ಮಳೆಗಾಲದಲ್ಲಿ ಆಗಾಗ ಹೇಳದೆ ಕೇಳದೆ ತಪ್ಪೋ ಆರೋಗ್ಯಕ್ಕೆ ಏನ್ ಮಾಡೋದು ಅಂತ ಯೋಚನೆ ಮಾಡ್ತಿದ್ದೀರಾ..? ಹಾಗಿದ್ರೆ ನಿಮಗೊಂದು ಸಿಂಪಲ್ ಟಿಪ್ ಇಲ್ಲಿದೆ.
ನಮ್ಮ ದೈನಂದಿನ ಜೀವನದ ಆಹಾರ ಪದ್ಧತಿಯಲ್ಲಿ ಕೊಂಚ ಬದಲಾವಣೆ ಮಾಡೋದ್ರಿಂದ ನಾವು ಉತ್ತಮ ಆರೋಗ್ಯ ಹೊಂದಬಹುದು ಎಂದು ನಿಮಗೆ ತಿಳಿದಿದೆಯೇ…!
ಹೌದು..ನಾವು ಆರೋಗ್ಯ ಕೆಟ್ಟ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ, ಆರೋಗ್ಯ ಕೆಡದಂತೆ ನೋಡಿಕೊಳ್ಳುವುದು ತುಂಬಾ ಮುಖ್ಯ. ನಮ್ಮ ದೇಹವನ್ನು ಒಳಗಿನಿಂದ ಹೈಡ್ರೇಟ್ ಮಾಡುವಲ್ಲಿ ಕೆಲವು ಆಹಾರಗಳು ನಮಗೆ ಬಹಳ ಸಹಾಯಕಾರಿಯಾಗಿವೆ. ಅಂತಹ ಪದಾರ್ಥಗಳನ್ನು ನೆನಪಿಸಿ ಕೊಂಡಾಗ ಮೊದಲು ಬರುವ ಹೆಸರೆಂದರೆ ಅದು ತುಳಸಿ.
ಆದಿ ಅನಾದಿ ಕಾಲದಿಂದಲು ಆಯುವೇದಿಕ್ ಔಷದಿಯಾಗಿರುವ ತುಳಸಿ. ಆರೋಗ್ಯಕರ ಅಂಶವನ್ನು ಹೇರಳವಾಗಿ ತುಂಬಿಕೊಂಡಿದೆ.
ತುಳಸಿಯು ವಿಟಮಿನ್ ಎ, ವಿಟಮಿನ್ ಕೆ, ಐರನ್, ಮ್ಯಾಂಗನೀಸ್, ಕ್ಯಾಲ್ಸಿಯಂ ಸತ್ವಗಳಿವೆ ಜೊತೆಗೆ ಬೀಟಾ–ಕ್ರಿಪ್ಟೋಕ್ಸಾಂಥಿನ್,ಝೀಕ್ಯಾಂಥಿನ್, ಲುಟೀನ್ ಮತ್ತು ಬೀಟಾ–ಕ್ಯಾರೋಟಿನ್ ಸೇರಿದಂತೆ ನಿರೋಧಕ ಶಕ್ತಿಗಳನ್ನು ಹೇರಳವಾಗಿ ಹೊಂದಿದೆ.
ಒಣತುಳಸಿಗಿಂತ ಹಸಿ ತುಳಸಿಯು ಆರೋಗ್ಯ ಸುದಾರಿಸುವಲ್ಲಿ ಹೆಚ್ಚುಪರಿಣಾಮಕಾರಿ. ತುಳಸಿಯಲ್ಲಿರುವ ಕೆಲವು ರೋಗನಿರೋಧಕ ಅಂಶಗಳು ಈ ಕೆಳಗಿನಂತಿವೆ.
ತುಳಸಿ ಸೊಂಕುಗಳನ್ನು ತಡೆಗಟ್ಟುತ್ತದೆ.
ಆ್ಯಂಟಿ ಬ್ಯಾಕ್ಟೀರಿಯಲ್ ಗುಣವನ್ನು ಹೊಂದಿರುವ ತುಳಸಿಯು. ಚರ್ಮದ ಅಲರ್ಜಿ, ಮೂತ್ರದ ಸೋಂಕು, ಉಸಿರಾಟ ಮತ್ತು ಹೊಟ್ಟೆಯ ಸೋಂಕನ್ನು ಸೇರಿದಂತೆ ಹಲವಾರು ಸೋಂಕುಗಳ ವಿರುದ್ಧ ಹೋರಾಡಲು ಇದು ಸಹಾಯ ಮಾಡುತ್ತದೆ.
ತುಳಸಿಯು ಪ್ರಮುಖವಾಗಿ ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.
ತುಳಸಿಯು ಯುಜೆನಾಲ್ ಎಂಬ ರಾಸಾಯನಿಕ ಅಂಶವನ್ನು ಹೊಂದಿದ್ದು, ಹೊಟ್ಟೆ ಉರಿಯನ್ನು ಕಡಿಮೆಮಾಡುವಲ್ಲಿ ಹೆಚ್ಚು ಪರಿಣಾಮ ಕಾರಿಯಾಗಿದೆ .
ತುಳಸಿಯಲ್ಲಿ ಜೀರ್ಣಕ್ರಿಯೆ ಮತ್ತು ನರಮಂಡಲಕ್ಕೆ ಬೇಕಾದ ಹಲವು ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ.
ತುಳಸಿಯಲ್ಲಿ ಜೀರ್ಣಕ್ರಿಯೆಯನ್ನು ಮತ್ತು ಪಿಹೆಚ್ ಮಟ್ಟವನ್ನು ಸಮತೋಲನ ಮಾಡುವ ಉತ್ತಮ ಅಂಶಗಳನ್ನು ಹೊಂದಿದೆ.
ಮಧುಮೇಹ , ಹೃದಯರೋಗ, ಕ್ಯಾನ್ಸರ್, ಸಂಧಿವಾತ ದಂತಹ ಆರೋಗ್ಯ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಫ್ಲೇವೊನೈಡ್ ಎಂಬ ಅಂಶವನ್ನು ಹೊಂದಿದ ತುಳಸಿಯು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ದೇಹದಲ್ಲಿ ಸೆಲ್ಯುಲಾರ್ ರಚನೆಯನ್ನು ಹಾನಿಯಿಂದ ಕಾಪಾಡುತ್ತದೆ.
ತುಳಸಿಯಲ್ಲಿರು ಮಧುಮೇಹ ನಿರ್ವಹಣೆಯ ಅಂಶಗಳು.
ಮಧುಮೇಹ ಹೊಂದಿರುವವರು ತುಳಸಿಯನ್ನು ನಿಮ್ಮ ಆಹಾರದಲ್ಲಿ ಬಳಸುವುದರಿಂದ ಅನೇಕ ಪ್ರಯೋಜನಗಳನ್ನು ಹೊಂದಬಹುದು.
ಮಧುಮೇಹ ನಿರ್ವಹಣೆಗೆ ಸಹಾಯ ಮಾಡುವ ತುಳಸಿಯು ರಕ್ತದಲ್ಲಿನ ಸಕ್ಕರೆ ಬಿಡುಗಡೆಯ ಪ್ರಕ್ರಿಯೆಯನ್ನು ನಿಧಾನಗೊಳಿಸುವಲ್ಲಿ ಸಹಾಯ ಮಾಡುತ್ತದೆ.
ತುಳಸಿಯು ಅತಿಯಾದ ದೇಹದ ತೂಕ ಇತ್ಯಾದಿಗಳನ್ನು ಒಳಗೊಂಡಂತೆ ಮಧುಮೇಹಕ್ಕೆ ಸಂಬಂಧಿಸಿದ ಇತರ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಸಹಾಯ ಮಾಡುತ್ತದೆ.
ಲಿವರ್ ಆರೋಗ್ಯ ಕಾಪಾಡುವಲ್ಲಿ ತುಳಸಿಯ ಮಹತ್ವ.
ದೇಹದಲ್ಲಿ ಹೆಚ್ಚಾದ ಕೊಬ್ಬು ಮತ್ತು ಕೆಟ್ಟ ರಾಸಾಯನಿಕ ಅಂಶಗಳನ್ನು ತನ್ನಲ್ಲಿ ಸಂಗ್ರಹಿಸಿಡುವ ಲಿವರ ಯಕೃತ್ದಲ್ಲಿ ಶೇಖರಣೆಗೊಂಡ ಕಲ್ಮಶಗಳನ್ನು ಹೊರಹಾಕಲು ತುಳಸಿ ಪ್ರಮುಖ ಪಾತ್ರವಹಿಸುತ್ತದೆ.
ಪಿತ್ತಜನಕಾಂಗಕ್ಕೆ ತುಳಸಿ ಒಂದು ಒಳ್ಳೆಯ ಆಹಾರವಾಗಿದೆ.
ತುಳಸಿ ಸೇವನೆಯಿಂದ ಲಿವರ್ ಆರೋಗ್ಯ ಸುಧಾರಿಸುತ್ತದೆ.
ತುಳಸಿಯಿಂದ ಉತ್ತಮ ಚರ್ಮದ ಆರೈಕೆ .
ಚರ್ಮದಲ್ಲಿ ಮುಚ್ಚಿಹೋಗುವ ರಂಧ್ರಗಳುನ್ನು, ಕಲ್ಮಶಗಳನ್ನು ಕೊಳಕನ್ನು ತೆಗೆದುಹಾಕುವಲ್ಲಿ ತುಳಸಿ ಹೆಚ್ಚುಪರಿಣಾಮಕಾರಿ.
ತುಳಸಿ ಎಲೆಗಳನ್ನು ಶ್ರೀಗಂಧದ ಪುಡಿ ಮತ್ತು ರೋಸ್ ವಾಟರ್ ನೊಂದಿಗೆ ದಪ್ಪಪೇಸ್ಟ್ ತಯಾರಿಸಿ.
ಈ ಪ್ಯಾಕ್ ಅನ್ನು ನಿಮ್ಮ ಮುಖ ಮತ್ತು ಕುತ್ತಿಗೆ ಭಾಗಕ್ಕೆ ಹಚ್ಚಿ 15 ರಿಂದ 20 ನಿಮಿಷಗಳ ಕಾಲ ಬಿಡಿ .ನಂತರ ತಣ್ಣೀರಿನಿಂದ ತೊಳೆಯಿರಿ.
ಮೊಡವೆಗಳನ್ನು ಹೊಂದಿದ್ದರೆ, ತುಳಸಿ ಪೇಸ್ಟ್ ತಯಾರಿಸಿ ಬಳಸಿ ಇದರಲ್ಲಿನ ಆಂಟಿಮೈಕ್ರೊಬಿಯಲ್ ಅಂಶ ಚರ್ಮಕ್ಕೆ ಸುಧಾರಿಸಲು ಸಹಾಯ ಮಾಡುತ್ತದೆ
ತಳಸಿ ಕಾಯಿಲೆಗಳನ್ನು ಗಾಯಗಳನ್ನು ಗುಣಪಡಿಸುವ ತೈಲ ಸಂಯುಕ್ತಗಳನ್ನು ಹೊಂದಿದೆ.
ಆಳದಿಂದ ಚರ್ಮವನ್ನು ಶುದ್ಧಗೊಳಿಸುವಲ್ಲಿ ತುಳಸಿ ಹೆಚ್ಚುಪರಿಣಾಮಕಾರಿ.
ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದವರಿಗೆ ಚರ್ಮ ರಕ್ಷಣೆಯನ್ನು . ತುಳಸಿ ನೀಡುತ್ತದೆ.
ಕ್ಯಾನ್ಸರ್ ತಡೆಗಟ್ಟುವಲ್ಲಿ ತುಳಸಿಯ ಕೆಲವು ಅಂಶಗಳು.
ತುಳಸಿಯು ಫೈಟೊಕೆಮಿಕಲ್ಗಳನ್ನು ಹೇರಲವಾಗಿ ಹೊಂದಿದೆ.
ಇದು ಚರ್ಮದ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್, ಬಾಯಿಯ ಕ್ಯಾನ್ಸರ್ ಮತ್ತು ಪಿತ್ತಜನಕಾಂಗದ ಕ್ಯಾನ್ಸರ್ ಗಳಿಂದ ರಕ್ಷಿಸುವ ಸಸ್ಯ ಔಷದಿಯಾಗಿದೆ.
ತುಳಸಿಯು ಕ್ಯಾನ್ಸರ್ ಗೆ ಕಾರಣವಾಗುವ ರಾಸಾಯನಿಕಗಳ ವಿರುದ್ಧ ಬೀಟಾ-ಕ್ರಿಪ್ಟೋಕ್ಸಾಂಥಿನ್,ಝೀಕ್ಯಾಂಥಿನ್, ಲುಟೀನ್ ಮತ್ತು ಬೀಟಾ-ಕ್ಯಾರೋಟಿನ್ ಸೇರಿದಂತೆ ನಿರೋಧಕ ಶಕ್ತಿಗಳನ್ನು ಹೊಂದಿದೆ.
ಹೃದಯಕ್ಕೆ ಸಹಕಾರಿಯಾಗುವ ತುಳಸಿ.
ಯುಜೆನಾಲ್ ಎಂಬ ರಾಸಾಯನಿಕ ಅಂಶವನ್ನು ಹೊಂದಿರುವ ತುಳಸಿಯು ಸಂಯುಕ್ತ ರಕ್ತದೊತ್ತಡವನ್ನು ಕಡಿಮೆಯಾಗುತ್ತದೆ.
ತುಳಸಿಯಲ್ಲಿರುವ ಎಣ್ಣೆ ಅಂಶಗಳು ದೇಹದಲ್ಲಿ ಟ್ರೈಗ್ಲಿಸರೈಡ್ಗಳು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.
ತುಳಸಿಯಲ್ಲಿನ್ನ ಮೆಗ್ನೀಸಿಯಮ್ ರಕ್ತ ಪರಿಚಲನೆ ಸುಧಾರಿಸುತ್ತದೆ . ಸ್ನಾಯು ಸೆಳೆತವನ್ನು ತಡೆಯುತ್ತದೆ .
ರಕ್ತನಾಳಗಳು ಮತ್ತು ಸ್ನಾಯುಗಳನ್ನು ವಿಶ್ರಾಂತಿ ಪಡೆಯಲು ತುಳಸಿ ಅನುವು ಮಾಡಿಕೊಡುತ್ತದೆ.
ತುಳಸಿಯಿಂದ ಖಿನ್ನತೆ ದೂರವಾಗುತ್ತದೆ.
ಅಡಾಪ್ಟೋಜೆನ್ ಎಂಬ ಅಂಶವನ್ನು ಹೊಂದಿದ ತುಳಸಿಯು ಒತ್ತಡ, ನಿರೋಧಕ ಅಂಶವನ್ನು ಹೊಂದಿದೆ.
ತುಳಸಿಯು ಶಕ್ತಿ ಮತ್ತು ಸಂತೋಷವನ್ನು ಉಂಟುಮಾಡುವ ಹಾರ್ಮೋನುಗಳನ್ನು ನಿಯಂತ್ರಿಸುವ ಗುಣವನ್ನು ಹೊಂದಿದೆ.
ಇದರಿಂದ ಆತಂಕ ಮತ್ತು ಖಿನ್ನತೆಯನ್ನು ಎದುರಿಸಲು ನೆರವಾಗುತ್ತದೆ.








