ಒಂದು ಊರಿನಲ್ಲಿ ಒಬ್ಬ ಗುರುಗಳು ಇದ್ದರು. ಹೆಸರು ಯಾದವಾರ್ಯರು. ಅವರು ತಮ್ಮ ಮನೆಯಲ್ಲಿ ಸಂಸ್ಕೃತ ಪಾಠಶಾಲೆ ನಡೆಸುತ್ತಿದ್ದರು. ಪಾಠಶಾಲೆಯಲ್ಲಿ ಸುಮಾರು ಇಪ್ಪತೈದು ಶಿಷ್ಯರಿದ್ದರು. ಗುರುಗಳಿಗೆ ಮಕ್ಕಳಿರಲಿಲ್ಲ. ಅವರ ಶಿಷ್ಯರನ್ನೆ ಮಕ್ಕಳೆಂದುಕೊಂಡು, ಅವರನ್ನು ತಮ್ಮ ಮನೆಯಲ್ಲಿಯೇ ನೋಡಿಕೊಳ್ಳುತ್ತಿದ್ದರು. ಗುರುಗಳು ತುಂಬಾ ಬಡವರು. ಅದರೆ ಎಂದೂ ತಲೆಕೆಡಿಸಿಕೊಂಡಿರಲಿಲ್ಲ. ಗುರಕುಲದಲ್ಲಿದ್ದ ಮಕ್ಕಳಿಗೆ ಕೊರತೆ ಮಾಡಿರಲಿಲ್ಲ. ಬಡತನವಿದ್ದರೂ ಹೇಗೋ ಕಡಿಮೆಯಿಲ್ಲದಂತೆ ನಡೆಯುತ್ತಿತ್ತು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಒಂದು ಸಾರಿ ಗುರುಗಳಿಗೆ ಕಷ್ಟದ ಸಮಯ ಬಂದಿತು. ಮೊದಲೇ ಬಡತನ ಮನೆಯ ಪರಿಸ್ಥಿತಿ ಹದಗೆಟ್ಟಿತು. ಊಟವಿಲ್ಲದೆ ಒಂದು ದಿನವಿಡೀ ಕಳೆದರು. ಒಂದು ತರಹ ಪರೀಕ್ಷೆಯ ಕಾಲ ಬಂದಿತ್ತು. ಗುರುಗಳು ಬಹಳ ನೋವಿನಿಂದ ದೇವರ ಮುಂದೆ ಕುಳಿತು ಭಗವದ್ಗೀತೆಯ ,”ಅನನ್ಯಾಶ್ಚಿಂತಯಂತೋ ಮಾಮ್ ಯೇ ಜನಾಹ ಪರ್ಯು ಪಾಸತೇ” ಈ ಶ್ಲೋಕವನ್ನು ಭಾರವಾದ ಹೃದಯದಿಂದ ಓದುತ್ತಿದ್ದರು. ಅದೇ ಸಮಯಕ್ಕೆ ಅವರ ಪತ್ನಿ ಬಂದು,” ನೋಡಿ ಮನೆಯಲ್ಲಿ ಒಂದು ಕಾಳು ಅಕ್ಕಿ ಇಲ್ಲ. ದವಸಧಾನ್ಯಗಳೆಲ್ಲ ಖಾಲಿಯಾಗಿದೆ. ನಿನ್ನೆಯಿಂದ ಮಕ್ಕಳು ಉಪವಾಸವಿದ್ದಾರೆ. ನಮಗಂತೂ ಉಪವಾಸ, ವನವಾಸವಿದ್ದು ರೂಢಿ ಇದೆ. ಆದರೆ ಬೆಳೆಯುವ ಮಕ್ಕಳು. ಗಂಜಿ ಕೊಡಲು ಇಲ್ಲವಾಗಿದೆ. ಹೊರಗೆ ಹೋಗಿ ಸ್ವಲ್ಪ ಸಾಮಾನು ತೆಗೆದುಕೊಂಡು ಬನ್ನಿ. ಹೇಗೂ ಹೊರಗಡೆ ನಿಮಗೆ ತುಂಬಾ ಗೌರವವಿದೆ. ಯಾರಾದರೂ ಕೊಟ್ಟೆ ಕೊಡುತ್ತಾರೆ ಕೇಳಿ ಎಂದರು.
