ರಸ್ತೆಬದಿಯಲ್ಲಿ ಭಿಕ್ಷೆ ಬೇಡುತ್ತಿರುವ ಐಐಟಿ-ಕಾನ್ಪುರದ ಹಳೆಯ ವಿದ್ಯಾರ್ಥಿ
ಗ್ವಾಲಿಯರ್, ಡಿಸೆಂಬರ್09: ಐಐಟಿ-ಕಾನ್ಪುರದ ಹಳೆಯ ವಿದ್ಯಾರ್ಥಿ ಎಂದು ಹೇಳಿಕೊಳ್ಳುತ್ತಿರುವ ಹಿರಿಯ ನಾಗರಿಕರೊಬ್ಬರು ಮಧ್ಯಪ್ರದೇಶದ ಬೀದಿಗಳಲ್ಲಿ ಭಿಕ್ಷೆ ಬೇಡುವುದು ಕಂಡುಬಂದಿದೆ.
ಗ್ವಾಲಿಯರ್ ಜಿಲ್ಲೆಯ ರಸ್ತೆಬದಿಯಲ್ಲಿ ಸುರೇಂದ್ರ ವಶಿಷ್ಠ ಎಂದು ಗುರುತಿಸಲ್ಪಟ್ಟ 90 ವರ್ಷದ ವ್ಯಕ್ತಿ ರಸ್ತೆ ಬದಿ ಭಿಕ್ಷೆ ಬೇಡುವ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ.

ವರದಿಯ ಪ್ರಕಾರ, ವೃದ್ಧನನ್ನು ಆಶ್ರಮ ಸ್ವರ್ಗ್ ಸದಾನ್ (ಎಎಸ್ಎಸ್) ಎಂಬ ಸ್ವಯಂ ಸೇವಕ ಸಂಸ್ಥೆಯವರು ರಕ್ಷಿಸಿದ್ದಾರೆ. ಹಿಂದೆ ಮಾಜಿ ಪೊಲೀಸ್ ಅಧಿಕಾರಿಯೊಬ್ಬರು ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದಾಗ ಇದೇ ಸಂಸ್ಥೆಯವರು ರಕ್ಷಿಸಿದ್ದರು.
ನಾವು ಅವರನ್ನು ಬಸ್ ನಿಲ್ದಾಣದ ಬಳಿ ಬಹಳ ಕರುಣಾಜನಕ ಸ್ಥಿತಿಯಲ್ಲಿ ಕಂಡುಕೊಂಡೆವು. ನಾವು ಅವರೊಂದಿಗೆ ಮಾತಾಡಿದಾಗ ಅವರು ಫಾರಿನ್ ಶೈಲಿಯ
ಇಂಗ್ಲಿಷ್ನಲ್ಲಿ ಮಾತನಾಡಿದರು. ಇದರಿಂದ ಅನುಮಾನಗೊಂಡ ನಾವು ಅವರ ಮೂಲ ಪತ್ತೆಗೆ ಮುಂದಾದೆವು.
ನಾವು ಅವರನ್ನು ನಮ್ಮ ಆಶ್ರಮಕ್ಕೆ ಕರೆತಂದೆವು ಮತ್ತು ಅವರ ಸಂಬಂಧಿಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಎಎಸ್ಎಸ್ನ ವಿಕಾಶ್ ಗೋಸ್ವಾನಿ ತಿಳಿಸಿದ್ದಾರೆ..
ವಿಕಾಸ್ ಪ್ರಕಾರ, ಸುರೇಂದ್ರ ಅವರು 1969 ರಲ್ಲಿ ಐಐಟಿ-ಕಾನ್ಪುರದಿಂದ ಮೆಕಾನಿಕಲ್ ಇಂಜಿನಿಯರಿಂಗ್ ಪದವಿ ಮತ್ತು 1972 ರಲ್ಲಿ ಲಕ್ನೋದಿಂದ ಎಲ್ಎಲ್ಎಂ ಪದವಿ ಪಡೆದಿದ್ದಾರೆ. ಅವರ ತಂದೆ ಜೆಸಿ ಗಿರಣಿಗಳಲ್ಲಿ ಸರಬರಾಜುದಾರರಾಗಿದ್ದರು ಮತ್ತು ಅದು 1990 ರ ದಶಕದಲ್ಲಿ ಮುಚ್ಚಲ್ಪಟ್ಟಿತು.

ಈ ಹಿಂದೆ ರಕ್ಷಿಸಲ್ಪಟ್ಟ ಮಾಜಿ ಪೊಲೀಸ್ ಅಧಿಕಾರಿ ಮನೀಶ್ ಮಿಶ್ರಾ ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಉತ್ತಮ ಸ್ಥಿತಿಯಲ್ಲಿದ್ದಾರೆ ಎಂದು ವಿಕಾಸ್ ಹೇಳಿದರು. ಮನೀಶ್ ಒಂದು ಕಾಲದಲ್ಲಿ ರಾಜ್ಯ ಪೊಲೀಸರಲ್ಲಿ ಶಾರ್ಪ್ಶೂಟರ್ ಆಗಿದ್ದರು.
ಅವರು ಮಾನಸಿಕ ಸಮತೋಲನವನ್ನು ಕಳೆದುಕೊಂಡು ಬೀದಿಗಳಲ್ಲಿ ಭಿಕ್ಷೆ ಬೇಡಲು ಪ್ರಾರಂಭಿಸಿದರು. ಮನೀಶ್ ಅವರನ್ನು ಅವರ ಬ್ಯಾಚ್ಮೇಟ್ಗಳಾದ ಈಗ ಅಪರಾಧ ವಿಭಾಗದ ಡಿಎಸ್ಪಿಗಳಾಗಿರುವ ರತ್ನೇಶ್ ಸಿಂಗ್ ತೋಮರ್ ಮತ್ತು ವಿಜಯ್ ಸಿಂಗ್ ಭಡೋರಿಯಾ ಅವರು ರಕ್ಷಿಸಿದ್ದಾರೆ.
ಕೋವಿಡ್ ಕೇರ್ ಸೆಂಟರ್ನಲ್ಲಿ ಪಿಪಿಇ ಕಿಟ್ ಧರಿಸಿ ನಡೆದ ದೇಶದ ಮೊದಲ ಮದುವೆ
ನವೆಂಬರ್ 11 ರಂದು ಕರ್ತವ್ಯದಿಂದ ಮನೆಗೆ ಮರಳುತ್ತಿದ್ದ ಇವರಿಬ್ಬರು ಫುಟ್ಪಾತ್ನಲ್ಲಿದ್ದ ಭಿಕ್ಷುಕನನ್ನು ಗಮನಿಸಿದರು. ಆ ವ್ಯಕ್ತಿಯೊಂದಿಗೆ ಮಾತನಾಡಿದ ನಂತರ ಡಿಎಸ್ಪಿ ರತ್ನೇಶ್ ಸಿಂಗ್ ತೋಮರ್ ಅವರಿಗೆ ಬೂಟುಗಳನ್ನು ನೀಡಿದರು ಮತ್ತು ವಿಜಯ್ ಭಡೋರಿಯಾ ಅವರಿಗೆ ಜಾಕೆಟ್ ನೀಡಿದರು. ಭಿಕ್ಷುಕನು ಭಡೋರಿಯಾ ಅವರನ್ನು ಹೆಸರಿನಿಂದ ಕರೆದಾಗ ಇಬ್ಬರು ಪೊಲೀಸರು ಆಶ್ಚರ್ಯಚಕಿತರಾದರು. ಪೊಲೀಸರು ಆ ವ್ಯಕ್ತಿಯ ಬಗ್ಗೆ ಕೇಳಿದಾಗ, ಭಿಕ್ಷುಕ ತನ್ನನ್ನು ಮನೀಶ್ ಮಿಶ್ರಾ ಎಂದು ಪರಿಚಯಿಸಿಕೊಂಡರು. ಇದರಿಂದ ಆಘಾತಕ್ಕೊಳಗಾದ ಪೊಲೀಸ್ ಅಧಿಕಾರಿಗಳು ಅವರನ್ನು 1999 ರ ಬ್ಯಾಚ್ನ ತಮ್ಮ ಬ್ಯಾಚ್ಮೇಟ್ ಮಿಶ್ರಾ ಎಂದು ಗುರುತಿಸಿದರು.
ತನ್ನ ಹಿರಿಯ ಅಧಿಕಾರಿಗಳಿಗೆ ಯಾವುದೇ ಮಾಹಿತಿ ನೀಡದೆ ಮನೀಶ್ ಮಿಶ್ರಾ ಎರಡು ವರ್ಷಗಳ ಕಾಲ ಕರ್ತವ್ಯಕ್ಕೆ ಗೈರುಹಾಜರಾಗಿದ್ದರಿಂದ ಅವರನ್ನು 2006 ರಲ್ಲಿ ಸೇವೆಯಿಂದ ವಜಾಗೊಳಿಸಲಾಯಿತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv/status/1336360172843749377?s=19
https://twitter.com/SaakshaTv/status/1336360541544058880?s=19







