 28, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Health

Helath Tips : ದತ್ತೂರಿಯ ಆಯುರ್ವೇದಿಕ್ ಮಹತ್ವ ಗೊತ್ತಾ…??

Namratha Rao by Namratha Rao
February 6, 2022
in Health, Newsbeat, ಆರೋಗ್ಯ
heakth - saakshatv
Share on FacebookShare on TwitterShare on WhatsappShare on Telegram

Helath Tips : ದತ್ತೂರಿಯ ಆಯುರ್ವೇದಿಕ್ ಮಹತ್ವ ಗೊತ್ತಾ…??

ದತ್ತೂರಿ ಗಿಡವು ಭಾರತದ ಎಲ್ಲಾ ಭಾಗಗಳಲ್ಲಿ ಯಥೇಚ್ಛವಾಗಿ ಕಂಡುಬರುತ್ತದೆ.

Related posts

ಇಂದು ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ

ಇಂದು ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ

March 27, 2026
ವಾಹನ ನೋಂದಣಿ ತೆರಿಗೆ ಇಳಿಕೆ: ತಿದ್ದುಪಡಿ ವಿಧೇಯಕ ಅಂಗೀಕಾರ

ವಾಹನ ನೋಂದಣಿ ತೆರಿಗೆ ಇಳಿಕೆ: ತಿದ್ದುಪಡಿ ವಿಧೇಯಕ ಅಂಗೀಕಾರ

March 27, 2026

ಇದು ಬಂಗಾರಕ್ಕಿಂತ ಶ್ರೇಷ್ಠ.

ಈ ವನಸ್ಪತಿಯ ಪರಿಚಯವು ಚರಕ, ಸುಶ್ರುತ ಸಂಹಿತೆಗಳಲ್ಲಿ ಕಾಣಬಹುದು. ಹೊಳೆಬದಿಗಳಲ್ಲಿ ಕೊಳಕು ಪ್ರದೇಶಗಳಲ್ಲಿ ದತ್ತೂರಿ ಗಿಡವು ಬೆಳೆಯುತ್ತದೆ. ಅಸ್ತಮಾ, ನಾಯಿಕೆಮ್ಮು, ಸೆಳೆತ ರೋಗಗಳಿಗೆ ದತ್ತೂರಿ ಒಳ್ಳೆಯ ಮದ್ದು ಎಂದು ಹಲವು ವೈದ್ಯರು ಒಪ್ಪಿಕೊಂಡಿದ್ದಾರೆ. ಮನಸ್ಸನ್ನು ವಿಕೃತಗೊಳಿಸುವ ಶಕ್ತಿ ದತ್ತೂರಿ ಗಿಡದ ಬೀಜದಲ್ಲಿರುವುದರಿಂದ ವಶೀಕರಣದಂತಹ ಕೆಲಸಕ್ಕೆ ಇದರ ಬೀಜವನ್ನು ಹಿಂದಿನ ಕಾಲದಿಂದಲೂ ಬಳಸುತ್ತಿದ್ದರು.

ಗಾಯ, ನೋವು, ತುರಿಕೆ, ತ್ವಚೆಯ ರೋಗಗಳನ್ನು ನಿವಾರಿಸಿ ರ್ಮಕ್ಕೆ ಕಾಂತಿ ನೀಡುವ ದತ್ತೂರಿಯು ಆಯುರ್ವೇದದ ಪ್ರಮುಖದ್ರವ್ಯಗಳಲ್ಲೊಂದು.
ಇದಕ್ಕೆ ಕನ್ನಡದಲ್ಲಿ ಉಮ್ಮತ್ತಿ ಅಥವಾ ದತ್ತೂರಿ ಎಂದೂ, ತುಳುವಿನಲ್ಲಿ ಉಂಬೆದ ದೈ, ಸಂಸ್ಕೃತ ಮತ್ತು ಹಿಂದಿಯಲ್ಲಿ ದತ್ತೂರ ಎಂದೂ ಇಂಗ್ಲೀಷ್ ನಲ್ಲಿ ಥಾರ್ನ್ ಆಪಲ್ ಎಂದೂ ಕರೆಯುತ್ತಾರೆ. ಇದಕ್ಕಿರುವ ಇನ್ನಿತರ ಹೆಸರುಗಳೆಂದರೆ, ಕನಕ, ಮದನ, ಶಿವಪ್ರಿಯಾ, ಮಾತುಲ ಪುತ್ರಕ, ಉನ್ಮತ್ತ, ಕಾಂಚನಾ, ಹೇಮಾ, ಮಹಾಮೋಹಿ ಇತ್ಯಾದಿ.

datturi aurvedic - health - saakshatv
ಈ ಗಿಡವು 6 ರಿಂದ 15 ಸೆಂಟಿಮೀಟರ್ ನಷ್ಟು ಉದ್ದದ ತ್ರಿಕೋನಾಕಾರದ ಎಲೆಗಳನ್ನು ಹೊಂದಿದ್ದು, 5 ರಿಂದ 15 ಸೆಂಟಿಮೀಟರ್ ನಷ್ಟು ಉದ್ದದ ಬಿಳಿ ನೇರಳೆ ಬಣ್ಣದ ಹೂಗಳನ್ನು ಹೊಂದಿರುತ್ತದೆ. ಕಾಯಿಗಳು ಚೆಂಡಿನಾಕಾರದಲ್ಲಿದ್ದು ಮುಳ್ಳಿನಿಂದ ಕೂಡಿರುತ್ತದೆ.

ಇದರಲ್ಲಿ ಎರಡು ಪ್ರಮುಖ ಪ್ರಬೇಧಗಳಿವೆ. ಅವು ಶ್ವೇತ ದತ್ತೂರ (ದತೂರ ಸ್ಟ್ರಾಮೋನಿಯಂ), ಬಿಳಿ ದತ್ತೂರ (ದತೂರ ಮೆಟಲ್). ಆದರೆ ಪುರಾತನ ವೈದ್ಯಶಾಸ್ತ್ರಜ್ಞರು ದತ್ತೂರಿ ಗಿಡದಲ್ಲಿ ಶ್ವೇತ ದತ್ತೂರ, ನೀಲದತ್ತೂರ, ಪೀತ ದತ್ತೂರ, ರಕ್ತದತ್ತೂರ, ಕೃಷ್ಣದತ್ತೂರ ಎಂಬುದಾಗಿ ಐದು ಪ್ರಬೇಧಗಳನ್ನು ಗುರುತಿಸಿದ್ದಾರೆ. ದತ್ತೂರಿ ಗಿಡದ ಬೇರು, ಕಾಯಿ, ಬೀಜ, ಹೂವು, ಎಲೆ ಔಷಧೀಯ ಉಪಯೋಗವನ್ನು ಹೊಂದಿವೆ. ದತ್ತೂರದಿಂದ ತಯಾರಿಸಿದ ತೈಲವನ್ನು ನೋವಿನ ಸ್ಥಳಕ್ಕೆ ಹಚ್ಚಿ ಮೃದುವಾಗಿ ಉಜ್ಜಿ, ಶಾಖ ಕೊಡುವುದರಿಂದ ಸಂಧಿವಾತ, ಉಳುಕಿನ ನೋವು ಮತ್ತು ವಾತವ್ಯಾಧಿಗಳಲ್ಲಿ ಕಾಣುವ ಸಂಧಿ ಶೂಲಗಳು ಕಡಿಮೆಯಾಗುವುವು.

Tags: #saakshatvhealth benifitsHealth tips
ShareTweetSendShare
Join us on:

Related Posts

ಇಂದು ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ

ಇಂದು ಎಲ್ಲಾ ರಾಜ್ಯಗಳ ಸಿಎಂ ಜೊತೆ ಪ್ರಧಾನಿ ಮೋದಿ ಸಭೆ

by Shwetha
March 27, 2026
0

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನ ಪರಿಸ್ಥಿತಿಗಳ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಇಂದು ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಇರಾನ್–ಅಮೆರಿಕ ಹಾಗೂ ಇಸ್ರೇಲ್ ನಡುವಿನ ಯುದ್ಧದ...

ವಾಹನ ನೋಂದಣಿ ತೆರಿಗೆ ಇಳಿಕೆ: ತಿದ್ದುಪಡಿ ವಿಧೇಯಕ ಅಂಗೀಕಾರ

ವಾಹನ ನೋಂದಣಿ ತೆರಿಗೆ ಇಳಿಕೆ: ತಿದ್ದುಪಡಿ ವಿಧೇಯಕ ಅಂಗೀಕಾರ

by Shwetha
March 27, 2026
0

ರಾಜ್ಯದಲ್ಲಿ ವಾಹನ ನೋಂದಣಿ ತೆರಿಗೆಯನ್ನು ಇಳಿಸುವ ಮಹತ್ವದ ತಿದ್ದುಪಡಿ ವಿಧೇಯಕ ಅಂಗೀಕರಿಸಲಾಗಿದೆ. ಈ ಮೂಲಕ 2026-27ನೇ ಸಾಲಿನಲ್ಲಿ ಹೊಸ ವಾಹನಗಳ ನೋಂದಣಿಯಿಂದ ಸುಮಾರು ₹250 ಕೋಟಿ ಆದಾಯ...

