ಮೈಸೂರು : ನಾನು ಕಾದಂಬರಿ ಬರೆದವನಲ್ಲ, ರಾಜಕೀಯದ ವಸ್ತು ಸ್ಥಿತಿ ಬರೆದವನು. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ರಾಜಕಾರಣದ ಬಗ್ಗೆ, ಆಡಳಿತದ ಬಗ್ಗೆ, ಜನ ಜೀವನದ ಬಗ್ಗೆ ಬರೆದಿರುವೆ. ಆದ್ದರಿಂದ ನನ್ನನ್ನು ಸಾಹಿತ್ಯ ಕ್ಷೇತ್ರಕ್ಕೆ ಗುರುತಿಸಿ ವಿಧಾನ ಪರಿಷತ್ ಗೆ ಆಯ್ಕೆ ಮಾಡಿದ್ದಾರೆ ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಬೇರೆ ಬೇರೆ ಜನ ಬೇರೆ ರೀತಿ ಮಾತನಾಡಿಕೊಳ್ಳಲಿ. ಆದರೆ ನಾನು ರಾಜಕೀಯ ಸಾಹಿತ್ಯವನ್ನು ಬರೆದಿರುವವನು. ಇದನ್ನು ಬರೆಯುವುದು ಅಪರೂಪ. ನಾನು ಕಾದಂಬರಿ ಬರೆದವನಲ್ಲ, ರಾಜಕೀಯದ ವಸ್ತು ಸ್ಥಿತಿ ಬರೆದವನು. ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ರಾಜಕಾರಣದ ಬಗ್ಗೆ, ಆಡಳಿತದ ಬಗ್ಗೆ, ಜನ ಜೀವನದ ಬಗ್ಗೆ ಬರೆದಿರುವೆ. ಆದ್ದರಿಂದ ನನ್ನನ್ನು ಸಾಹಿತ್ಯ ಕ್ಷೇತ್ರಕ್ಕೆ ಗುರುತಿಸಿ ವಿಧಾನ ಪರಿಷತ್ ಗೆ ಆಯ್ಕೆ ಮಾಡಿದ್ದಾರೆ. ಇದು ನನಗೆ ಸಂತಸ ತಂದಿದೆ ಎಂದು ತಿಳಿಸಿದರು.
ಇದೇ ವೇಳೆ ಮಂತ್ರಿ ಸ್ಥಾನದ ಬಗ್ಗೆ ಮಾತನಾಡಿದ ವಿಶ್ವನಾಥ್, ಮಂತ್ರಿ ಸ್ಥಾನದ ಬಗ್ಗೆ ಕಾನೂನಿನಲ್ಲಿ ಯಾವುದೇ ಅಡೆ ತಡೆ ಇಲ್ಲ. ಸುಪ್ರೀಂ ಕೋರ್ಟ್ ಈ ಬಗ್ಗೆ ಸ್ಪಷ್ಟವಾಗಿ ಚುನಾವಣೆಗೆ ನಿಂತು ಅರ್ಹರಾಗಿ ಬನ್ನಿ ಎಂದು ಹೇಳಿತ್ತು. ಅದರಂತೆ ಚುನಾವಣೆಗೆ ಸ್ಪರ್ಧಿಸಿದ್ದೆ. ಅದರಲ್ಲಿ ಗೆಲುವು-ಸೋಲು ಬೇರೆ. ಆದರೆ ಅನರ್ಹತೆ ಕೊನೆಗೊಂಡು ಅರ್ಹ ಎಂದು ಹೇಳಿದೆ. ಮಂತ್ರಿ ಸ್ಥಾನದ ಬಗ್ಗೆ ನಂತರ ನೋಡೋಣ ಎಂದರು.








