ಶ್ರೀ ಸೂಕ್ತಿ: -ಮುತೈದೆಯರು ಅನುಸರಿಸಬೇಕಾದದ್ದು ಧರ್ಮಶಾಸ್ತ್ರ –
೧] ಸುಮಂಗಲಿಯರು ಬೈತಲೆಯಲ್ಲಿ ಯಾವಾಗಲೂ ಕುಂಕುಮ ಇರದೇ ಇರಬಾರದು.
೨] ಎರಡು ಕೈಗಳಿಂದಲೂ ತಲೆಯನ್ನು ಕೆರೆದುಕೊಳ್ಳಬಾರದು,
೩] ಯಾವುದೇ ಕಾರಣಕ್ಕೂ ಸಂಧ್ಯಾ ಕಾಲದಲ್ಲಿ ಕಣ್ಣಲ್ಲಿ ನೀರು ಹಾಕಬಾರದು.
೪] ಮನೆಗೆ ಬಂದ ಹೆಂಗಸರಿಗೆ ಹರಿಶಿನ, ಕುಂಕುಮ, ಹೂಗಳನ್ನು ಕೊಟ್ಟೆ ಕಳಿಸಬೇಕು.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ಅನುಭವಿಕ ಶ್ರೇಷ್ಠ ವಿದ್ಯೆಗಳನ್ನು ಬೋಧಿಸುವ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
೫] ಗರ್ಭಿಣಿ ಸ್ತ್ರೀಯರು ತೆಂಗಿನ ಕಾಯಿ ಮತ್ತು ಕುಂಬಳ ಕಾಯಿ ಹೊಡೆಯಕೂಡದು ಮತ್ತು ಹೊಡೆವ ಜಾಗದಲ್ಲೂ ಇರಕೂಡದು.
೬] ಗರ್ಭಿಣಿ ಸ್ತ್ರೀಯರು ನಿಂಬೆಹಣ್ಣನ್ನು ಕೊಯ್ದು ಬಾರದು
೭] ಸೂರ್ಯೋದಯಕ್ಕೆ ಮುಂಚೆ ಬೀದೀ ಬಾಗಲಿಗೆ ನೀರು ಹಾಕಿ ರಂಗೋಲಿ ಇಡಬೇಕು. ಇದನ್ನು ಮನೆಯವರೇ ಮಾಡಬೇಕು. ಲಕ್ಷ್ಮಿ ಒಳಗೆ ಬರಲು ಇದು ಚಿಹ್ನೆ.
೮] ಕೈಯಲ್ಲಿ ಯಾವಾಗಲೂ ಉಪ್ಪು,ಪಲ್ಯಗಳನ್ನು ಬಡಿಸಬಾರದು.
೯] ಮನೆಯಲ್ಲಿ ಏನಾದರೂ ಇಲ್ಲದಿದ್ದಲ್ಲಿ, ತುಂಬಿದೆ ಎಂದು ಹೇಳಬೇಕು. ಇಲ್ಲ ಎಂದು ಹೇಳಬಾರದು.
೧೦) ದಿಂಬಿನ ಮೇಲೆ ಕೂರಬಾರದು.
೧೧) ಮನೆಯಿಂದ ಹೊರಗೆ ಹೋಗುವಾಗ ಹೋಗಿಬರುತ್ತೇನೆ ಎಂದು ಹೇಳಬೇಕು.
೧೨) ಹೊಸ ಬಟ್ಟೆಗಳನ್ನು ಧರಿಸುವ ಮೊದಲು ಅದಕ್ಕೆ ಸ್ವಲ್ಪ ಅರಿಶಿಣವನ್ನು ಯಾವುದಾದರೂ ಒಂದು ಮೂಲೆಯಲ್ಲಿ ಹಚ್ಚಬೇಕು.
೧೩) ಮನೆಯ ಅಕ್ಕ-ತಂಗಿಯರಿಗೆ ವಷ೯ಕ್ಕೊಮ್ಮೆಯಾದರೂ ತವರಿಗೆ ಕರೆಸಿ ಅರಿಸಿನ ಕುಂಕುಮ. ಫಲ ತಾಂಬೂಲದ ಜೊತೆಗೆ ಕೈಲಾದ ಹಣ ಅಥವಾ ಒಡವೆಗಳನ್ನು ಕೊಟ್ಟು, ಹರಸಿದರೆ ಮನೆತನ ತುಂಬ ಎತ್ತರಕ್ಕೆ ಬೆಳೆಯುತ್ತದೆ.
೧೪) ಒಬ್ಬರು ಧರಿಸಿದ ಹೂವನ್ನು ಇನ್ನೊಬ್ಬರು ಧರಿಸಬಾರದು. ಆದರೆ ಇತ್ತೀಚಿನ ದಿನಗಳಲ್ಲಿ ಈ ಕೆಲಸ ಬಹಳಷ್ಟು ಕಡೆ ಸಹಜವಾಗಿದೆ.
೧೫) ಕಪ್ಪು ವರ್ಣದ ಬಟ್ಟೆಗಳನ್ನು ಧರಿಸಬೇಡಿ.
೧೬] ಉಪ್ಪು, ಹುಣಸೆಹಣ್ಣು ಇವುಗಳನ್ನು ಯಾರಿಗೆ ಕೊಟ್ಟರೂ ಕೈಗೆ ಕೊಡಬಾರದು. ಕೆಳಗೆ ಇಡಿ ಅವರೇ ತೆಗೆದುಕೊಳ್ಳುತ್ತಾರೆ.
೧೭) ಪ್ರತಿನಿತ್ಯ ಊಟಕ್ಕೂ ಮುನ್ನ ಕಾಗೆಗೆ ಅನ್ನ ಇಡಿ. ಕಾಗೆಗೆ ದನಗಳಿಗೆ ನಾವು ಊಟ ಮಾಡುವ ಮುನ್ನ, ನಾಯಿ, ಬೆಕ್ಕಿಗೆ ಊಟ ಮಾಡಿದ ಬಳಿಕ ಅನ್ನ ಇಡಿ.
೧೮) ಒಡೆದ ತೆಂಗಿನ ಕಾಯಿ ನೀಡುವಾಗ ಮೂರು ಕಣ್ಣು ಇರುವ ಭಾಗವನ್ನು ನೀವು ಇಟ್ಟುಕೊಂಡು ಉಳಿದ ಭಾಗವನ್ನು ಇತರರಿಗೆ ಕೊಡಬೇಕು.
೧೯) ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳುವುದು, ಕಾಲು ಅಲುಗಾಡಿಸುತ್ತಾ ಕೂರುವುದು, ಒಂಟಿಕಾಲಿನಲ್ಲಿ ನಿಲ್ಲುವುದು ಮಾಡಬಾರದು. ಇದರಿಂದ ದರಿದ್ರ ಉಂಟಾಗುತ್ತದೆ.
೨೦) ಸುಮಂಗಲಿ ಸ್ತ್ರೀಯರು ಮುನಿಸಿಕೊಂಡು ರಾತ್ರಿ ಹೊತ್ತು ಊಟ ಮಾಡದೆ ಮಲಗಬಾರದು.
೨೧) ಹೂಗಳನ್ನು ಬಾಗಿಲ ಬಳಿ ಮಾರಾಟ ಮಾಡಲು ಬಂದಾಗ ಬೇಡ ಎನ್ನಬಾರದು. ಅದಕ್ಕೆ ಬದಲಾಗಿ ನಾಳೆ ತೆಗೆದುಕೊಳ್ಳುತ್ತೇನೆ ಎಂದು ಹೇಳಬೇಕು.
೨೨) ಯಾವಾಗಲೂ ನಮ್ಮ ಬಾಯಲ್ಲಿ ಪೀಡೆ, ದರಿದ್ರ, ಶನಿ, ಕಷ್ಟ ಎಂಬ ಪದಗಳನ್ನು ಜಾಸ್ತಿ ಉಪಯೋಗಿಸಬಾರದು.
೨೩] ಮನೆಯಲ್ಲಿ ಧೂಳು, ಕಸ, ಜೇಡರ ಬಲೆ ಕಟ್ಟುವುದು ದರಿದ್ರ. ಹತ್ತು ದಿನಗಳಿಗೆ ಒಮ್ಮೆ ಮಂಗಳ ಶುಕ್ರವಾರ ಅಲ್ಲದೆ ಬೇರೆ ದಿನಗಳಲ್ಲಿ ಧೂಳು, ಗೂಡುಗಳನ್ನು ತೆಗೆದು ಸ್ವಚ್ಛಗೊಳಿಸಿಕೊಳ್ಳಬೇಕು
೨೪) ಶ್ರಾದ್ಧ ದಿನದಂದು ಮನೆಯ ಮುಂದೆ ರಂಗೋಲಿ ಹಾಕಬಾರದು.
೨೫) ದಿಂಬಿನ ಕವರ್, ಬೆಡ್ ಶೀಟ್ಗಳನ್ನು ಆಗಾಗ ಒಗೆಯುತ್ತಿರಬೇಕು. ಇವುಗಳಲ್ಲಿ ನಮಗೆ ಗೊತ್ತಿಲ್ಲದ ಸೂಕ್ಷ್ಮ ಕ್ರಿಮಿಗಳು ಸಾಕಷ್ಟು ಇರುತ್ತವೆ. ಇದರಿಂದ ನಮಗೆ ಹಾನಿಯುಂಟಾಗುತ್ತದೆ.
೨೬) ಒಳ್ಳೆಯ ಕೆಲಸಗಳನ್ನು ಶುಕ್ಲಪಕ್ಷದಿಂದ ಅಂದರೆ ಅಮಾವಾಸ್ಯೆಯಿಂದ ಹುಣ್ಣಿಮೆ ತನಕ ಮಾಡಬೇಕು.
೨೭) ಮಹಿಳೆಯರು ಮುಟ್ಟಾದಾಗ ಹೂವನ್ನು ಇಟ್ಟುಕೊಳ್ಳಬಾರದು.
೨೮) ಮಹಿಳೆಯರು ಯಾವಾಗಲೂ ಕೂದಲು ಬಿಟ್ಟುಕೊಂಡು ಇರಬಾರದು. ಇದು ಜ್ಯೇಷ್ಠಾದೇವಿ ಸ್ವರೂಪ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲು ವಿಘ್ನವಾಗುತ್ತದೆ.
ಸ್ತ್ರೀಯರ ಕೇಶವು ಕೇವಲ ಸೌಂದರ್ಯಕ್ಕಾಗಿ ಅಲ್ಲ
ಹೆಣ್ಣು ಮಕ್ಕಳ ಕೂದಲು ಅತ್ಯಂತ ಪವಿತ್ರ
ಮುತ್ತೈದೆಯರ ಕೂದಲು ಅಮೃತ ಸ್ವರೂಪ.
ಆದ್ದರಿಂದ ಮುತ್ತೈದೆಯರು ಯಾವತ್ತೂ ಕೂದಲು ತೆಗೆಯಬಾರದು.
ಸ್ತ್ರೀಯರ ಕೇಶ ಮಾಂಗಲ್ಯದ್ಯೋತಕವಾದ್ದರಿಂದ ಅದರ ಕರ್ತನ ಗಂಡನಿರುವಷ್ಟು ಸಮಯ ಮಾಡಲೇಬಾರದು.
ಮುತ್ತೈದೆಯರ ತಲೆಯಲ್ಲಿ ಅಮೃತವಿದೆ ಎಂಬುದಕ್ಕೆ ನಾರದಪುರಾಣದಲ್ಲಿ ಒಂದು ಕಥೆಯಿದೆ.
ಒಮ್ಮೆ ದೇವತೆಗಳಿಗೆ ಅಮೃತವು ಸಿಗುವುದಿಲ್ಲ. ಆಗ ದೇವತೆಗಳು ಇಂದ್ರನಲ್ಲಿ ಪ್ರಾರ್ಥಿಸಿದರು.
ಇಂದ್ರನು ಭೂಲೋಕದಲ್ಲಿ ಯಜ್ಞವನ್ನು ಆಚರಿಸುವಾಗ ಬ್ರಾಹ್ಮಣರಿಗೆ ಅವರ ಪತ್ನಿಯರು ಅಗ್ನಿಯನ್ನು ತಂದು ಕೊಡಲಿ. ಆ ಸಂದರ್ಭದಲ್ಲಿ ಅವರ ತಲೆಯಲ್ಲಿ ಅಮೃತವು ಉತ್ಪತ್ತಿಯಾಗಲಿ. ಆ ಅಮೃತವನ್ನು ನೀವು ಸ್ವೀಕರಿಸಿ ಎಂದು ಇಂದ್ರನು ಹೇಳಿದನು.
ಅಂದಿನಿಂದ ಮುತ್ತೈದೆಯರ ತಲೆಯಲ್ಲಿ ಅಮೃತವು ನೆಲೆಯಾಯಿತು.
ಹೆಣ್ಣು ಮಕ್ಕಳ ಕೂದಲಿನಲ್ಲಿ ಗಂಗಾ, ಯಮುನಾ, ಸರಸ್ವತಿ, ಲಕ್ಷ್ಮೀದೇವಿಯರ ಸನ್ನಿಧಾನವಿದೆ. ಕೂದಲನ್ನು ಮೂರುಭಾಗಮಾಡಿ ಜಡೆ ಹೆಣೆಯಬೇಕು. ಆ ಮೂರು ಭಾಗಗಳಲ್ಲಿ ಗಂಗಾ, ಯಮುನಾ, ಸರಸ್ವತಿರು ಇರುತ್ತಾರೆ. ಮಧ್ಯೆ ಬೈತಲೆಯಲ್ಲಿ ಲಕ್ಷ್ಮೀದೇವಿಯ ಸನ್ನಿಧಾನ.
ಆದ್ದರಿಂದ ಸ್ತ್ರೀಯರು ಪ್ರತಿನಿತ್ಯ ತಲೆಗೆ ಸ್ನಾನ ಮಾಡಬಾರದು.
ಶುಕ್ರವಾರ, ಮಂಗಳವಾರ, ಅತ್ತೆ ಮಾವಂದಿರ ಶ್ರಾದ್ಧದಂದು, ಉತ್ಸವದಂದು, ಅಭ್ಯಂಜನ ದಂದು, (ನದೀ ಸ್ನಾನ, ಸಮುದ್ರಸ್ನಾನ) ಮಾತ್ರ ತಲೆ ಸ್ನಾನ ಮಾಡಬೇಕು. ಉಳಿದ ದಿನಗಳಲ್ಲಿ ಕಂಠಪರ್ಯಂತ ಸ್ನಾನ ಮಾತ್ರ.
ಸ್ತ್ರೀಯರ ಕೇಶವು ಕೇವಲ ಸೌಂದರ್ಯಕ್ಕಾಗಿ ಅಲ್ಲ.
ಲೇಖನ:
ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ತಂತ್ರಿ ಜ್ಯೋತಿಷ್ಯಶಾಸ್ತ್ರತಜ್ಞರು 8548998564