ಗುರುಗಳಿಗೆ ತುಂಬಾ ಬೇಜಾರಾಗಿ ದುಃಖ ಒತ್ತರಿಸಿ ಬಂತು, ಹೇ ಭಗವಂತ ನಾನು ನಿನ್ನನ್ನೇ ನಂಬಿ ಬದುಕುತ್ತಾ ಇರುವನು. ಇಲ್ಲಿ ತನಕ ಯಾರ ಮುಂದು ಕೈ ಚಾಚಿಲ್ಲ , ಕೈಚಾಚಿದರೆ ನನ್ನ ನಾಲಿಗೆ ಬಿದ್ದಂಗೆ ಆಗುತ್ತೆ. ಈಗ ನಾನು ಕೈಚಾಚಿ ಕೇಳುವಂಥ ಪರಿಸ್ಥಿತಿಯನ್ನು ತಂದುಬಿಟ್ಟೆಯಲ್ಲ ಎಂದು, ಓದುತ್ತಿದ್ದ ಭಗವದ್ಗೀತೆಯ ಶ್ಲೋಕದ ಮೇಲೆ ಕೆಂಪು ಇಂಕಿನ ಲೇಖನಿಯಿಂದ ಗೀಚಿದಂತೆ ಕಾಟು ಹೊಡೆದು, ಎದ್ದು ಪೇಟೆ ಕಡೆಗೆ ಹೊರಟರು. ಒಂದು ಅಂಗಡಿಗೆ ಹೋದಾಗ,
ಆತ ಗೌರವದಿಂದ ಕೂರಿಸಿ, ಗುರುಗಳೇ ಏನು ಬಂದಿದ್ದು, ಏನಾದರೂ ಬೇಕಿದ್ದರೆ ಹೇಳಿ, ಕೊಡುವೆ ಎಂದನು. ಆದರೆ ಗುರುಗಳಿಗೆ ಕೇಳಲು ಬಾಯಿಬರಲಿಲ್ಲ, ಏನೂ ಬೇಡಪ್ಪ, ಹಾಗೆ ಸುಮ್ಮನೆ ವಿಚಾರಿಸಿಕೊಂಡು ಹೋಗೋಣವೆಂದು ಬಂದೆ, ಮನೆಯಲ್ಲಿ ಎಲ್ಲಾ ಚೆನ್ನಾಗಿದ್ದಾರೇನಪ್ಪ ಎಂದು ಅಂಗಡಿಯಲ್ಲಿ ಸ್ವಲ್ಪ ಹೊತ್ತು ಕುಳಿತಿದ್ದು ಹಾಗೆ, ಹೊರಟರು. ಮನೆಗೂ ಹೋಗಲಿಲ್ಲ, ಹೆಂಡತಿಗೆ ಏನು ಹೇಳುವುದು? ಹುಡುಗರ ಊಟದ ಗತಿಯೇನು? ದಾರಿ ಕಾಣದೆ ದೂರದ ತನಕ ಹೋಗಿ ಹಳೆಯ ದೇವಸ್ಥಾನದ ಕಟ್ಟೆಯ ಮೇಲೆ ಹೋಗಿ ಕುಳಿತರು. ಮಧ್ಯಾಹ್ನ 3:00 ಗಂಟೆಯವರೆಗೂ ಹಾಗೆ ಕುಳಿತು, ಇಷ್ಟು ಹೊತ್ತಿಗೆ ಏನಾದರೂ ಮಾಡಿರಬಹುದು ಎಂದುಕೊಂಡು ಮನೆಗೆ ಹೊರಟರು. ಮನೆ ಹತ್ತಿರ ಬರುತ್ತಿದ್ದಂತೆ, ಘಮ ಘಮ ಅಡುಗೆಯ ವಾಸನೆ ಬರುತ್ತಿತ್ತು. ನಮ್ಮ ಮನೆಯಿಂದ ಅಡುಗೆಯ ವಾಸನೆ, ಅವರಿಗೆ ಅನುಮಾನ ಬಂತು. ಮನೆಯ ಹೊಸಿಲು ದಾಟಬೇಕು,ಅದೇ ವೇಳೆಗೆ ಅವರ ಹೆಂಡತಿ ಹೊರಗಡೆ ಬಂದು, ” ಏನ್ರಿ ಇಷ್ಟು ಹೊತ್ತು ಎಲ್ಲಿ ಹೋಗಿದ್ದೀರಿ, ಮಧ್ಯಾಹ್ನ ಮೂರು ಗಂಟೆ ಆಯ್ತು. ಮನೆಗೆ ಊಟಕ್ಕೂ ಬರದೆ ಇಷ್ಟೊತ್ತು ಮಾಡುವುದಾ? ಎಂದು ಒಂದೇ ಸಮ ಹೇಳುತ್ತಿದ್ದರೆ, ಗುರುಗಳು ಮಕ್ಕಳ ಊಟವಾಯಿತಾ? ಎಂದರು.
ಅವರ ಪತ್ನಿ, ಆಗಲೇ ಮಕ್ಕಳಿಗೆ ಊಟ ಮುಗಿಯಿತು. ನೀವು ಆ ಹುಡುಗನ ಕೈಯಲ್ಲಿ ಸಾಮಾನನ್ನು ಕಳುಹಿಸಿದ್ದೀರಲ್ಲ ತಕ್ಷಣ ಅಡಿಗೆ ಮಾಡಿದೆ ಎಂದರು, ಹಾಗೆ, ಅಲ್ಲ ಏನೋ ಸ್ವಲ್ಪ ಸಾಮಾನುಗಳನ್ನು ಕಳಿಸಿ ಅಂದರೆ ಆರು ತಿಂಗಳಿಗೆ ಆಗುವಷ್ಟು ಕಳುಹಿಸಿದ್ದೀರಲ್ಲ. ಎಂದಾಗ, ಯಾರು? ಯಾವ ಹುಡುಗ,? ಯಾವ ಸಾಮಾನು, ಎಂದು ಕೇಳುತ್ತಿದ್ದರೆ, ಅವ್ಯಾವುದನ್ನೂ ಕಿವಿ ಮೇಲೆ ಹಾಕಿಕೊಳ್ಳದೇ, ನಿಮ್ಮನ್ನು ಎಷ್ಟು ಮೃದು ಸ್ವಭಾವದವರು, ಯಾರನ್ನು ನೋಯಿಸುವುದಿಲ್ಲ ಎಂದುಕೊಂಡಿದ್ದೆ ಆದರೆ ಪಾಪ, ಆ ಸಣ್ಣ ಹುಡುಗನಿಗೆ ಎಷ್ಟು ಕಠಿಣವಾದ ಶಿಕ್ಷೆ ಕೊಟ್ಟಿದ್ದೀರಿ? ಹುಡುಗ ಅಂಗಡಿಯಿಂದ ಕಳಿಸಿದ ಸಾಮಾನುಗಳ ಚೀಲಗಳನ್ನು ತನ್ನ ಎರಡೂ ಭುಜದ ಮೇಲೆ ಇಟ್ಟುಕೊಂಡು ಹೊರಲಾರದೆ ಹೊತ್ತು ತರುತ್ತಿದ್ದ. ಒಂದೂ ಮಾತನಾಡುತ್ತಿರಲಿಲ್ಲ. ಕಡೆಗೆ
ನಾನು ಕೇಳಿದೆ,’ ಯಾಕೊ ಹುಡುಗ ಒಂದೂ ಮಾತನಾಡುತ್ತಿಲ್ಲ ಎಂದಿದ್ದಕ್ಕೆ ಹುಡುಗ ಬಾಯಿ ತೆಗೆದ, ಹುಡುಗನ ಬಾಯಿಂದ ರಕ್ತ ಬರುತ್ತಿತ್ತು, ಅವನ ನಾಲಗೆ ಮೇಲೆ ಗೀರಿದ ಗಾಯವಾಗಿತ್ತು, ಏನಾಯಿತು ಎಂದು ಕೇಳಿದ್ದಕ್ಕೆ, ಅಮ್ಮ, ನಿಮ್ಮ ಯಜಮಾನರಿಗೆ ನನ್ನ ಮೇಲೆ ತುಂಬಾ ಕೋಪ ಬಂದುಬಿಟ್ಟಿದೆ ನಾನು ಯಾವತ್ತೋ, ಸಾಮಾನು ತಂದುಕೊಡುತ್ತೇನೆ ಎಂದಿದ್ದೆ. ಆದರೆ ಮರೆತುಬಿಟ್ಟಿದ್ದೆ ಅದಕ್ಕಾಗಿ ನಿಮ್ಮ ಯಜಮಾನರು ನನ್ನ ನಾಲಿಗೆಗೆ ಗಾಯ
ಮಾಡಿದರು ಅಂದ. ಆ ಸಣ್ಣ ಹುಡುಗನಿಗೆ ನೀವು ಅಷ್ಟೊಂದು ಶಿಕ್ಷೆ ಕೊಡುವುದಾ? ಎಂದು ಕೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ತಕ್ಷಣ ಗುರುಗಳಿಗೆ ಗೊತ್ತಾಯಿತು ಕೂಡಲೇ ದೇವರ ಕೋಣೆಗೆ ಹೋಗಿ ನಮಸ್ಕಾರ ಮಾಡಿದರು. ಏ ಕೃಷ್ಣಾ ಯಾಕೋ ಹೀಗೆ ಮಾಡಿಕೊಂಡೆ?
“ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾ ಪರ್ಯುಪಾಸತೇ!
ತೇಷಾಂ ನಿತ್ಯಾಭೀಯುಕ್ತಾನಾಂ , ಯೋಗಕ್ಷೇಮಂ ವಹಾಮ್ಯಹಮ್”!
ಅಂತ ನೀನು ಹೇಳಿದ್ದು ನಿಜ. ಎಲ್ಲವನ್ನೂ ನೆನಪಿಟ್ಟುಕೊಂಡು ಅದರಂತೆ ಮಾಡಿದಿಯಲ್ಲ .ನಿನ್ನ ಮೇಲೆ ನಂಬಿಕೆ ಇದ್ದರೆ ಸಾಕು. ಎಲ್ಲವನ್ನೂ, ಎಲ್ಲರನ್ನೂ ನೀನೇ ಸಲಹುವೆ.’ಶ್ರೀಹರಿಯ ನಂಬಿ ಕೆಟ್ಟವರಿಲ್ಲ’ ನಮ್ಮ ನಂಬಿಕೆ ಗಟ್ಟಿಯಾಗಿರಬೇಕು. ಮನದ ತುಂಬ ಕೃಷ್ಣನನ್ನೇ ತುಂಬಿಕೊಂಡು , ಕಣ್ತುಂಬಿಕೊಂಡು ಅದೆಷ್ಟು ಹೊತ್ತು ಕುಳಿತಿದ್ದರೊ ಅವರಿಗೆ ಗೊತ್ತಿಲ್ಲ.
ಶ್ಲೋಕದ ಅರ್ಥ: ಅನನ್ಯವಾದ ಮನಸ್ಸಿನಿಂದ ನನ್ನನ್ನು ಯಾರು ಚಿಂತನೆ ಮಾಡುತ್ತಾರೋ ಅಂತಹವರ ಯೋಗಕ್ಷೇಮ ಗಳನ್ನು ನಾನೇ ವಹಿಸಿಕೊಳ್ಳುತ್ತೇನೆ – ಭಗವದ್ಗೀತೆಯ 9ನೇ ದಲ್ಲಿ ಬರುವ ಶ್ಲೋಕ