ವಿಧಾನಸೌಧದಲ್ಲಿ ಐಪಿಎಲ್ ಗದ್ದಲ: ನಾವು ವಿಐಪಿಗಳು, ಕ್ಯೂನಲ್ಲಿ ನಿಲ್ಲಲ್ಲ! ಆರ್​ಸಿಬಿ ಟಿಕೆಟ್​ಗಾಗಿ ಪಟ್ಟು ಹಿಡಿದ ಶಾಸಕರು

ವಿಧಾನಸೌಧದಲ್ಲಿ ಐಪಿಎಲ್ ಗದ್ದಲ: ನಾವು ವಿಐಪಿಗಳು, ಕ್ಯೂನಲ್ಲಿ ನಿಲ್ಲಲ್ಲ! ಆರ್​ಸಿಬಿ ಟಿಕೆಟ್​ಗಾಗಿ ಪಟ್ಟು ಹಿಡಿದ ಶಾಸಕರು

by Shwetha
March 27, 2026
0

ಬೆಂಗಳೂರು: ರಾಜ್ಯದಲ್ಲಿ ಐಪಿಎಲ್ ಕ್ರಿಕೆಟ್ ಜ್ವರ ತಾರಕಕ್ಕೇರಿದ್ದು, ಈ ಬಿಸಿಯು ಈಗ ರಾಜ್ಯದ ಶಕ್ತಿ ಕೇಂದ್ರವಾದ ವಿಧಾನಸೌಧಕ್ಕೂ ವ್ಯಾಪಿಸಿದೆ. ಅಭಿಮಾನಿಗಳು ಟಿಕೆಟ್‌ಗಾಗಿ ಕ್ರೀಡಾಂಗಣದ ಹೊರಗೆ ಮತ್ತು ಆನ್‌ಲೈನ್‌ನಲ್ಲಿ...

ಬ್ರೋಕನ್ ಪಾಕಿಸ್ತಾನ ಇಂದು ಬ್ರೋಕರ್ ಆಗಲು ಮೋದಿಯೇ ಕಾರಣ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ

ಬ್ರೋಕನ್ ಪಾಕಿಸ್ತಾನ ಇಂದು ಬ್ರೋಕರ್ ಆಗಲು ಮೋದಿಯೇ ಕಾರಣ ಎಂದು ಕಾಂಗ್ರೆಸ್ ತೀವ್ರ ವಾಗ್ದಾಳಿ

by Shwetha
March 27, 2026
0

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ವಿದೇಶಾಂಗ ನೀತಿಯ ಮತ್ತು ರಾಜತಾಂತ್ರಿಕ ವೈಫಲ್ಯಗಳಿಂದಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಅಸ್ಥಿರವಾಗಿದ್ದ ಪಾಕಿಸ್ತಾನವು ಇಂದು ಜಾಗತಿಕ...

ಮುಖ್ಯಮಂತ್ರಿಗಳ ಸಂಧಾನಕ್ಕೂ ಜಗ್ಗದ ಸಾದಿಕ್ ಅಖಾಡದಲ್ಲೇ ಉಳಿದ ಪೈಲ್ವಾನ್ : ಕೈ ಪಾಳೆಯದಲ್ಲಿ ನಡುಕ ಶುರು

ಮುಖ್ಯಮಂತ್ರಿಗಳ ಸಂಧಾನಕ್ಕೂ ಜಗ್ಗದ ಸಾದಿಕ್ ಅಖಾಡದಲ್ಲೇ ಉಳಿದ ಪೈಲ್ವಾನ್ : ಕೈ ಪಾಳೆಯದಲ್ಲಿ ನಡುಕ ಶುರು

by Shwetha
March 27, 2026
0

ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆಯ ರಾಜಕೀಯ ಅಖಾಡ ದಿನದಿಂದ ದಿನಕ್ಕೆ ರಂಗೇರುತ್ತಿದೆ. ದಶಕಗಳಿಂದ ಶಾಮನೂರು ಕುಟುಂಬದ ಭದ್ರಕೋಟೆಯಾಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಈಗ ಬಂಡಾಯದ ಬಿರುಗಾಳಿ ಎದ್ದಿದೆ....

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram