ADVERTISEMENT
Sunday, March 29, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ರಾಜ್ಯ ಸರ್ಕಾರದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾದ ಬಾಲ ಪ್ರತಿಭೆ ಆಶ್ರಯ ಪಿ

Shwetha by Shwetha
January 27, 2021
in Newsbeat, Saaksha Special, ಎಸ್ ಸ್ಪೆಷಲ್, ನ್ಯೂಸ್ ಬೀಟ್
Aashraya p
Share on FacebookShare on TwitterShare on WhatsappShare on Telegram

ರಾಜ್ಯ ಸರ್ಕಾರದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾದ ಬಾಲ ಪ್ರತಿಭೆ ಆಶ್ರಯ ಪಿ   Aashraya p

ಪುತ್ತೂರು, ಜನವರಿ27: ಜನವರಿ26 ರಂದು ಮಂಗಳೂರು ನೆಹರು ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪುತ್ತೂರಿನ ಬಾಲಪ್ರತಿಭೆ ಆಶ್ರಯ ಪಿ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಶೈಕ್ಷಣಿಕ, ಕ್ರೀಡೆ, ಸಾಂಸ್ಕೃತಿಕ, ವಿಜ್ಞಾನ ಮಾದರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ ನೀಡಿ ಗೌರವಿಸುತ್ತದೆ. Aashraya p
Aashraya p

Related posts

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

March 29, 2026
ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

March 29, 2026

ಪುತ್ತೂರಿನ ತೆಂಕಿಲ ವಿವೇಕಾನಂದ ಅಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿರುವ ಆಶ್ರಯ ಪಿ ಚೇತನ ಸ್ಟುಡಿಯೊ ಮಾಲಕ ಆಶೋಕ್ ಕುಂಬ್ಳೆ ಮತ್ತು ಆಶ್ರಯ ಕೋಚಿಂಗ್ ಸೆಂಟರ್ ನ ಮುಖ್ಯಸ್ಥೆ ಶೋಭಾ ದಂಪತಿಗಳ ಸುಪುತ್ರಿ.
ವಿಜ್ಞಾನ, ಸಂಗೀತ, ನೃತ್ಯ, ಕರಾಟೆ, ವೇದಗಣಿತ, ನಾಟಕ, ಸ್ಕೇಟಿಂಗ್‌, ಅಬಾಕಸ್, ಈಜು ಜೊತೆಗೆ ಓದಿನಲ್ಲೂ ಮುಂದಿದ್ದು ಸಾಧನೆ ತೋರುತ್ತಿರುವ ಬಹುಮುಖ ಪ್ರತಿಭೆ ಆಶ್ರಯ ಇತರರಿಗೆ ಪ್ರೇರಣೆಯಾಗಿದ್ದಾರೆ.
ಆಶ್ರಯ ಪಿ, ರಾಷ್ಟ್ರಮಟ್ಟದ ಕರಾಟೆಯಲ್ಲಿ ಪ್ರಥಮ, ರಾಷ್ಟ್ರ ಮಟ್ಟದ ವೇದಗಣಿತ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು. ಭರತನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಯಲ್ಲಿ 91% ಗಳಿಸಿರುವ ಇವರನ್ನು ಸಾಕ್ಷಾಟಿವಿ ಮಾತನಾಡಿಸಿದಾಗ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದು, ಸಂದರ್ಶನದ ಆಯ್ದಭಾಗ ಇಲ್ಲಿದೆ.
Aashraya p Aashraya p

ಸಾಕ್ಷಾ ಟಿವಿ : ರಾಜ್ಯ ಸರ್ಕಾರ‌ದ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿಗೆ ಭಾಜನರಾಗಿದ್ದೀರಿ. ಸಾಕ್ಷಾಟಿವಿ ವತಿಯಿಂದ ಅಭಿನಂದನೆಗಳು. ಪ್ರಶಸ್ತಿ ಬಂದಿರುವುದು ಹೇಗೆ ಅನಿಸ್ತಾ ‌ಇದೆ.

ಆಶ್ರಯ ಪಿ : ಧನ್ಯವಾದ..
ಪ್ರಶಸ್ತಿ ಬಂದಿರುವುದು ‌ತುಂಬಾ ಖುಷಿಯಾಗುತ್ತಾ ಇದೆ.

ಸಾಕ್ಷಾ ಟಿವಿ : ನಿಮ್ಮ ಸಾಧನೆಗೆ ಪ್ರೇರಣೆ ಯಾರು ?

ಆಶ್ರಯ ಪಿ : ನನ್ನೆಲ್ಲಾ ಸಾಧನೆಗೆ ಪ್ರೇರಣೆ ನನ್ನ‌ ಅಮ್ಮ. ಚಿಕ್ಕಂದಿನಿಂದಲೇ ನನಗೆ ನೃತ್ಯದಲ್ಲಿ ಆಸಕ್ತಿ ಇತ್ತು. ಹಾಗಾಗಿ ನಾಲ್ಕು ವರ್ಷದವಳಿರುವಾಗಲೇ ಅಮ್ಮ ಗುರು ಬಾಲಕೃಷ್ಣ ಮಂಜೇಶ್ವರ ಅವರ ಬಳಿ ಭರತನಾಟ್ಯಕ್ಕೆ ಸೇರಿಸಿದರು.
ನಾನು ಭರತ ನಾಟ್ಯ, ಕೂಚಿಪುಡಿ ಯನ್ನು ಗುರು ಬಾಲಕೃಷ್ಣ ಮಂಜೇಶ್ವರ ‘ನಾಟ್ಯ ನಿಲಯಂ’ ನಲ್ಲಿ ಕಲಿಯುತ್ತಿದ್ದೇನೆ.
ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ವಿದ್ಯಾ ಈಶ್ವರ ಚಂದ್ರ ‘ಉಮಾ ಮಹೇಶ್ವರ’ ದಲ್ಲಿ ಅಭ್ಯಾಸ ಮಾಡುತ್ತಿದ್ದೇನೆ.
ಈಜು – ಶ್ರೀ ಸೀತಾರಾಂ, ಸ್ಕೇಟಿಂಗ್ ಸೆನ್ವಾಯಿ ಟಿ.ಡಿ. ಥೋಮಸ್, ಶ್ರೀ ತಾರಾನಾಥ್, ಶ್ರೀ ಜಗದೀಶ್
ಅಬಾಕಸ್ – ಶ್ರೀಮತಿ ಮಮತಾ ಭಟ್ ಮತ್ತು ಶ್ರೀಮತಿ ವನಮಾಲಾ ಭಟ್
ವೇದಗಣಿತ – ಶ್ರೀಮತಿ ಮಮತಾ ಭಟ್ ಮತ್ತು ಶ್ರೀಮತಿ ಸ್ವಾತಿ ಅವರ ಬಳಿ ಕಲಿಯುತಿದ್ದೇನೆ

ಸಾಕ್ಷಾ ಟಿವಿ : ಹೆಚ್ಚಾಗಿ ಎಲ್ಲರೂ ಯಾವುದಾದರೂ ಒಂದು ಕ್ಷೇತ್ರದಲ್ಲಿ ಅಥವಾ ಎರಡರಲ್ಲಿ ಮುಂದಿರುತ್ತಾರೆ. ಆದರೆ ನೀವು ಸಂಗೀತ, ನೃತ್ಯ, ನಾಟಕ, ಕರಾಟೆ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಎಲ್ಲದರಲ್ಲೂ ಸಾಧನೆ ಮಾಡುತ್ತಿದ್ದೀರಿ. ಇದು ಹೇಗೆ ಸಾಧ್ಯವಾಯಿತು ?

ಆಶ್ರಯ ಪಿ : ನನ್ನೆಲ್ಲಾ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ನನ್ನ ತಂದೆ ತಾಯಿಯ ಪ್ರೋತ್ಸಾಹ ಮತ್ತು ನಮ್ಮ ‌ಮಿಶ್ರ ಶ್ರಮ ಕಾರಣ. ಶಾಲೆಯ ಶಿಕ್ಷಕರು, ಮುಖ್ಯ ಶಿಕ್ಷಕರು, ಆಡಳಿತ ಮಂಡಳಿ ಸದಸ್ಯರು ಕೂಡ ತುಂಬಾ ಪ್ರೋತ್ಸಾಹ ನೀಡುತ್ತಾರೆ. ಅವರ ಹಾರೈಕೆ ಮತ್ತು ಎಲ್ಲರ ಪ್ರೋತ್ಸಾಹ ಇನ್ನಷ್ಟು ಸಾಧನೆಗೆ ಪ್ರೇರೇಪಿಸುತ್ತದೆ.
ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ಮಾಡಲು ಒಂದು ಕಾರಣ ಪ್ರೋತ್ಸಾಹವಾಗಿದ್ದರೆ, ಮತ್ತೊಂದು ಕಾರಣ ಪರಿಶ್ರಮ. ನೃತ್ಯ, ನಾಟಕ, ಸಂಗೀತ, ಕರಾಟೆ ಸೇರಿದಂತೆ ಯಾವುದೇ ಕ್ಷೇತ್ರವಿರಲಿ ನಾನು ಒಮ್ಮೆ ಹೆಜ್ಜೆ ಇಟ್ಟ ಮೇಲೆ ಅದನ್ನು ಪುನಃ ಹಿಂದಕ್ಕೆ ಇಡುವುದಿಲ್ಲ ಎಂದು ಧೃಡ ಸಂಕಲ್ಪ ಮಾಡುತ್ತೇನೆ ಮತ್ತು ಅದಕ್ಕೆ ಸಂಪೂರ್ಣ ಗಮನ ನೀಡಿ ಎಲ್ಲೂ ಲೋಪವಾಗದಂತೆ ನೋಡಿಕೊಳ್ಳುತ್ತೇನೆ. ಹಾಗಾಗಿ ಇದು ಎಲ್ಲಾ ಕ್ಷೇತ್ರದಲ್ಲೂ ಸಾಧನೆ ಮಾಡಲು ಕಾರಣವಾಗಿರಬಹುದು ಎಂಬುವುದು ನನ್ನ ಅನಿಸಿಕೆ.

ಸಾಕ್ಷಾ ಟಿವಿ : ಲಾಕ್ ಡೌನ್ ಸಮಯದಲ್ಲಿ ಏನು ಮಾಡಿದ್ರಿ

ಆಶ್ರಯ ಪಿ : ಲಾಕ್ ಡೌನ್ ಸಂದರ್ಭದಲ್ಲಿ ನಾನು ಸ್ವ ಕಲಿಕೆಯಿಂದ keyboard ನುಡಿಸಲು ಕಲಿತೆ (self taught). ಜೊತೆಗೆ ಭರತ ನಾಟ್ಯ ಸೀನಿಯರ್ ಗ್ರೇಡ್ ಪರೀಕ್ಷೆಗೆ ತಯಾರಿ ನಡೆಸಿದೆ. ಮೊನ್ನೆ ತಾನೆ ಅದರ ಫಲಿತಾಂಶ ಬಂದಿದ್ದು, 91% ಗಳಿಸಿದ್ದೇನೆ.
Aashraya p
ಸಾಕ್ಷಾ ಟಿವಿ : ಈ ವರ್ಷ sslc ಓದುತ್ತಾ ಇದ್ದೀರಿ. ಇದು ಶೈಕ್ಷಣಿಕವಾಗಿ ಪ್ರಮುಖ ಘಟ್ಟ . ಹೆಚ್ಚಾಗಿ ಎಲ್ಲರೂ ಈ ವರ್ಷ ಬೇರೆ ಯಾವ activities ತೊಡಗಿಸಿಕೊಳ್ಳದೆ sslc ಪರೀಕ್ಷೆ ಗೆ ಅದರ ತಯಾರಿ ಬಗ್ಗೆ ಮಾತ್ರ ಯೋಚಿಸುತ್ತಾರೆ.. ನಿಮಗೆ ಇತರ ಕ್ಷೇತ್ರಗಳಲ್ಲಿ ಗಮನ ಹರಿಸಿರುವುದರಿಂದ ಓದಿನ ಕಡೆ ಗಮನ ಹರಿಸಲಿಕ್ಕೆ ಕಷ್ಟವಾಗಿದೆ ಎಂದು ಅನಿಸಿದೆಯಾ?

ಆಶ್ರಯ ಪಿ : ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಳ್ಳುವುದರಿಂದ ನನಗೆ ಓದಿಗೆ ಎಂದೂ ಅಡಚಣೆಯಾಗಿಲ್ಲ. ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಬುದ್ಧಿ ಶಕ್ತಿ, ನೆನಪಿನ ಶಕ್ತಿ, ಏಕಾಗ್ರತೆ ವೃದ್ಧಿಯಾಗುತ್ತದೆ. ಜೊತೆಗೆ ಟಿವಿ, ಮೊಬೈಲ್, ಗೇಮ್ಸ್ ಇತ್ಯಾದಿ ಯಾವುದೇ ಚಟಗಳು ಅಂಟುವುದಿಲ್ಲ. ಸಮಯದ ಸದುಪಯೋಗವೂ ಆಗುತ್ತದೆ.
ನಾನು ಐದು ವರ್ಷದವಳಿದ್ದಾಗ ನಾಟಕ, ಭರತನಾಟ್ಯ solo performanceಗಳನ್ನು ನೀಡುತ್ತಾ ಬಂದಿದ್ದೇನೆ. ಹಾಗಾಗಿ stage fear ಎಂಬುದು ಇಲ್ಲ. ಚಿಕ್ಕ ವಯಸ್ಸಿನಿಂದಲೇ ಬೇರೆ ಬೇರೆ ಸ್ಪರ್ಧೆಗಳಿಗೆ ಹೋಗುತ್ತಿದ್ದು, ಹಲವಾರು ತಿಂಗಳು ತರಗತಿಗಳು ತಪ್ಪುತ್ತಿದ್ದವು. ಆದ್ದರಿಂದ ನಾನು self study ಮಾಡುವುದನ್ನು ಅಭ್ಯಾಸ ಮಾಡಿಕೊಂಡಿದ್ದು, ಇದರಿಂದಾಗಿ ನನ್ನ ವಿದ್ಯಾಭ್ಯಾಸಕ್ಕೆ ಏನೂ ತೊಂದರೆ ಆಗಿಲ್ಲ.
ವಿವಿಧ ಸ್ಥಳಗಳ ಭೇಟಿ, ಹಲವಾರು ಗಣ್ಯರ, ಜನಸಾಮಾನ್ಯರ ಪರಿಚಯ ನನಗೆ ಹಲವಾರು ವಿಷಯಗಳನ್ನು ಕಲಿಯಲು ನೆರವಾಗಿದೆ.

ಸಾಕ್ಷಾ ಟಿವಿ : ಇತರ ಕ್ಷೇತ್ರದಲ್ಲೂ ‌ಸಾಧನೆ ಮಾಡುತ್ತಾ ಓದಿನಲ್ಲೂ ಕೂಡ ಮುಂದಿದ್ದು ಎಲ್ಲರಿಗೂ ತಾವು‌‌ ಪ್ರೇರಣೆಯಾಗಿದ್ದೀರಿ.‌. ಉಳಿದ ಮಕ್ಕಳಿಗೆ ಏನು ಹೇಳಲು ಬಯಸುತ್ತೀರಿ..

ಆಶ್ರಯ ಪಿ : ಎಲ್ಲರಲ್ಲೂ ಪ್ರತಿಭೆ ಅಡಗಿದೆ. ಆದರೆ ಅವರೆಲ್ಲರಿಗೂ ಸೂಕ್ತ ತರಬೇತಿ, ಅವಕಾಶಗಳ ಕೊರತೆ ಇರುತ್ತದೆ. ಕೆಲವರು ಕಷ್ಟ ಅಥವಾ ಏನಾದರೂ ಅಡಚಣೆ ಎದುರಾದರೆ ಕಾರ್ಯಪೂರ್ತಿಗೊಳಿಸದೆ ಅರ್ಧಕ್ಕೆ ಕೈಬಿಡುತ್ತಾರೆ. ಹೀಗಾಗಬಾರದು. ಎಲ್ಲರಿಗೂ ಅವಕಾಶ ಮತ್ತು ಸೂಕ್ತ ತರಬೇತಿ ಸಿಗಬೇಕು.

ಸಾಕ್ಷಾ ಟಿವಿ : ನಿಮ್ಮ ಸಾಧನೆ ಎಲ್ಲರಿಗೂ ಮಾದರಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಸಾಧನೆಯ ಗರಿ ನಿಮ್ಮ ಮುಡಿಲಿಗೇರಲಿ ಎಂದು ಸಾಕ್ಷಾಟಿವಿ ಬಳಗ ಹಾರೈಸುತ್ತದೆ. ಧನ್ಯವಾದಗಳು

Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel

ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

https://twitter.com/SaakshaTv/status/1353722107134308353?s=19

https://twitter.com/SaakshaTv/status/1353725761086099456?s=19

Tags: Aashraya pಬಾಲ ಪ್ರತಿಭೆ ಆಶ್ರಯ ಪಿಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ
ShareTweetSendShare
Join us on:

Related Posts

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

ಸರ್ಕಾರಿ ನೌಕರಿಯ ಕನಸು ಕಾಣುತ್ತಿರುವವರಿಗೆ ಗುಡ್ ನ್ಯೂಸ್ ಕಂದಾಯ ಇಲಾಖೆಯಲ್ಲಿ ನೇಮಕಾತಿಗೆ ಅರ್ಜಿ ಆಹ್ವಾನ

by Shwetha
March 29, 2026
0

ರಾಜ್ಯ ಸರ್ಕಾರಿ ಉದ್ಯೋಗವನ್ನು ಪಡೆಯಬೇಕು ಹಾಗೂ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂಬ ಕನಸು ಹೊತ್ತಿರುವ ನಾಡಿನ ಅಸಂಖ್ಯಾತ ಉದ್ಯೋಗಾಕಾಂಕ್ಷಿಗಳಿಗೆ ಹಾಗೂ ಅನುಭವಿ ವೃತ್ತಿಪರರಿಗೆ ಕರ್ನಾಟಕ ರಾಜ್ಯ ಕಂದಾಯ...

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

ಮೋದಿ ತಮ್ಮ ಫಾದರ್ ಲ್ಯಾಂಡ್ ಇಸ್ರೇಲ್ ಗೆ ಹೋಗಿ ಬಂದ ಮರುದಿನವೇ ಯುದ್ಧ ಶುರುವಾಯ್ತು: ಪ್ರಧಾನಿ ವಿದೇಶಾಂಗ ನೀತಿಯ ವಿರುದ್ಧ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯ!

by Shwetha
March 29, 2026
0

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿ ಹಾಗೂ ಇಸ್ರೇಲ್ ಪ್ರವಾಸದ ಕುರಿತು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್...

ಪರೀಕ್ಷೆ ನಡೆಯುತ್ತಿರುವಾಗಲೇ ಎಸ್ಎಸ್ಎಲ್ಸಿ ಅಂಕ 525ಕ್ಕೆ ಇಳಿಕೆ: ಮಕ್ಕಳ ಭವಿಷ್ಯದ ಜೊತೆ ಸರ್ಕಾರದ ಕ್ರೂರ ಚೆಲ್ಲಾಟ –  ಸುರೇಶ್ ಕುಮಾರ್

ಪರೀಕ್ಷೆ ನಡೆಯುತ್ತಿರುವಾಗಲೇ ಎಸ್ಎಸ್ಎಲ್ಸಿ ಅಂಕ 525ಕ್ಕೆ ಇಳಿಕೆ: ಮಕ್ಕಳ ಭವಿಷ್ಯದ ಜೊತೆ ಸರ್ಕಾರದ ಕ್ರೂರ ಚೆಲ್ಲಾಟ – ಸುರೇಶ್ ಕುಮಾರ್

by Shwetha
March 29, 2026
0

ಬೆಂಗಳೂರು: ರಾಜ್ಯದಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳು ಅತ್ಯಂತ ಆತಂಕ ಹಾಗೂ ಶ್ರದ್ಧೆಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳನ್ನು ಬರೆಯುತ್ತಿರುವಾಗಲೇ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆ ತೆಗೆದುಕೊಂಡಿರುವ ತರಾತುರಿಯ ದಿಢೀರ್...

ಪರಮಾತ್ಮ ಬಂದ್ರೂ ಹಿಂದೆ ಸರಿಯಲ್ಲ ಎಂದಿದ್ದ ಸಾದಿಕ್ ಪೈಲ್ವಾನ್ ಬಂಡಾಯ ಕೊನೆಗೂ ಸುಖಾಂತ್ಯ  : ಚುನಾವಣಾ ಆಯೋಗ ಮೈಕ್‌ ಚಿಹ್ನೆ ಕೊಟ್ರು ಕಾಂಗ್ರೆಸ್ ಅಭ್ಯರ್ಥಿಗೆ ಪೈಲ್ವಾನ್ ಬೆಂಬಲ‌ ಶುರು!

ಪರಮಾತ್ಮ ಬಂದ್ರೂ ಹಿಂದೆ ಸರಿಯಲ್ಲ ಎಂದಿದ್ದ ಸಾದಿಕ್ ಪೈಲ್ವಾನ್ ಬಂಡಾಯ ಕೊನೆಗೂ ಸುಖಾಂತ್ಯ : ಚುನಾವಣಾ ಆಯೋಗ ಮೈಕ್‌ ಚಿಹ್ನೆ ಕೊಟ್ರು ಕಾಂಗ್ರೆಸ್ ಅಭ್ಯರ್ಥಿಗೆ ಪೈಲ್ವಾನ್ ಬೆಂಬಲ‌ ಶುರು!

by Shwetha
March 29, 2026
0

ಕಣದಿಂದ ಹಿಂದೆ ಸರಿಯುವಂತೆ ಹೇಳಲು ಸಾಕ್ಷಾತ್ ಪರಮಾತ್ಮನೇ ಧರೆಗಿಳಿದು ಬಂದರೂ ನಾನು ಸ್ಪರ್ಧೆಯಿಂದ ಹಿಂದೆ ಸರಿಯುವ ಮಾತೇ ಇಲ್ಲ ಎಂದು ಗುಡುಗಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದ ಬಂಡಾಯ...

ದಮ್ ಇದ್ರೆ ಬನ್ನಿ ಅಂದ್ರಿ, ಈಗ ಬಂದು ನಿಂತಿದ್ದೀನಿ ಎಂದ ಪ್ರದೀಪ್ ಈಶ್ವರ್‌ : ಹುಚ್ಚ ಎಂದು ಕೂಗಿ ಪ್ರದೀಪ್ ಈಶ್ವರ್ ಗೆ ಪೊರಕೆ ಚಪ್ಪಲಿ ತೋರಿಸಿದ ಬಿಜೆಪಿಗರು!

ದಮ್ ಇದ್ರೆ ಬನ್ನಿ ಅಂದ್ರಿ, ಈಗ ಬಂದು ನಿಂತಿದ್ದೀನಿ ಎಂದ ಪ್ರದೀಪ್ ಈಶ್ವರ್‌ : ಹುಚ್ಚ ಎಂದು ಕೂಗಿ ಪ್ರದೀಪ್ ಈಶ್ವರ್ ಗೆ ಪೊರಕೆ ಚಪ್ಪಲಿ ತೋರಿಸಿದ ಬಿಜೆಪಿಗರು!

by Shwetha
March 29, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದೀಗ ನೇರಾನೇರ ಸವಾಲುಗಳ ಅಖಾಡವಾಗಿ ಮಾರ್ಪಟ್ಟಿದೆ. ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram