ADVERTISEMENT
Friday, January 30, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Astrology

ಭಕ್ತರ ಹೃದಯದಲ್ಲಿ ನಂಬಿಕೆ ಇದ್ದರೆ, ಅವರ ಜೊತೆಯಲ್ಲಿ ದೇವಿ ಇರುತ್ತಾಳೆ..ಬಾದಾಮಿ ಬನಶಂಕರಿ ದೇವಿ ಮಹತ್ವ ಏನು..?

admin by admin
January 3, 2026
in Astrology, Newsbeat, ಜ್ಯೋತಿಷ್ಯ
If there is faith in the hearts of devotees, the Goddess will be with them..What is the significance of Badami Banashankari Devi..?

If there is faith in the hearts of devotees, the Goddess will be with them..What is the significance of Badami Banashankari Devi..?

Share on FacebookShare on TwitterShare on WhatsappShare on Telegram

ಬಾದಾಮಿ ಬನಶಂಕರಿ ದೇವಿ:-

ಭಾರತದ ಜಾಗೃತ ಶಕ್ತಿಪೀಠಗಳಲ್ಲಿ ಬಾದಾಮಿ ಬನಶಂಕರಿ ಶಕ್ತಿ ಪೀಠವು ಒಂದಾಗಿದೆ. ಇಲ್ಲಿನ ಬನಶಂಕರಿ ನವದುರ್ಗೆಯ 6ನೇ ಅವತಾರ ಆಗಿದ್ದಾಳೆ.
ಈ ದೇವಾಲಯ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ “ಚೋಳಚ” ಗುಡ್ಡದಲ್ಲಿದೆ. ಪಾರ್ವತಿ ರೂಪವಾಗಿರುವ ಬನಶಂಕರಿ ದೇವಾಲಯವು ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಉತ್ತರ ಕರ್ನಾಟಕ ಮಾತ್ರ ಅಲ್ಲದೆ, ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕೇರಳ ರಾಜ್ಯಗಳಿಂದಲೂ ಕೋಟ್ಯಾಂತರ ಭಕ್ತರು ನಡೆದುಕೊಳ್ಳುತ್ತಾರೆ. ಅನೇಕ ಕುಟುಂಬಗಳ ಮನೆದೇವಿ ಯಾಗಿದ್ದಾಳೆ. ಪೂರ್ವದಿಂದಲೂ ರಾಜ ಮಹಾರಾಜರುಗಳಿಂದ ಆರಾಧಿಸಲ್ಪಡುವ ಶಕ್ತಿ ದೇವಿಯಾಗಿದ್ದಾಳೆ. ಇಲ್ಲಿ ದೇವಿಯನ್ನು “ತ್ರಿನೇತ್ರೆ” ಎಂದು ಕರೆಯುತ್ತಾರೆ. ಇನ್ನೊಂದು ವಿಶೇಷ ಎಂದರೆ ಭಕ್ತರು ತಮ್ಮ ಬದುಕಿನಲ್ಲಿ ಬರುವ ಕಷ್ಟಕಾರ್ಪಣ್ಯ ಗಳು ಬರದಿರಲಿ, ಬಂದಿರುವುದು ಪರಿಹಾರವಾಗಲಿ ಎಂಬ ಉದ್ದೇಶದಿಂದ ಬನಶಂಕರಿ ದೇವಿಗೆ ರಾಹು ಕಾಲದಲ್ಲಿ ಪೂಜೆ ಸಲ್ಲಿಸುತ್ತಾರೆ.

Related posts

Reliance Jio empowers schools in Karnataka with future AI training

ಕರ್ನಾಟಕದ ಶಾಲೆಗಳಿಗೆ ರಿಲಯನ್ಸ್ ಜಿಯೋದಿಂದ ಭವಿಷ್ಯದ ಎಐ ತರಬೇತಿ ಸಬಲೀಕರಣ

January 30, 2026
If you do this remedy with turmeric and ghee on Friday, health and financial problems will definitely go away.

ಶುಕ್ರವಾರದಂದು ಅರಿಶಿಣ ಹಾಗೂ ತುಪ್ಪದಿಂದ ಈ ಉಪಾಯವನ್ನು ಮಾಡಿದರೆ ಆರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ ದೂರವಾಗುವುದು ನಿಶ್ಚಿತ..

January 30, 2026

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಬನದ ಸಿರಿ ಬನ ಶಂಕರಿ

ಸ್ಕಂದ ಪುರಾಣದಂತೆ ಬಹಳ ಹಿಂದೆ ಬಾದಾಮಿಯ ಸುತ್ತಮುತ್ತ “ತಿಲಕಾರಣ್ಯ” ಎಂಬ ದಟ್ಟಾರಣ್ಯದಿಂದ ಕೂಡಿದ ಪ್ರದೇಶವಾಗಿತ್ತು. ಇಲ್ಲಿ “ದುರ್ಗಮಾಸುರ” ಎಂಬ ಅಸುರನಿದ್ದು ಈತ ಸ್ಥಳೀಯ ಜನಗಳಿಗೆ, ಋಷಿಮುನಿಗಳಿಗೆ ಉಪಟಳ ಕೊಡುತ್ತಿದ್ದ ನು.ಇವನ ಕಿರುಕುಳ ತಾಳಲಾರದೆ ದೇವತೆಗಳ ದೇವಿಗೆ ಮೊರೆಹೋಗಲು ಯಜ್ಞ ಮಾಡುತ್ತಾರೆ. ಆಗ ಆದಿಶಕ್ತಿ ಪಾರ್ವತಿದೇವಿ, ಲಕ್ಷ್ಮಿ ಹಾಗೂ ಸರಸ್ವತಿ ರೂಪವನ್ನು
ಏಕೀಕರಿಸಿಕೊಂಡು ಯಜ್ಞ ಕುಂಡದಿಂದ ಎದ್ದು ಬರುತ್ತಾಳೆ. ಆದ್ದರಿಂದ ಇವಳನ್ನು ತ್ರಿನೇತ್ರ ಎಂದು ಕರೆಯುತ್ತಾರೆ. ಯಜ್ಞ ಕುಂಡದಿಂದ ಭಯಂಕರ ರೂಪದಲ್ಲಿ ಎದ್ದು ಬಂದ ಪಾರ್ವತಿ ದೇವಿ ದುರ್ಗಮಾಸುರ ಹಾಗೂ ಅನೇಕ ರಾಕ್ಷಸರನ್ನು ಸಂಹಾರ ಮಾಡುತ್ತಾಳೆ ನಂತರ ಅದೇ ರೂಪದಲ್ಲಿ ನೆಲೆಸಿದಳು. ಅವಳ ರೂಪ ಭಯಂಕರ ವಾಗಿದ್ದು ರಾಕ್ಷಸರೇ ನೋಡಲು ಹೆದರುತ್ತಿದ್ದರು. ಚಿಂತಿಸಿದ ದೇವತೆಗಳು ದೇವಿಗೆ ಶಾಂತ ರೂಪ ಧರಿಸುವಂತೆ ಪ್ರಾರ್ಥಿಸಲು ಆದಿಶಕ್ತಿಯ ಆರಾಧಕರಾದ “ತ್ರಿದಂಡ” ಮಹರ್ಷಿಗಳ ಮೂಲಕ ದೇವಿಯನ್ನು ಶಾಂತಗೊಳಿಸಲು ಪ್ರಾರ್ಥಿಸಿದರು. ತ್ರಿದಂಡಿ
ಮಹರ್ಷಿಗಳು ತಪಸ್ಸು ಮಾಡಿ ದೇವಿಯನ್ನು ಒಲಿಸಿಕೊಂಡಾಗ ದೇವಿ ಶಾಂತ ರೂಪದ “ಬನಶಂಕರಿ” ಆದಳು. ನಂತರ ಮಹರ್ಷಿಗಳು ಹಾಗೂ ದೇವತೆಗಳು ಯಜ್ಞ ಕುಂಡ ದಿಂದ ಎದ್ದು ಬಂದ ಸ್ಥಳದಲ್ಲಿಯೇ ದೇವಿಯನ್ನು ಪ್ರತಿಷ್ಠಾಪಿಸಿದರು. ದೇವಿಯು ಜನರ ರಕ್ಷಾ ಕವಚವಾಗಿ ಬನಶಂಕರಿ ರೂಪವನ್ನು ಧರಿಸಿ ನೆಲೆಸಿದ ದೇವಾಲಯವು ಕರ್ನಾಟಕದ ಪ್ರಸಿದ್ಧ ದೇವಾಲಯಗಳ ಸಾಲಿನಲ್ಲಿ ಬನಶಂಕರಿ ದೇವಾಲಯ ಪ್ರಸಿದ್ಧಿಯಾಗಿದೆ. ಇಂದಿಗೂ ರಾಜ್ಯವನ್ನು- ಜನರನ್ನು ರಕ್ಷಣೆ ದೇವಿ ರಕ್ಷಣೆ ಮಾಡುತ್ತಿದ್ದಾಳೆ ಎಂಬ ನಂಬಿಕೆ ಭಕ್ತ ಜನ ಮನದಲ್ಲಿ ಬೇರೂರಿದೆ

ಇಲ್ಲಿನ ದೇವಿಯನ್ನು “ಶಾಕಾಂಬರಿ” ಎಂದು ಕರೆಯುತ್ತಾರೆ. ಕಾರಣ ಪೂರ್ವದಲ್ಲಿ ನೂರು ವರ್ಷಗಳು ಅತಿವೃಷ್ಟಿ ಆಗಿ ಕಷ್ಟವಾಯಿತು. ದೇವತೆಗಳು “ತಿಲಕಾರಣ್ಯ” ದಲ್ಲಿ ನೆಲೆಸಿದ್ದ ದೇವಿ ಬನಶಂಕರಿಯನ್ನು ಪ್ರಾರ್ಥಿಸಿದರು. ತಾಯಿ ದೇವತೆಗಳ ಪ್ರಾರ್ಥನೆಗೆ ಕೃಪೆ ತೋರಿ ಭೂಮಿಯ ನೀರಿನ ದಾಹ ತಣಿಸಿ ಎಲ್ಲರನ್ನೂ ಕಾಪಾಡಿದಳು. ಹಾಗೆ ತನ್ನ ಶರೀರದ ಶಾಖದಿಂದಲೇ ತರಕಾರಿಯನ್ನು ಉತ್ಪತ್ತಿ ಮಾಡಿ ಜನರ ಹಸಿವನ್ನು ನೀಗಿಸುತ್ತಾ ಬಂದಳು. ಅಂದಿನಿಂದ “ಶಾಕಾಂಬರಿ” ಯಾದಳು.

ಬನಶಂಕರಿ ದೇವಿ ಕಪ್ಪು ಶಿಲೆಯಲ್ಲಿ ಸಿಂಹ ವಾಹಿನಿಯಾಗಿ ಕುಳಿತ ಪಾದದ ಕೆಳಗೆ ರಾಕ್ಷಸನನ್ನು ಮೆಟ್ಟಿ ಕುಳಿತಿದ್ದಾಳೆ. ದೇವಿಗೆ ಅಷ್ಟ ಭುಜಗಳಿದ್ದು, ಕೈಗಳಲ್ಲಿ ಗಂಟೆ- ತ್ರಿಶೂಲ- ಖಡ್ಗ,- ಶಂಖ- ಚಕ್ರ- ಡಮರುಗ – ಅಮೃತ ಕಲಶ- ಡಾಲು- ಅಭಯ ಮುದ್ರೆ- ವರಮುದ್ರೆ ಹಿಡಿದಿದ್ದಾಳೆ. ತಿಲಕಾರಣ್ಯದಲ್ಲಿ ನೆಲೆಸಿದ ದೇವಿಗೆ ಬನ ಮತ್ತು ಶಂಕರಿ ಪದದಿಂದ “ಬನಶಂಕರಿ” ಎಂಬ ಹೆಸರು ಬಂದಿದೆ. ಬನ ಅಂದರೆ ಕಾಡು, ಶಂಕರಿ ಅಂದರೆ ಶಿವನ ಪ್ರಿಯೆ ಎಂದಾಗುತ್ತದೆ. ಶಾಕಾಂಬರಿ, ವನದೇವಿ, ಚೌಡಮ್ಮ, ಬನದೇವಿ, ವನದುರ್ಗೆ ಹೀಗೆ ಅನೇಕ ಹೆಸರುಗಳಿಂದ ಕರೆಯುತ್ತಾರೆ.‌ ಏಳನೇ ಶತಮಾನದಲ್ಲಿ ಕಲ್ಯಾಣ ಚಾಲುಕ್ಯರ ರಾಜ “ಜಗದೇಕ ಮಲ್ಲ” ಈ ದೇವಾಲಯ ವನ್ನು ಮೊದಲು ನಿರ್ಮಿಸಿ ದೇವಿಯನ್ನು ಪ್ರತಿಷ್ಠಾಪನೆ ಮಾಡಿ ದೇವಿಯನ್ನು ಶಕ್ತಿ ರೂಪಿಣಿಯಾಗಿ ಆರಾಧಿಸುತ್ತಿದ್ದನು. ಈ ದೇವಿ ಚಾಲುಕ್ಯರ ಮನೆ ಮನದ ಆರಾಧ್ಯ ದೇವಿಯಾಗಿದ್ದಾಳೆ.‌ “ರಾಹು ದೋಷ” ನಿವಾರಣೆಗಾಗಿ ರಾಹುಕಾಲದಲ್ಲಿ ದೇವರಿಗೆ ನಿಂಬೆಹಣ್ಣಿನ ದೀಪಗಳನ್ನು ಹಚ್ಚುತ್ತಾರೆ. ಮುಂದೆ ಮಹಾರಾಷ್ಟ್ರದ ರಾಜರುಗಳು ದೇವಾಲಯವನ್ನು ನವೀಕರಿಸುತ್ತಾ ಬಂದರು. ದೇವಾಲಯ ದ್ರಾವಿಡ ವಾಸ್ತು ಶಿಲ್ಪ ಮಾದರಿಯಲ್ಲಿದೆ. ಪುಷ್ಯ ಮಾಸದ ಅಂದರೆ ಜನವರಿ- ಫೆಬ್ರವರಿ ತಿಂಗಳಲ್ಲಿ ರಥೋತ್ಸವ -ಜಾತ್ರೆ ನಡೆಯುತ್ತದೆ.‌

ದೇವಾಲಯದ ಎದುರಿಗೆ “ಹರಿದ್ರಾ” ತೀರ್ಥ ಎಂಬ ವಿಶಾಲವಾದ ಪುಷ್ಕರಣಿ ಇದ್ದು, ನೋಡುಗರಿಗೆ ಆಕರ್ಷಕ ಬಿಂದುವಾಗಿದೆ. ಇಲ್ಲಿ ಸ್ನಾನ ಮಾಡಿದರೆ ಕಾಶಿ ಗಂಗಾ ಸ್ನಾನದ ಪವಿತ್ರಕ್ಕೆ ಸಮನಾಗಿದೆ. ಮತ್ತೊಂದು ಆಕರ್ಷಣೆ ಎಂದರೆ ಇಲ್ಲಿನ ರೈತಾಪಿ ಹೆಣ್ಣು ಮಕ್ಕಳು ಬುಟ್ಟಿಯಲ್ಲಿ ಜೋಳದ ರೊಟ್ಟಿ, ಶೇಂಗಾ ಚಟ್ನಿ ಪುಡಿ- ಎಣ್ಣೆಗಾಯಿ ಪಲ್ಯ,ಮಣ್ಣಿನ ಕುಡಿಕೆಗಳಲ್ಲಿ ತಣ್ಣನೆ ಮೊಸರು ತಂದು ಮಾರುತ್ತಾರೆ. ಬನಶಂಕರಿ
ಕ್ಷೇತ್ರಕ್ಕೆ ಬಂದವರು, ಜೋಳದ ರೊಟ್ಟಿ- ಪಲ್ಯ -ಚಟ್ನಿ ಪುಡಿ ಸವಿಯುತ್ತಾರೆ. ಹಾಗೆ ಬನಶಂಕರಿ ದೇವಿ ಜಾತ್ರೆ ಪುಷ್ಯ ಮಾಸದ ಅಷ್ಟಮಿ ದಿನ ಆರಂಭವಾಗಿ ಜಾತ್ರೆ ಸುಮಾರು ಒಂದು ತಿಂಗಳು ನಡೆದು ಬನದ ಹುಣ್ಣಿಮೆಯಂದು ಸಂಪನ್ನವಾಗುತ್ತದೆ. ಈ ಜಾತ್ರೆಯನ್ನು ಪುರಾಣ ಕಾಲದಿಂದಲೂ ನಡೆಸುತ್ತಾ ಬಂದಿದ್ದಾರೆ. ದೊಡ್ಡ ಜಾತ್ರೆ ಮಾಡುತ್ತಾರೆ ಇದು ಧಾರ್ಮಿಕ ಹಾಗೂ ಸಾಂಸ್ಕೃತಿಕ ಉತ್ಸವವಾಗಿದ್ದು ವೈಭವ ದಿಂದ ಜರುಗುತ್ತದೆ. ಬನಶಂಕರಿ ದೇವಿಗೆ ಶಾಂತ ರೂಪ ತಾಳುವಂತೆ ಪ್ರಾರ್ಥಿಸಿದ “ತ್ರಿದಂಡ” ಮುನಿಗಳ ಕಾಲದಿಂದಲೂ ಜಾತ್ರೆ ನಡೆಯುತ್ತಿದೆ. ಈ ಜಾತ್ರೆಯನ್ನು ನೋಡಲು ಇಂದ್ರಾದಿ ದೇವತೆಗಳು ಸಹ ಬರುತ್ತಾರೆ ಎಂದು ಪುರಾಣದಲ್ಲಿ ಉಲ್ಲೇಖಿಸಲಾಗಿದೆ. ಜಾತ್ರೆ ಸಮಯದಲ್ಲಿ ಹೊರ ರಾಜ್ಯಗಳಿಂದಲೂ ಭಕ್ತರು ಬರುತ್ತಾರೆ. ಜಾತ್ರೆ ಸಮಯದಲ್ಲಿ ನಗರವು ತಳಿರು ತೋರಣಗಳಿಂದ ಸಿಂಗಾರ ಗೊಂಡಿರುತ್ತದೆ. ಈ ಸಮಯದಲ್ಲಿ ಇಲ್ಲಿ ಸಿಗದೇ ಇರುವ ವಸ್ತುಗಳೇ ಇಲ್ಲ ಅಡುಗೆ ಸಾಮಾಗ್ರಿಗಳಿಂದ ಹಿಡಿದು ಮಕ್ಕಳ ಆಟಿಕೆಗಳು, ಊಟ ತಿಂಡಿ ದೊಡ್ಡವರಿಗೆ ಬೇಕಾದ ಪಾತ್ರೆಗಳಿಂದ ಹಿಡಿದು ಎಲ್ಲೆಲ್ಲಿಯೂ ಸಿಗದ ಅಪರೂಪದ ವಸ್ತುಗಳೆಲ್ಲ ಸಿಗುತ್ತದೆ. ಉತ್ತರ ಕರ್ನಾಟಕದಲ್ಲಿ ಅತ್ಯಂತ ದೊಡ್ಡ ಜಾತ್ರೆ ಎಂದರೆ ಬಾದಾಮಿ ಬನಶಂಕರಿ ಜಾತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬನದ ಹುಣ್ಣಿಮೆಯಂದು ವಿಜೃಂಭಣೆಯಿಂದ ದೇವಿಯ ರಥೋತ್ಸವ ನಡೆಸುತ್ತಾರೆ.
ಅಂದು “ಪಲ್ಯದ” ಹಬ್ಬ ಎಂದು ಸಂಭ್ರಮದ ಆಚರಣೆ ಮಾಡುತ್ತಾರೆ. 108 ಬಗೆಯ ತರಕಾರಿಗಳಿಂದ ತಯಾರಿಸಿದ ವಿವಿಧ ಖಾದ್ಯಗಳನ್ನು ದೇವಿಗೆ ನೈವೇದ್ಯ ಮಾಡುತ್ತಾ ರೆ. ತರಕಾರಿ ಹಾಗೂ ಹಣ್ಣುಗಳ ಹಾರಗಳನ್ನು ಹಾಕಲಾಗುತ್ತದೆ. ಸಂಜೆ “ಹರಿದ್ರಾ”
ಪುಷ್ಕರಣಿಯಲ್ಲಿ ದೇವಿಗೆ ತೆಪ್ಪೋತ್ಸವ ಮಾಡುತ್ತಾರೆ. ಈ ಸಮಯದಲ್ಲಿ ದೇವಿಯ ಆಶೀರ್ವಾದ ಪಡೆಯಲು, ಮಕ್ಕಳಿಗಾಗಿ ಹರಕೆ ಮಾಡಿಕೊಂಡವರು ಬಾಳೆ ದಿಂಡಿನ ಲ್ಲಿ ತಯಾರಿಸಿದ ತೆಪ್ಪದಲ್ಲಿ ನವಜಾತ ಶಿಶುಗಳನ್ನು ಮಲಗಿಸಿ ಕಲ್ಯಾಣಿ ಸುತ್ತ 3 ಪ್ರದಕ್ಷಣೆ ಮಾಡಿಸುತ್ತಾರೆ. ಬನಶಂಕರಿ ದೇವಿಗೆ ಬೇಡಿಕೊಂಡರೆ ತಮ್ಮೆಲ್ಲ ಅಪೇಕ್ಷೆಗ ಳು ನೆರವೇರುತ್ತದೆ ಎಂದು ಭಕ್ತರು ನಂಬಿದ್ದಾರೆ. ನವರಾತ್ರಿಯ 9 ದಿನಗಳು ದೇವಿಗೆ ವಿಶೇಷ ಅಲಂಕಾರ ಮತ್ತು ಪೂಜೆ, ಹಾಗೂ ಉತ್ಸವ ನಡೆಸುತ್ತಾರೆ .ಶುಕ್ರವಾರ – ಮಂಗಳವಾರ ಹುಣ್ಣಿಮೆ ಹಾಗೂ ತದಿಗೆ- ಅಷ್ಟಮಿ- ನವಮಿ, ದಿನಗಳಲ್ಲಿ ವಿಶೇಷ ಅಲಂಕಾರ ಪೂಜೆಗಳು ಇರುತ್ತದೆ.

ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564

ಕಗ್ಗಾಡಿನ ಅರಣ್ಯದಲ್ಲೂ, ಕತ್ತಲೆಯ ಮಧ್ಯೆಯೂ, ದೇವಿಯ ಶಕ್ತಿ ಸದಾ ಕಾಪಾಡುತ್ತದೆ. ದುರ್ಗಮಾಸುರನ ಸಂಹಾರದಿಂದ, ಜನರ ರಕ್ಷಣೆಗೂ, ಶಾಕಾಂಬರಿಯಾಗಿ ಜನರ ಹಸಿವು ನೀಗಿಸುವ ತನಕ, ತಾಯಿ ಯಾವ ರೂಪದಲ್ಲಾದರೂ ತನ್ನ ಮಕ್ಕಳನ್ನು ಕೈಬಿಡದೆ ಕಾಪಾಡುತ್ತಾಳೆ. ಮನುಷ್ಯನ ಜೀವನದಲ್ಲಿ ಸಂಕಷ್ಟ–ಕ್ಲೇಶಗಳು ಬಂದರೂ ಭಯಪಡಬಾರದು. ಸತ್ಯ–ಧರ್ಮ –ನಂಬಿಕೆಗಳೊಂದಿಗೆ ನಡೆದು, ದೇವಿಯ ಆಶ್ರಯವನ್ನು ಬೇಡಿದವರು ತಪ್ಪದೇ ರಕ್ಷಣೆ ಪಡೆಯುತ್ತಾರೆ. ಬನಶಂಕರಿಯ ಕರೆ ಒಂದೇ— ಅದು
“ಭಕ್ತರ ಹೃದಯದಲ್ಲಿ ನಂಬಿಕೆ ಇದ್ದರೆ, ಅವರ ಜೊತೆಯಲ್ಲಿ ದೇವಿ ಇರುತ್ತಾಳೆ.”

ಶ್ರೀ ಶ್ರೀ ವಲ್ಲಭಸೋದರೀ ಶ್ರಿತಜನಸಿದ್ಧಾಯಿನೀ
ಶ್ರೀಮತೀ ಶ್ರೀಕಂಠಾರ್ಧಶರೀರಗಾ
ಶೃತಿಲಸನ್ಮಾಣಿಕ್ಯ ತಾಟಕಂಕಾ!
ಶ್ರೀ ಚಕ್ರಾಂತರವಾಸಿನೀ ಶೃತಿಶಿರ:
ಸಿದ್ದಾಂತಮಾರ್ಗಪ್ರಿಯಾ
ಶ್ರೀವಾಣೀ ಗಿರಿಜಾತ್ಮಿಕಾ ಭಗವತೀ
ಶಾಕಂಭರೀ ಪಾತು ಮಾಂ !!

Source: If there is faith in the hearts of devotees, the Goddess will be with them..What is the significance of Badami Banashankari Devi..?
Via: If there is faith in the hearts of devotees, the Goddess will be with them..What is the significance of Badami Banashankari Devi..?
Tags: #Astrological prediction#astrology#kanndaastro#saakshatvkannadanewskarnatakamangaluru
ShareTweetSendShare
Join us on:

Related Posts

Reliance Jio empowers schools in Karnataka with future AI training

ಕರ್ನಾಟಕದ ಶಾಲೆಗಳಿಗೆ ರಿಲಯನ್ಸ್ ಜಿಯೋದಿಂದ ಭವಿಷ್ಯದ ಎಐ ತರಬೇತಿ ಸಬಲೀಕರಣ

by admin
January 30, 2026
0

 ಸುಧಾರಿತ ಕೃತಕ ಬುದ್ಧಿಮತ್ತೆಯನ್ನು (ಎಐ- ಆರ್ಟಿಫಿಷಿಯಲ್ ಇಂಟೆಲೆಜೆನ್ಸ್) ಎಲ್ಲರಿಗೂ ಲಭ್ಯ ಆಗುವಂತೆ ಮಾಡುವ ತನ್ನ ಬದ್ಧತೆಯನ್ನು ರಿಲಯನ್ಸ್ ಜಿಯೋ ಮತ್ತಷ್ಟು ಬಲಪಡಿಸುತ್ತಿದೆ. ಈ ಉದ್ದೇಶದ್ದೇ ಭಾಗವಾಗಿ, ಜಿಯೋ ಕರ್ನಾಟಕದಾದ್ಯಂತ ಸಮಗ್ರ ಎಐ ಶಿಕ್ಷಣ ಅಭಿಯಾನ ಪ್ರಾರಂಭಿಸಿದೆ. ಡಿಜಿಟಲ್ ಒಳಗೊಳ್ಳುವಿಕೆ ಬಲಪಡಿಸುವ ಹಾಗೂ ರಾಜ್ಯದ ಶಾಲೆ ಮತ್ತು ಕಾಲೇಜುಗಳ ಜೊತೆಗೆ ಸಂಪರ್ಕವನ್ನು ಸಾಧಿಸಿ, 'ಜಿಯೋ ಎಐ ಕ್ಲಾಸ್‌ರೂಮ್' (Jio AI Classroom) ಉಪಕ್ರಮದ ಮೂಲಕ ಪ್ರಾಯೋಗಿಕ ಎಐ ತರಬೇತಿಯನ್ನು ನೀಡುವ ಗುರಿಯನ್ನು ಈ ಅಭಿಯಾನ ಹೊಂದಿದೆ.  ಭಾರತದಾದ್ಯಂತ ಇರುವ ಶಾಲೆಗಳು ಎಐ ತಂತ್ರಜ್ಞಾನವನ್ನು ತರಗತಿಯ ಕಲಿಕೆಯಲ್ಲಿ ವೇಗವಾಗಿ ಅಳವಡಿಸಿಕೊಳ್ಳುತ್ತಾ ಇವೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಭವಿಷ್ಯಕ್ಕಾಗಿ ಸಿದ್ಧರಾಗುವ ರೀತಿಯಲ್ಲಿ ಶಿಕ್ಷಣದ ಸ್ವರೂಪದಲ್ಲಿ ಗಮನಾರ್ಹ ಬದಲಾವಣೆಗೆ ಸಾಕ್ಷಿ ಆಗುತ್ತಿದೆ. ಜಿಯೋ ಎಐ ಕ್ಲಾಸ್‌ರೂಮ್ ಮೂಲಕ ಶಿಕ್ಷಣ ಸಂಸ್ಥೆಗಳು ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಅಗತ್ಯವಾದ ಎಐ ಕೌಶಲಗಳನ್ನು ಒದಗಿಸುತ್ತಿದ್ದು, ವಿದ್ಯಾರ್ಥಿಗಳಿಗಾಗಿ ನಿಜವಾದ 'ಎಐ-ರೆಡಿ' (AI-Ready) ಶಾಲೆಗಳನ್ನು ಸಜ್ಜುಗೊಳಿಸುತ್ತಿದೆ.  ಈ ಅಭಿಯಾನವು ಆರಂಭಿಕ ಹಂತದಲ್ಲೇ ಭರ್ಜರಿ ಯಶಸ್ಸನ್ನು ಕಂಡಿದ್ದು, ಕರ್ನಾಟಕದಾದ್ಯಂತ 1000ಕ್ಕೂ ಹೆಚ್ಚು ಶಾಲೆಗಳನ್ನು ತಲುಪಿದೆ. ಜಿಯೋದ ಹಿರಿಯ ಕಾರ್ಯನಿರ್ವಾಹಕರು ನಡೆಸಿಕೊಡುತ್ತಿರುವ ಈ ವಿಶೇಷ ತರಬೇತಿ ಅವಧಿಗಳಿಗಾಗಿ 10,000ಕ್ಕೂ ಹೆಚ್ಚು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.  ಯುವಜನತೆಯ ಕೌಶಲ ಅಭಿವೃದ್ಧಿಗೆ ಪೂರಕವಾಗಿ, ಕಂಪನಿಯು ನಾಲ್ಕು ವಾರಗಳ ಉಚಿತ ಆನ್‌ಲೈನ್ ಸರ್ಟಿಫಿಕೇಷನ್ ಕಾರ್ಯಕ್ರಮವಾದ 'ಜಿಯೋ ಎಐ ಕ್ಲಾಸ್‌ರೂಮ್' ಅನ್ನು ಪರಿಚಯಿಸಿದೆ. ಈ ಕಾರ್ಯಕ್ರಮವು ವಿಡಿಯೋ ಉಪನ್ಯಾಸಗಳು, ಪಿಡಿಎಫ್ ಅಧ್ಯಯನ ಸಾಮಗ್ರಿಗಳು, ರೆಫರೆನ್ಸ್ ವಿಡಿಯೊಗಳು ಮತ್ತು ಪ್ರತಿ ಮಾಡ್ಯೂಲ್‌ನ ನಂತರ ಸಂವಾದಾತ್ಮಕ ರಸಪ್ರಶ್ನೆಗಳು ಹಾಗೂ ಅಸೈನ್‌ಮೆಂಟ್‌ಗಳನ್ನು ಒಳಗೊಂಡಿರುವ ನಾಲ್ಕು ಹಂತದ ಸಮಗ್ರ ಪಠ್ಯಕ್ರಮವನ್ನು ನೀಡುತ್ತದೆ.  ಎಲ್ಲ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ ಭಾಗವಹಿಸುವವರಿಗೆ 'ಕಂಪ್ಲೀಷನ್ ಬ್ಯಾಡ್ಜ್' ನೀಡಲಾಗುತ್ತದೆ. ಜಿಯೋ ಪಿಸಿ (JioPC) ಮೂಲಕ ಈ ಕಾರ್ಯಕ್ರಮವನ್ನು ಪಡೆಯುವ ಕಲಿಯುವವರು ಜಿಯೋ ಇನ್‌ಸ್ಟಿಟ್ಯೂಟ್ ಪ್ರಮಾಣಪತ್ರವನ್ನು ಸಹ ಪಡೆಯಲಿದ್ದಾರೆ. ಇದು ಅವರ ಎಐ ಪರಿಕಲ್ಪನೆಯ ತಿಳಿವಳಿಕೆ ಮತ್ತು ಅಸೈನ್‌ಮೆಂಟ್‌ಗಳ ಮೂಲಕ ಪಡೆದ ಪ್ರಾಯೋಗಿಕ ಜ್ಞಾನವನ್ನು ದೃಢೀಕರಿಸುತ್ತದೆ. ಈ ವ್ಯವಸ್ಥಿತ ಕೋರ್ಸ್ ಅನ್ನು ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಮೂಲಕ ಕಲಿಯುವವರಿಗೆ ತಮ್ಮದೇ ಆದ ವೇಗದಲ್ಲಿ ಕಲಿಯಲು ಮತ್ತು ಎಐ ತಂತ್ರಜ್ಞಾನಗಳ ಪ್ರಾಯೋಗಿಕ ಅನುಭವ ಪಡೆಯಲು ವಿನ್ಯಾಸ ಮಾಡಲಾಗಿದೆ.   ಈ ಡಿಜಿಟಲ್ ಸಬಲೀಕರಣ ಅಭಿವೃದ್ಧಿಯ ಮುಖ್ಯವಾದ ಅಂಶ ಏನೆಂದರೆ, ಯಾವುದೇ ವೆಚ್ಚವಿಲ್ಲದೆ ಬಳಕೆದಾರರಿಗೆ ಪ್ರೀಮಿಯಂ ತಂತ್ರಜ್ಞಾನವನ್ನು ಒದಗಿಸುವುದು. ಜಿಯೋ ತನ್ನ ಅನ್‌ಲಿಮಿಟೆಡ್ 5ಜಿ ಚಂದಾದಾರರಿಗೆ ₹35,100 ಮೌಲ್ಯದ 18 ತಿಂಗಳ 'ಗೂಗಲ್ ಜೆಮಿನಿ ಪ್ರೊ' (Google Gemini Pro) ಪ್ಲಾನ್ ಅನ್ನು ಉಚಿತವಾಗಿ ನೀಡುತ್ತಿದೆ. ಬಳಕೆದಾರರು ಇದನ್ನು ನೇರವಾಗಿ ಮೈಜಿಯೋ (MyJio) ಆಪ್ ಮೂಲಕ ಸಕ್ರಿಯಗೊಳಿಸಬಹುದು. ಇದು ಅತ್ಯಾಧುನಿಕ ಜೆಮಿನಿ 3 ಪ್ರೊ ಮಾಡೆಲ್ ಮತ್ತು ಉನ್ನತ ಮಟ್ಟದ ಸೃಜನಶೀಲ ಸಾಧನಗಳಿಗೆ ಸಂಪರ್ಕವನ್ನು ನೀಡುತ್ತದೆ. ಇದರಲ್ಲಿ ಎಐ-ಚಾಲಿತ ಚಿತ್ರ ರಚನೆಗಾಗಿ 'ನ್ಯಾನೋ ಬನಾನಾ ಪ್ರೊ' (Nano Banana Pro) ಮತ್ತು ಸುಧಾರಿತ ವಿಡಿಯೋ ನಿರ್ಮಾಣಕ್ಕಾಗಿ 'ವಿಯೋ 3.1' (Veo 3.1) ಸೇರಿವೆ. ಈ ಪ್ಲಾನ್ ಶೈಕ್ಷಣಿಕ ಸಂಶೋಧನಾ ಸಾಧನವಾದ 'ನೋಟ್‌ಬುಕ್ ಎಲ್‌ಎಂ'...

If you do this remedy with turmeric and ghee on Friday, health and financial problems will definitely go away.

ಶುಕ್ರವಾರದಂದು ಅರಿಶಿಣ ಹಾಗೂ ತುಪ್ಪದಿಂದ ಈ ಉಪಾಯವನ್ನು ಮಾಡಿದರೆ ಆರೋಗ್ಯ ಸಮಸ್ಯೆ, ಹಣಕಾಸಿನ ಸಮಸ್ಯೆ ದೂರವಾಗುವುದು ನಿಶ್ಚಿತ..

by admin
January 30, 2026
0

ಮನೆಯ ಪ್ರತಿ ಕಷ್ಟಗಳು ದೂರವಾಗಬೇಕು ಎಂದರೆ ಅರಿಶಿನದಿಂದ ಈ ಚಿಕ್ಕ ಉಪಾಯವನ್ನು ಮಾಡಿ ಮನೆಯ ಯಜಮಾನಿ ಅರಿಶಿನ ಹಾಗು ತುಪ್ಪದಿಂದ ಈ ಚಿಕ್ಕ ಉಪಾಯವನ್ನು ಮಾಡಿದರೆ ಲಕ್ಷ್ಮಿ...

Inderjit Singh Bindra: The bold administrator who changed the face of Indian cricket..!

ಇಂದರ್‌ಜಿತ್ ಸಿಂಗ್ ಬಿಂದ್ರಾ : ಭಾರತೀಯ ಕ್ರಿಕೆಟ್‌ನ ಚಿತ್ರಣ ಬದಲಾಯಿಸಿದ ದಿಟ್ಟ ಆಡಳಿತಗಾರ..!

by admin
January 29, 2026
0

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅರ್ಥಾತ್ ಬಿಸಿಸಿಐ.. ಇವತ್ತು ವಿಶ್ವ ಕ್ರಿಕೆಟ್‍ನ ಕುಬೇರ. ಕೈ ಬೆರಳಿನಲ್ಲಿ ವಿಶ್ವ ಕ್ರಿಕೆಟ್ ಅನ್ನು ಆಳುತ್ತಿರುವ ಬಿಸಿಸಿಐ ಇಷ್ಟೊಂದು ಶ್ರೀಮಂತಗೊಳ್ಳಲು ಪ್ರಮುಖ...

If you regularly chant these 10 mantras of Lord Sri Hari on Ekadashi, your life will change within 24 hours due to its effective influence..!

ಏಕಾದಶಿಯಂದು ಶ್ರೀಹರಿಯ ಈ 10 ಮಂತ್ರಗಳನ್ನು ನಿಯಮಿತವಾಗಿ ಪಠಿಸಿದರೆ 24 ಗಂಟೆಯಲ್ಲಿ ಇದರ ಪರಿಣಾಮಕಾರಿ ಪ್ರಭಾವದಿಂದ ಜೀವನವೇ ಬದಲಾಗುತ್ತದೆ..!

by admin
January 29, 2026
0

ಭಗವಾನ್‌ ವಿಷ್ಣುವಿನ ಈ 10 ಮಂತ್ರಗಳನ್ನು ಯಾರು ನಿಯಮಿತವಾಗಿ ಪಠಿಸುತ್ತಾರೋ ಅವರು ತೊಂದರೆಗಳಿಂದ ಮುಕ್ತಿ ಹೊಂದಿ, ಸಂಪತ್ತು ಮತ್ತು ಅದೃಷ್ಟವನ್ನು ಪಡೆದುಕೊಳ್ಳುತ್ತಾರೆ. ಶ್ರೀಹರಿಯ ಆ 10 ಶಕ್ತಿಶಾಲಿ...

If there are photos of ancestors in this direction, remove them immediately, otherwise you will definitely get Pitru Dosha.

ಈ ದಿಕ್ಕಿನಲ್ಲಿ ಪೂರ್ವಜರು ಫೋಟೋ ಇದ್ದರೆ ತಕ್ಷಣ ತೆಗೆದುಹಾಕಿ, ಇಲ್ಲವಾದರೆ ಪಿತೃ ದೋಷ ಅಂಟುವುದು ಖಚಿತ

by admin
January 28, 2026
0

ಶ್ರೀಕೃಷ್ಣನ ಪ್ರಕಾರ ಯಾರಿಗೆ ಪಿತೃಗಳ ಆಶೀರ್ವಾದ ದೊರೆಯುತ್ತದೆಯೋ ಅವರಿಗೆ ಜೀವನದಲ್ಲಿ ಉನ್ನತಿ ಎಂಬುದು ದೊರೆಯುತ್ತದೆ. ಮನುಷ್ಯರು ಪಿತೃಗಳ ನೆನಪಿಗೋಸ್ಕರ ಅವರ ಫೋಟೋಗಳನ್ನು ಗೋಡೆಯ ಮೇಲೆ ಹಾಕುತ್ತಾರೆ. ಆದರೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram