ನವದೆಹಲಿ: ಆಮ್ ಆದ್ಮಿ ಪಕ್ಷದ ನಾಯಕ, ಮಾಜಿ ಸಚಿವ ಸತ್ಯೇಂದ್ರ ಜೈನ್ ಜೈಲಿನಿಂದ ಹೊರ ಬಂದಿದ್ದಾರೆ.
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ. ಇಂದು ಸಂಜೆ ಅವರು ತಿಹಾರ್ ಜೈಲಿನಿಂದ ಹೊರನಡೆದಿದ್ದಾರೆ. ಜಾಮೀನು ಪಡೆದ ನಂತರ ಸತ್ಯೇಂದ್ರ ಜೈನ್ ಅವರು ನ್ಯಾಯಾಲಯದ ತೀರ್ಪಿಗೆ ಸಂತಸ ವ್ಯಕ್ತಪಡಿಸಿದ್ದು, ಇದು ಸತ್ಯದ ವಿಜಯ, “ಸತ್ಯಮೇವ ಜಯತೆ” ಎಂದಿದ್ದಾರೆ.
ಟ್ರಯಲ್ ನ್ಯಾಯಾಲಯವು ಸತ್ಯೇಂದ್ರ ಜೈನ್ಗೆ ಜಾಮೀನು ನೀಡಿದೆ ಮತ್ತು ವಿಚಾರಣೆಯು ಪ್ರಾರಂಭವಾಗದಿರುವಾಗ ಅನಿರ್ದಿಷ್ಟವಾಗಿ ಜೈಲಿನಲ್ಲಿರಲು ಆರ್ಟಿಕಲ್ 21ರ ಅಡಿಯಲ್ಲಿ ಅವರಿಗೆ ಹಕ್ಕಿದೆ ಎಂದು ಹೇಳಿದೆ.
ಸತ್ಯೇಂದ್ರ ಜೈನ್ ಅವರು ಇತ್ತೀಚಿನ ದಿನಗಳಲ್ಲಿ ವಿವಿಧ ಪ್ರಕರಣಗಳಲ್ಲಿ ಕೋರ್ಟ್ನಿಂದ ಜಾಮೀನು ಪಡೆದ ಮೂರನೇ ಆಮ್ ಆದ್ಮಿ ಪಕ್ಷದ ನಾಯಕರಾಗಿದ್ದಾರೆ. ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕಳೆದ ತಿಂಗಳು ಜಾಮೀನು ನೀಡಲಾಗಿತ್ತು. ದೆಹಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರಿಗೆ ಆಗಸ್ಟ್ನಲ್ಲಿ ಜಾಮೀನು ನೀಡಲಾಗಿತ್ತು.