ಹುಬ್ಬಳ್ಳಿ ಗಲಭೆ | ಮತ್ತೆ ಇಬ್ಬರ ಬಂಧನ
ಹುಬ್ಬಳ್ಳಿ: ಏಪ್ರಿಲ್ 16 ರಂದು ಹಳೆ ಹುಬ್ಬಳ್ಳಿಯಲ್ಲಿ ನಡೆದ ಗಲಭೆಗೆ ಸಂಬಂಧಿಸಿದಂತೆ ಮತ್ತೆ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಾಸೀಂ ಪಠಾಣ್ ಬಂಧನವಾಗುತ್ತಿದಂತೆ ಈಗ ಮತ್ತೆ ಇಬ್ಬರ ಬಂಧನವಾಗಿದ್ದು, ಈ ಗಲಭೆ ಹಿಂದೆ AIMIM ಪಕ್ಷದ ಕೈವಾಡವಿದೆ ಎನ್ನುವ ಶಂಕೆ ವ್ಯಕ್ತವಾಗಿದೆ. ವರ್ಷದ ಹಿಂದಷ್ಟೇ AIMIM ಪಕ್ಷ ಹುಬ್ಬಳ್ಳಿಯಲ್ಲಿ ನೆಲೆಯೂರಿದ್ದು, ಕಳೆದ ಪಾಲಿಕೆ ಚುನಾವಣೆಯಲ್ಲಿ AIMIM ಪಕ್ಷದಿಂದ ಮೂವರು ಗೆದ್ದು ಕಾರ್ಪೂರೇಟರ್ ಆಗಿದ್ದಾರೆ.
ವಸೀಂ ಪಠಾಣ್ ಮಾಹಿತಿ ಮೇರೆಗೆ AIMIM ಪಕ್ಷದ ಜಿಲ್ಲಧ್ಯಕ್ಷ, ಹುಬ್ಬಳ್ಳಿ ಘಟಕದ ಅಧ್ಯಕ್ಷ ಬಂಧನಕ್ಕೊಳಗಾಗಿದ್ದಾರೆ ಹೀಗಾಗಿ ಗಲಭೆಗೆ AIMIM ಪ್ರಚೋದನೆ ಬಗ್ಗೆ ಅನುಮಾನ ಮೂಡಿದೆ. ಮೌಲ್ವಿ ವಸೀಂ ಹಿಂದೆ ಇದೇ ನಾಯಕರ ಕೈವಾಡವಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳಿಗೆ ಇಂದು ಕೂಡ ಗ್ರಿಲ್ ಮುಂದುವರಿಯಲಿದೆ. ಪ್ರಕರಣ ಸಂಬಂಧ ಪೊಲೀಸರು ತನಿಕೆ ಚುರುಕುಗೊಳಿಸಿದ್ದಾರೆ.